<p><strong>ಹುಣಸಗಿ</strong>: ತಾಲ್ಲೂಕಿನ ಅರಕೇರಾ.ಜೆ ಗ್ರಾಮವು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿರುವ ಲಿಂಗದಾಕಾರದ ಸಾವಿರ ವರ್ಷಗಳ ಇತಿಹಾಸದ ಸಹಸ್ರ ಲಿಂಗ ದೇವಸ್ಥಾನವು ಭಕ್ತರನ್ನು ಸೆಳೆಯುತ್ತದೆ. ಆದರೆ ಕಳೆದ ವರ್ಷ ದೇವಸ್ಥಾನದ ಮೇಲಿರುವ ಶಿವಲಿಂಗದ ಹುಡೆ ಬಿದ್ದು ಹೋಗಿತ್ತು. ಹೀಗಾಗಿ ಇದಕ್ಕೆ ನೂತನ ಆರ್ಸಿಸಿ ಮೇಲ್ಛಾವಣಿ ನಿರ್ಮಿಸಲಾಗಿದೆ. </p>.<p>‘ಶಿವಲಿಂಗದ ಹುಡೆ ಬಿದ್ದು ಅಲ್ಲಲ್ಲಿ ಕಲ್ಲುಗಳು ಹೊರ ಚಾಚಿದ್ದವು. ಅಲ್ಲದೆ ಮಳೆ ನೀರು ನಿಂತು ದೇವಸ್ಥಾನ ಅಂದಗೆಟ್ಟಿತ್ತು. ಗ್ರಾಮದ ದೇವರ ಭಕ್ತರು ಹಾಗೂ ನಿವೃತ್ತ ಪ್ರಾಚಾರ್ಯರಾದ ಎಸ್.ಎಂ.ಸಾಸನೂರು, ಅನ್ನಪೂರ್ಣ ಸಾಸನೂರು ಅವರ ಸಹಕಾರದಿಂದ ಅಂದಾಜು ₹10 ಲಕ್ಷ ವೆಚ್ಚದಲ್ಲಿ ಮೇಲ್ಛಾವಣಿ, ವಿಶಾಲ ಗ್ರಾನೇಟ್, ಬಣ್ಣ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸದರಿಂದ ದೇವಸ್ಥಾನ ಮತ್ತೆ ಕಳೆ ಕಟ್ಟುವಂತೆ ಮಾಡಿದೆ’ ಎನ್ನುತ್ತಾರೆ ಗ್ರಾಮದ ರುದ್ರಸ್ವಾಮಿ ಸ್ಥಾವರಮಠ, ದೇವೀಂದ್ರ ದೊರಿ ಗಚ್ಚಿಮನಿ, ಗೋಪಾಲ ದೊರಿ ಅಮಲಿಹಾಳ.</p>.<p>ದೇವಸ್ಥಾನದ ವಿಶೇಷತೆ: ದೇಗುಲವು ಪೂರ್ವಾಭಿಮುಖವಾಗಿದ್ದು ತ್ರಿಕೂಟ ದೇಗುಲದಂತಿದೆ. ಪ್ರಧಾನ ಗರ್ಭಗೃಹಲ್ಲಿನ ಬಾಗಿಲವಾಡವು ಪಂಚ ಶಾಖಾಲಂಕೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯನ್ನು ಹೊಂದಿದೆ. ಒಳಭಾಗದಲ್ಲಿ ಮೂರಡಿ ಎತ್ತರದ ಪಾಣಿಪೀಠದ ಮೇಲೆ ಒಂದಡಿ ಶಿವಲಿಂಗವಿದೆ. ಶಿವಲಿಂಗದಲ್ಲಿ ಒಟ್ಟು 20 ಸ್ತರಗಳಲ್ಲಿ (20 ಸಾಲುಗಳು) ಒಂದೊಂದು ಸ್ತರಕ್ಕೆ 50 ಚಿಕ್ಕ ಚಿಕ್ಕ ಶಿವಲಿಂಗಗಳನ್ನು ಕೆತ್ತಿದ್ದಾರೆ. ಕೇವಲ ಒಂದಡಿ ಶಿವಲಿಂಗದಲ್ಲಿ ಸಾವಿರ (ಸಹಸ್ರ) ಶಿವಲಿಂಗಗಳನ್ನು ಕಾಣುತ್ತವೆ.</p>.<p>ಈ ಗುಡಿಯ ಅಂತರಾಳದಲ್ಲಿರುವ ಮಕರ ತೋರಣವು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಹೊಂದಿದ್ದು, ಆಕರ್ಷಕವಾಗಿದೆ. ಬೃಹತ್ತಾದ 12 ಕಂಬಗಳ ಮೇಲೆ ನಿಂತಿರುವ ನವರಂಗದಲ್ಲಿ ನಡುವೆ ವಿಶಾಲವಾದ ರಂಗಮಂಟಪವಿದೆ.</p>.<p>ಗ್ರಾಮದ ಮಧ್ಯದಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ಒಂದೇ ಪೀಠದ ಮೇಲೆ ಸುಮಾರು ನಾಲ್ಕೂವರೆ ಅಡಿ ಎತ್ತರದ ಸ್ಥಾನಕ ಚತುರ್ ಮುಖ ಬ್ರಹ್ಮದ ಮೂರ್ತಿ ಇದ್ದು, ಈ ರೀತಿಯ ಮೂರ್ತಿ ಇರುವದು ದೇಶದಲ್ಲಿಯೇ ವಿರಳ ಎನ್ನುತ್ತಾರೆ ಗ್ರಾಮದ ಶಾಂತಗೌಡ ಹೆಮನೂರು, ಮಹಿಬೂಶಾ ಮಕಾನದಾರ.</p>.<p>ಪ್ರತಿ ವರ್ಷವೂ ಶಿವರಾತ್ರಿಯಂದು ಸಹಸ್ರಲಿಂಗ, ಸಂಗಮೇಶ್ವರ ಹಾಗೂ ಮುನೇಶ್ವರ ದೇವಸ್ಥಾನಗಳಲ್ಲಿ ಸಹಸ್ರ ದೀಪೋತ್ಸವ ಮಾಡಲಾಗುತ್ತದೆ ಎಂದು ಗ್ರಾಮದ ತಿಪ್ಪಣ್ಣ ಪೂಜಾರಿ ರೋಡಲಬಂಡಿ ಹೇಳುತ್ತಾರೆ.</p>.<p>ಆದರೆ ಈ ದೇವಸ್ಥಾನಗಳ ನಿತ್ಯ ಪೂಜೆ ಹಾಗೂ ಸಚ್ಚತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ಯಾವುದೇ ಸಂಭಾವನೆ ಇಲ್ಲ ಎಂದು ಉಮೇಶ ಸ್ಥಾವರಮಠ ಬೇಸರ ವ್ಯಕ್ತಪಡಿಸಿದರು.</p>.<p>ಸರ್ಕಾರ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನದ ಪೂಜೆ ನಿರ್ವಹಿಸುವವರಿಗೆ ಸೂಕ್ತ ಸಂಭಾವನೆ ವ್ಯವಸ್ಥೆ ಮಾಡಲಿ ಎನ್ನುತ್ತಾರೆ ಗ್ರಾಮದ ಅಶೋಕ ಸಾಹು ಲಿಂಗೋಂಡ.</p>.<p><strong>ಕ್ರಿ.ಶ.1033 ರಲ್ಲಿ ನಿರ್ಮಾಣಗೊಂಡ ದೇವಾಲಯ</strong></p><p> ಹುಣಸಗಿ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಅರಕೇರಿ (ಇಂದಿನ ಅರಕೇರಾ. ಜೆ) ಕಲ್ಯಾಣ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲ ಬಿರುದಾಂಕಿತ 2 ನೇ ಜಯಸಿಂಹನ ಕಾಲದ್ದಾಗಿದ್ದು ಇಲ್ಲಿನ ಹೈಹಯ ಮಹಾಮಂಡಳೇಶ್ವರ ಚಂದರಸನ ಹೆಂಡತಿ ಜೋಗಣಬ್ಬರಸಿಯು ಆಲದಕೆರೆಯ (ಅರಕೇರಿ) ಸಹಸ್ರಲಿಂಗ ದೇವಸ್ಥಾನವನ್ನು ಕ್ರಿ.ಶ.1033 ರಲ್ಲಿ ಕಟ್ಟಿಸಿದರೆಂದು ಉಲ್ಲೇಖಿಸಿದೆ ಎಂದು ಹುಣಸಗಿ ಸಂಶೋಧಕರಾದ ಪಾಟೀಲ ಬಸನಗೌಡ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ತಾಲ್ಲೂಕಿನ ಅರಕೇರಾ.ಜೆ ಗ್ರಾಮವು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿರುವ ಲಿಂಗದಾಕಾರದ ಸಾವಿರ ವರ್ಷಗಳ ಇತಿಹಾಸದ ಸಹಸ್ರ ಲಿಂಗ ದೇವಸ್ಥಾನವು ಭಕ್ತರನ್ನು ಸೆಳೆಯುತ್ತದೆ. ಆದರೆ ಕಳೆದ ವರ್ಷ ದೇವಸ್ಥಾನದ ಮೇಲಿರುವ ಶಿವಲಿಂಗದ ಹುಡೆ ಬಿದ್ದು ಹೋಗಿತ್ತು. ಹೀಗಾಗಿ ಇದಕ್ಕೆ ನೂತನ ಆರ್ಸಿಸಿ ಮೇಲ್ಛಾವಣಿ ನಿರ್ಮಿಸಲಾಗಿದೆ. </p>.<p>‘ಶಿವಲಿಂಗದ ಹುಡೆ ಬಿದ್ದು ಅಲ್ಲಲ್ಲಿ ಕಲ್ಲುಗಳು ಹೊರ ಚಾಚಿದ್ದವು. ಅಲ್ಲದೆ ಮಳೆ ನೀರು ನಿಂತು ದೇವಸ್ಥಾನ ಅಂದಗೆಟ್ಟಿತ್ತು. ಗ್ರಾಮದ ದೇವರ ಭಕ್ತರು ಹಾಗೂ ನಿವೃತ್ತ ಪ್ರಾಚಾರ್ಯರಾದ ಎಸ್.ಎಂ.ಸಾಸನೂರು, ಅನ್ನಪೂರ್ಣ ಸಾಸನೂರು ಅವರ ಸಹಕಾರದಿಂದ ಅಂದಾಜು ₹10 ಲಕ್ಷ ವೆಚ್ಚದಲ್ಲಿ ಮೇಲ್ಛಾವಣಿ, ವಿಶಾಲ ಗ್ರಾನೇಟ್, ಬಣ್ಣ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸದರಿಂದ ದೇವಸ್ಥಾನ ಮತ್ತೆ ಕಳೆ ಕಟ್ಟುವಂತೆ ಮಾಡಿದೆ’ ಎನ್ನುತ್ತಾರೆ ಗ್ರಾಮದ ರುದ್ರಸ್ವಾಮಿ ಸ್ಥಾವರಮಠ, ದೇವೀಂದ್ರ ದೊರಿ ಗಚ್ಚಿಮನಿ, ಗೋಪಾಲ ದೊರಿ ಅಮಲಿಹಾಳ.</p>.<p>ದೇವಸ್ಥಾನದ ವಿಶೇಷತೆ: ದೇಗುಲವು ಪೂರ್ವಾಭಿಮುಖವಾಗಿದ್ದು ತ್ರಿಕೂಟ ದೇಗುಲದಂತಿದೆ. ಪ್ರಧಾನ ಗರ್ಭಗೃಹಲ್ಲಿನ ಬಾಗಿಲವಾಡವು ಪಂಚ ಶಾಖಾಲಂಕೃತವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯನ್ನು ಹೊಂದಿದೆ. ಒಳಭಾಗದಲ್ಲಿ ಮೂರಡಿ ಎತ್ತರದ ಪಾಣಿಪೀಠದ ಮೇಲೆ ಒಂದಡಿ ಶಿವಲಿಂಗವಿದೆ. ಶಿವಲಿಂಗದಲ್ಲಿ ಒಟ್ಟು 20 ಸ್ತರಗಳಲ್ಲಿ (20 ಸಾಲುಗಳು) ಒಂದೊಂದು ಸ್ತರಕ್ಕೆ 50 ಚಿಕ್ಕ ಚಿಕ್ಕ ಶಿವಲಿಂಗಗಳನ್ನು ಕೆತ್ತಿದ್ದಾರೆ. ಕೇವಲ ಒಂದಡಿ ಶಿವಲಿಂಗದಲ್ಲಿ ಸಾವಿರ (ಸಹಸ್ರ) ಶಿವಲಿಂಗಗಳನ್ನು ಕಾಣುತ್ತವೆ.</p>.<p>ಈ ಗುಡಿಯ ಅಂತರಾಳದಲ್ಲಿರುವ ಮಕರ ತೋರಣವು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಹೊಂದಿದ್ದು, ಆಕರ್ಷಕವಾಗಿದೆ. ಬೃಹತ್ತಾದ 12 ಕಂಬಗಳ ಮೇಲೆ ನಿಂತಿರುವ ನವರಂಗದಲ್ಲಿ ನಡುವೆ ವಿಶಾಲವಾದ ರಂಗಮಂಟಪವಿದೆ.</p>.<p>ಗ್ರಾಮದ ಮಧ್ಯದಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ಒಂದೇ ಪೀಠದ ಮೇಲೆ ಸುಮಾರು ನಾಲ್ಕೂವರೆ ಅಡಿ ಎತ್ತರದ ಸ್ಥಾನಕ ಚತುರ್ ಮುಖ ಬ್ರಹ್ಮದ ಮೂರ್ತಿ ಇದ್ದು, ಈ ರೀತಿಯ ಮೂರ್ತಿ ಇರುವದು ದೇಶದಲ್ಲಿಯೇ ವಿರಳ ಎನ್ನುತ್ತಾರೆ ಗ್ರಾಮದ ಶಾಂತಗೌಡ ಹೆಮನೂರು, ಮಹಿಬೂಶಾ ಮಕಾನದಾರ.</p>.<p>ಪ್ರತಿ ವರ್ಷವೂ ಶಿವರಾತ್ರಿಯಂದು ಸಹಸ್ರಲಿಂಗ, ಸಂಗಮೇಶ್ವರ ಹಾಗೂ ಮುನೇಶ್ವರ ದೇವಸ್ಥಾನಗಳಲ್ಲಿ ಸಹಸ್ರ ದೀಪೋತ್ಸವ ಮಾಡಲಾಗುತ್ತದೆ ಎಂದು ಗ್ರಾಮದ ತಿಪ್ಪಣ್ಣ ಪೂಜಾರಿ ರೋಡಲಬಂಡಿ ಹೇಳುತ್ತಾರೆ.</p>.<p>ಆದರೆ ಈ ದೇವಸ್ಥಾನಗಳ ನಿತ್ಯ ಪೂಜೆ ಹಾಗೂ ಸಚ್ಚತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ಯಾವುದೇ ಸಂಭಾವನೆ ಇಲ್ಲ ಎಂದು ಉಮೇಶ ಸ್ಥಾವರಮಠ ಬೇಸರ ವ್ಯಕ್ತಪಡಿಸಿದರು.</p>.<p>ಸರ್ಕಾರ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನದ ಪೂಜೆ ನಿರ್ವಹಿಸುವವರಿಗೆ ಸೂಕ್ತ ಸಂಭಾವನೆ ವ್ಯವಸ್ಥೆ ಮಾಡಲಿ ಎನ್ನುತ್ತಾರೆ ಗ್ರಾಮದ ಅಶೋಕ ಸಾಹು ಲಿಂಗೋಂಡ.</p>.<p><strong>ಕ್ರಿ.ಶ.1033 ರಲ್ಲಿ ನಿರ್ಮಾಣಗೊಂಡ ದೇವಾಲಯ</strong></p><p> ಹುಣಸಗಿ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಅರಕೇರಿ (ಇಂದಿನ ಅರಕೇರಾ. ಜೆ) ಕಲ್ಯಾಣ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲ ಬಿರುದಾಂಕಿತ 2 ನೇ ಜಯಸಿಂಹನ ಕಾಲದ್ದಾಗಿದ್ದು ಇಲ್ಲಿನ ಹೈಹಯ ಮಹಾಮಂಡಳೇಶ್ವರ ಚಂದರಸನ ಹೆಂಡತಿ ಜೋಗಣಬ್ಬರಸಿಯು ಆಲದಕೆರೆಯ (ಅರಕೇರಿ) ಸಹಸ್ರಲಿಂಗ ದೇವಸ್ಥಾನವನ್ನು ಕ್ರಿ.ಶ.1033 ರಲ್ಲಿ ಕಟ್ಟಿಸಿದರೆಂದು ಉಲ್ಲೇಖಿಸಿದೆ ಎಂದು ಹುಣಸಗಿ ಸಂಶೋಧಕರಾದ ಪಾಟೀಲ ಬಸನಗೌಡ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>