<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ರಾಮನವಮಿ ಹಿನ್ನೆಲೆ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಟುಂಬ ಸಮೇತರಾಗಿ ಭಕ್ತರು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದ್ದಾರೆ.</p>.<p>ಗ್ರಾಮೀಣ ಪ್ರದೇಶಗಳಲ್ಲಿನ ಹನುಮ ಮಂದಿರಗಳು ಭಾನುವಾರ ಭಕ್ತರ ಪೂಜೆ, ನೈವೇದ್ಯ ಹಾಗೂ ಪ್ರಸಾದ ಸ್ವೀಕಾರದಿಂದ ರಾಮ ನವಮಿಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದವು.</p>.<p class="Subhead">ಬಿಜೆಪಿ ಕಚೇರಿ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಶ್ರೀರಾಮ ನವಮಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನಡೆಸಲಾಯಿತು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು, ರಾಮನು ಪಿತೃವಾಕ್ಯ ಪಾಲನೆ ಸೇರಿದಂತೆ ಜೀವನದ ಎಲ್ಲಾ ಹಂತಗಳಲ್ಲೂ ಆದರ್ಶಗಳನ್ನು ಎತ್ತಿಹಿಡಿದ ಮರ್ಯಾದಾ ಪುರುಷೋತ್ತಮ. ರಾಮನು ಸರ್ವಕಾಲದಲ್ಲಿಯೂ ನಮಗೆ ಆದರ್ಶಪ್ರಾಯ ಎಂದರು.</p>.<p>ಡಾ.ಶರಣಭೂಪಾಲರೆಡ್ಡಿ, ಲಲಿತಾ ಅನಪೂರ, ದೇವೇಂದ್ರನಾಥ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರ, ಸುರೇಶ ಅಂಬಿಗೇರ, ಹಣಮಂತ ಇಟಗಿ, ಮಲ್ಲು ಹೊನಗೇರಾ ಸೇರಿದಂತೆ ಪ್ರಮುಖರು ಇದ್ದರು.</p>.<p class="Subhead">ಬೊರಬಂಡಾ: ಕಲ್ಯಾಣೋತ್ಸವ, ರಥೋತ್ಸವ: ಗುರುಮಠಕಲ್ ತಾಲ್ಲೂಕಿನ ಬೋರಬಂಡಾ ಗ್ರಾಮದ ಹೊರವಲಯದ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾಮನವಮಿ ಆಚರಣೆಗಳು ಸಂಭ್ರಮದಿಂದ ಜರುಗಿದವು.</p>.<p>ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಕೀರ್ತನೆಗಳ ಮೂಲಕ ನವಮಿ ಉತ್ಸವ ಆರಂಭಗೊಂಡಿತು. ನಂತರ ಕಲಬುರಗಿಯ ಶ್ರದ್ಧಾ ಸಂಗೀತ ತಂಡದಿಂದ ಸಂಗೀತ ಸೇವೆ ಮತ್ತು ಭಜನೆಗಳು, ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿದ ನಂತರ ರಥೋತ್ಸವಗಳು ಜರುಗಿದವು.</p>.<p>ವೇದ ಘೋಷಗಳು, ಸಂಗೀತ ವಾದ್ಯಗಳೊಂದಿಗೆ ಸೀತಾ, ರಾಮರ ಕಲ್ಯಾಣೋತ್ಸವ ಹಾಗೂ ಪಟ್ಟಾಭಿರಾಮ ದೇವರ ಪಟ್ಟಾಭಿಷೇಕವನ್ನು ಮಾಡಲಾಯಿತು. ಮಹಾ ಮಂಗಳಾರತಿ ಮಾಡಿದ ನಂತರ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ತೀರ್ಥ-ಪ್ರಸಾದಗಳನ್ನು ವಿತರಿಸಲಾಯಿತು. ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.</p>.<p>ಬೋರಬಂಡಾ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹಾಗೂ ನೆರೆಯ ತೆಲಂಗಾಣದ ಭಕ್ತರು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಮ ನಾಮ ಸ್ಮರಣೆಯೊಡನೆ ನವಮಿಯನ್ನು ಸಂಭ್ರಮಿಸಿದರು.</p>.<p class="Subhead">ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ ,ಪೂಜೆ, ಪಲ್ಲಕಿ ಸೇವೆ ಹಾಗೂ ಕಲ್ಯಾಣೋತ್ಸವಗಳು ಜರುಗಿದವು.</p>.<p>ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಸಹಯೋಗದಲ್ಲಿ ಪಟ್ಟಣದ ಮುಖ್ಯರಸ್ಥೆಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.</p>.<p class="Briefhead">ನಾರಾಯಣಪುರ: ವಿಶೇಷ ಅಭಿಷೇಕ, ಪೂಜೆ</p>.<p>ನಾರಾಯಣಪುರ: ಪಟ್ಟಣದ ಹನುಮ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ರಾಮದೇವರ ತೊಟ್ಟಿಲೋತ್ಸವ ಹಾಗೂ ಆರತಿ ಸೇವೆಗಳ ನಂತರ ಕೋಸಂಬರಿ ಪ್ರಸಾದ, ಪಾನಕ ವಿತರಿಸಿ ಭಕ್ತರು ಸಂಭ್ರಮಿಸಿದರು.</p>.<p>ದೇವಸ್ಥಾನದ ಅರ್ಚಕ ಈರಯ್ಯಸ್ವಾಮಿ ಶ್ರೀರಾಮ ಸೇವೆ ಹಾಗೂ ಆರಾಧನೆಯಿಂದ ಎಲ್ಲವೂ ಮಂಗಲಮಯವಾಗುತ್ತವೆ ಎಂದರು.</p>.<p>ಆನಂದಪ್ಪ ಚೀನಿವಾಲರ, ಸಂಗನಬಸ್ಸು ಚಟ್ಟೇರ, ನರಸಿಂಹ ದೇಸಾಯಿ, ಪಿಡಿಒ ಹಣಮಂತ ಹೆಗ್ಗೂರ, ಮಲ್ಲು ಮಸ್ತೇಕ, ಶಿವಾಜಿ ನಾಯ್ಡು, ಮಲ್ಲು ತಂಗಡಗಿ, ಗಜೇಂದ್ರ, ಸಂಗು ಇದ್ದರು.</p>.<p class="Briefhead">ಸುರಪುರ: ಶ್ರದ್ಧಾ, ಭಕ್ತಿಯ ರಾಮನವಮಿ</p>.<p>ಸುರಪುರ: ‘ಭಗವಂತನ ದಶಾವತಾರಗಳಲ್ಲಿ ತ್ರೇತಾ ಯುಗದ ಶ್ರೀ ರಾಮಚಂದ್ರನ ಅವತಾರ ಪ್ರಮುಖವಾದದ್ದು. ಶ್ರೇಷ್ಠ ಬದುಕು ನಡೆಸಿದ ಶ್ರೀರಾಮ ಮರ್ಯಾದಾ ಪುರುಷೋತ್ತಮ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ’ ಎಂದು ನರಸಿಂಹ ಭಂಡಿ ಹೇಳಿದರು.</p>.<p>ನಗರದ ಪುರಾತನ ರಾಮದೇವರ ಗುಡಿಯಲ್ಲಿ ಭಾನುವಾರ ಶ್ರೀರಾಮ ನವಮಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶ್ರೀರಾಮನ ಆದರ್ಶ ಗುಣಗಳು ನಮಗೆಲ್ಲ ಪ್ರೇರಕವಾದವು. ಅವರ ಜೀವನದ ಒಂದೊಂದು ಘಟನೆಗಳು ನಮಗೆ ಒಂದೊಂದು ಪಾಠ. ಶ್ರೀರಾಮನನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ’<br />ಎಂದರು.</p>.<p>ಬೆಳಿಗ್ಗೆ ಸುಪ್ರಭಾತ, ವಿಶೇಷ ಅಲಂಕಾರ, ಪೂಜೆ ನಡೆಯಿತು. ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯಿಂದ ವಿಶೇಷ ಭಜನೆ ನಡೆಯಿತು.</p>.<p>ಸ್ಥಳೀಯ ಕಲಾವಿದರಾದ ಮೋಹನ ಮಾಳದಕರ, ಪ್ರಾಣೇಶರಾವ ಕುಲಕರ್ಣಿ, ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಮಹಾಂತೇಶ ಶಹಾಪುರಕರ, ರಮೇಶ ಉಳ್ಳೆಸುಗೂರ, ರಾಘವೇಂದ್ರ ಭಕ್ರಿ ಇದ್ದರು.</p>.<p>ಅರ್ಚಕರಾದ ರಾಮಚಂದ್ರ ಪುರೋಹಿತ, ಪ್ರಶಾಂತ ಪುರೋಹಿತ, ಪ್ರಸಾದ, ಪ್ರಮೋದ, ಸಂಪತ್ ಪೂಜಾ ಕೈಂಕರ್ಯ ಕೈಗೊಂಡರು.</p>.<p>ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಪ್ರಸಾದ ವಿತರಿಸಿದರು. ರಾಜಾ ಪಿಡ್ಡನಾಯಕ, ಸಚಿನ್ ನಾಯಕ, ಗುರುನಾಥರಡ್ಡಿ ಶೀಲವಂತ, ರಾಜೇಶಭಟ್ಟ ಕನಕಗಿರಿ, ಗಣಪತರಾವ ಕುಲಕರ್ಣಿ, ವಿನಾಯಕ ಜೋಷಿ, ರಘುಪತಿ ಪುರೋಹಿತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ರಾಮನವಮಿ ಹಿನ್ನೆಲೆ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಟುಂಬ ಸಮೇತರಾಗಿ ಭಕ್ತರು ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದ್ದಾರೆ.</p>.<p>ಗ್ರಾಮೀಣ ಪ್ರದೇಶಗಳಲ್ಲಿನ ಹನುಮ ಮಂದಿರಗಳು ಭಾನುವಾರ ಭಕ್ತರ ಪೂಜೆ, ನೈವೇದ್ಯ ಹಾಗೂ ಪ್ರಸಾದ ಸ್ವೀಕಾರದಿಂದ ರಾಮ ನವಮಿಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದವು.</p>.<p class="Subhead">ಬಿಜೆಪಿ ಕಚೇರಿ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಶ್ರೀರಾಮ ನವಮಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನಡೆಸಲಾಯಿತು.</p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು, ರಾಮನು ಪಿತೃವಾಕ್ಯ ಪಾಲನೆ ಸೇರಿದಂತೆ ಜೀವನದ ಎಲ್ಲಾ ಹಂತಗಳಲ್ಲೂ ಆದರ್ಶಗಳನ್ನು ಎತ್ತಿಹಿಡಿದ ಮರ್ಯಾದಾ ಪುರುಷೋತ್ತಮ. ರಾಮನು ಸರ್ವಕಾಲದಲ್ಲಿಯೂ ನಮಗೆ ಆದರ್ಶಪ್ರಾಯ ಎಂದರು.</p>.<p>ಡಾ.ಶರಣಭೂಪಾಲರೆಡ್ಡಿ, ಲಲಿತಾ ಅನಪೂರ, ದೇವೇಂದ್ರನಾಥ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರ, ಸುರೇಶ ಅಂಬಿಗೇರ, ಹಣಮಂತ ಇಟಗಿ, ಮಲ್ಲು ಹೊನಗೇರಾ ಸೇರಿದಂತೆ ಪ್ರಮುಖರು ಇದ್ದರು.</p>.<p class="Subhead">ಬೊರಬಂಡಾ: ಕಲ್ಯಾಣೋತ್ಸವ, ರಥೋತ್ಸವ: ಗುರುಮಠಕಲ್ ತಾಲ್ಲೂಕಿನ ಬೋರಬಂಡಾ ಗ್ರಾಮದ ಹೊರವಲಯದ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾಮನವಮಿ ಆಚರಣೆಗಳು ಸಂಭ್ರಮದಿಂದ ಜರುಗಿದವು.</p>.<p>ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಕೀರ್ತನೆಗಳ ಮೂಲಕ ನವಮಿ ಉತ್ಸವ ಆರಂಭಗೊಂಡಿತು. ನಂತರ ಕಲಬುರಗಿಯ ಶ್ರದ್ಧಾ ಸಂಗೀತ ತಂಡದಿಂದ ಸಂಗೀತ ಸೇವೆ ಮತ್ತು ಭಜನೆಗಳು, ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿದ ನಂತರ ರಥೋತ್ಸವಗಳು ಜರುಗಿದವು.</p>.<p>ವೇದ ಘೋಷಗಳು, ಸಂಗೀತ ವಾದ್ಯಗಳೊಂದಿಗೆ ಸೀತಾ, ರಾಮರ ಕಲ್ಯಾಣೋತ್ಸವ ಹಾಗೂ ಪಟ್ಟಾಭಿರಾಮ ದೇವರ ಪಟ್ಟಾಭಿಷೇಕವನ್ನು ಮಾಡಲಾಯಿತು. ಮಹಾ ಮಂಗಳಾರತಿ ಮಾಡಿದ ನಂತರ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ತೀರ್ಥ-ಪ್ರಸಾದಗಳನ್ನು ವಿತರಿಸಲಾಯಿತು. ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.</p>.<p>ಬೋರಬಂಡಾ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹಾಗೂ ನೆರೆಯ ತೆಲಂಗಾಣದ ಭಕ್ತರು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಮ ನಾಮ ಸ್ಮರಣೆಯೊಡನೆ ನವಮಿಯನ್ನು ಸಂಭ್ರಮಿಸಿದರು.</p>.<p class="Subhead">ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ ,ಪೂಜೆ, ಪಲ್ಲಕಿ ಸೇವೆ ಹಾಗೂ ಕಲ್ಯಾಣೋತ್ಸವಗಳು ಜರುಗಿದವು.</p>.<p>ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಸಹಯೋಗದಲ್ಲಿ ಪಟ್ಟಣದ ಮುಖ್ಯರಸ್ಥೆಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.</p>.<p class="Briefhead">ನಾರಾಯಣಪುರ: ವಿಶೇಷ ಅಭಿಷೇಕ, ಪೂಜೆ</p>.<p>ನಾರಾಯಣಪುರ: ಪಟ್ಟಣದ ಹನುಮ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ರಾಮದೇವರ ತೊಟ್ಟಿಲೋತ್ಸವ ಹಾಗೂ ಆರತಿ ಸೇವೆಗಳ ನಂತರ ಕೋಸಂಬರಿ ಪ್ರಸಾದ, ಪಾನಕ ವಿತರಿಸಿ ಭಕ್ತರು ಸಂಭ್ರಮಿಸಿದರು.</p>.<p>ದೇವಸ್ಥಾನದ ಅರ್ಚಕ ಈರಯ್ಯಸ್ವಾಮಿ ಶ್ರೀರಾಮ ಸೇವೆ ಹಾಗೂ ಆರಾಧನೆಯಿಂದ ಎಲ್ಲವೂ ಮಂಗಲಮಯವಾಗುತ್ತವೆ ಎಂದರು.</p>.<p>ಆನಂದಪ್ಪ ಚೀನಿವಾಲರ, ಸಂಗನಬಸ್ಸು ಚಟ್ಟೇರ, ನರಸಿಂಹ ದೇಸಾಯಿ, ಪಿಡಿಒ ಹಣಮಂತ ಹೆಗ್ಗೂರ, ಮಲ್ಲು ಮಸ್ತೇಕ, ಶಿವಾಜಿ ನಾಯ್ಡು, ಮಲ್ಲು ತಂಗಡಗಿ, ಗಜೇಂದ್ರ, ಸಂಗು ಇದ್ದರು.</p>.<p class="Briefhead">ಸುರಪುರ: ಶ್ರದ್ಧಾ, ಭಕ್ತಿಯ ರಾಮನವಮಿ</p>.<p>ಸುರಪುರ: ‘ಭಗವಂತನ ದಶಾವತಾರಗಳಲ್ಲಿ ತ್ರೇತಾ ಯುಗದ ಶ್ರೀ ರಾಮಚಂದ್ರನ ಅವತಾರ ಪ್ರಮುಖವಾದದ್ದು. ಶ್ರೇಷ್ಠ ಬದುಕು ನಡೆಸಿದ ಶ್ರೀರಾಮ ಮರ್ಯಾದಾ ಪುರುಷೋತ್ತಮ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ’ ಎಂದು ನರಸಿಂಹ ಭಂಡಿ ಹೇಳಿದರು.</p>.<p>ನಗರದ ಪುರಾತನ ರಾಮದೇವರ ಗುಡಿಯಲ್ಲಿ ಭಾನುವಾರ ಶ್ರೀರಾಮ ನವಮಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶ್ರೀರಾಮನ ಆದರ್ಶ ಗುಣಗಳು ನಮಗೆಲ್ಲ ಪ್ರೇರಕವಾದವು. ಅವರ ಜೀವನದ ಒಂದೊಂದು ಘಟನೆಗಳು ನಮಗೆ ಒಂದೊಂದು ಪಾಠ. ಶ್ರೀರಾಮನನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ’<br />ಎಂದರು.</p>.<p>ಬೆಳಿಗ್ಗೆ ಸುಪ್ರಭಾತ, ವಿಶೇಷ ಅಲಂಕಾರ, ಪೂಜೆ ನಡೆಯಿತು. ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯಿಂದ ವಿಶೇಷ ಭಜನೆ ನಡೆಯಿತು.</p>.<p>ಸ್ಥಳೀಯ ಕಲಾವಿದರಾದ ಮೋಹನ ಮಾಳದಕರ, ಪ್ರಾಣೇಶರಾವ ಕುಲಕರ್ಣಿ, ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಮಹಾಂತೇಶ ಶಹಾಪುರಕರ, ರಮೇಶ ಉಳ್ಳೆಸುಗೂರ, ರಾಘವೇಂದ್ರ ಭಕ್ರಿ ಇದ್ದರು.</p>.<p>ಅರ್ಚಕರಾದ ರಾಮಚಂದ್ರ ಪುರೋಹಿತ, ಪ್ರಶಾಂತ ಪುರೋಹಿತ, ಪ್ರಸಾದ, ಪ್ರಮೋದ, ಸಂಪತ್ ಪೂಜಾ ಕೈಂಕರ್ಯ ಕೈಗೊಂಡರು.</p>.<p>ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ಪ್ರಸಾದ ವಿತರಿಸಿದರು. ರಾಜಾ ಪಿಡ್ಡನಾಯಕ, ಸಚಿನ್ ನಾಯಕ, ಗುರುನಾಥರಡ್ಡಿ ಶೀಲವಂತ, ರಾಜೇಶಭಟ್ಟ ಕನಕಗಿರಿ, ಗಣಪತರಾವ ಕುಲಕರ್ಣಿ, ವಿನಾಯಕ ಜೋಷಿ, ರಘುಪತಿ ಪುರೋಹಿತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>