ವಿಶೇಷಾಂಕ ಇಡೀ ರಾಜ್ಯ ಮಟ್ಟದಲ್ಲಿ ಬಿಡುಗಡೆಯಾಗಿದ್ದರಿಂದ ಉತ್ತರ ಕರ್ನಾಟಕದವರು, ದಕ್ಷಿಣ ಕರ್ನಾಟಕವನ್ನು, ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಹಾಸ್ಯ, ವಿಡಂಬನೆ, ಸಿನಿಮಾ, ಕೋವಿಡ್ ಸಂಕಷ್ಟದ ದಿನಗಳು, ಭೀಮಾ ನದಿ ಬಗ್ಗೆ, ಭಕ್ಷ್ಯಭೋಜನ ಸೇರಿದಂತೆ ಹಲವಾರು ವಿಷಯಗಳನ್ನು ಓದುಗರಿಗೆ ವಿಶೇಷಾಂಕ ಉಣಬಡಿಸಲಿದೆ ಎಂದರು.