<p><strong>ವಡಗೇರಾ</strong>: ಕಳೆದ ವಾರ ಬಂದ ರೋಹಿಣಿ ಮಳೆ ರೈತರ ಮುಖದಲ್ಲಿ ಸಂತಸ ತಂದಿದ್ದು, ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡಲು ಆರಂಭಿಸಿದ್ದಾರೆ.</p>.<p>ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ನೇಗಿಲನ್ನು ಹೊಡೆದು ಜಮೀನಿನಲ್ಲಿ ಇದ್ದ ಕಳೆ, ಕಸಕಟ್ಟಿ ತೆಗೆದು ಜಮೀನು ಹದಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರು.</p>.<p>ಎರೆಮಣ್ಣು ( ಕಪ್ಪುಮಣ್ಣು) ಹೊಂದಿರುವ ಜಮೀನುಗಳಲ್ಲಿ ಜೂನ್ 15, ಕೆಂಪುಮಣ್ಣು ಇರುವ ಜಮೀನುಗಳಲ್ಲಿ ಜುಲೈ ತಿಂಗಳವರೆಗೆ ಬಿತ್ತನೆ ಮಾಡಲು ಅವಕಾಶವಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಕಪ್ಪು ಜಮೀನುಗಳು ಇರುವುದರಿಂದ ಹಾಗೂ ಜಮೀನಿನಲ್ಲಿ ತೇವಾಂಶ ಇರುವುದರಿಂದ ಅನೇಕ ರೈತರು ಬುಧವಾರದಿಂದ ಹತ್ತಿ ಬೀಜಗಳನ್ನು ಬಿತ್ತನೆ ಮಾಡಲು ಆರಂಭಿಸಿದ್ದಾರೆ.</p>.<p>ವಡಗೇರಾ ಭಾಗದಲ್ಲಿ ಸಾಮಾನ್ಯವಾಗಿ ಮೃಗಶೀರದ (ಮಿರಗ್) ನಂತರ ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ ಹಾಗೂ ಹತ್ತಿಯನ್ನು ಬಿತ್ತನೆ ಮಾಡುತ್ತಾರೆ. ಆದರೆ ರೋಹಿಣಿ ಮಳೆ ಸಕಾಲಕ್ಕೆ ಬಂದ ಕಾರಣ ತಾಲ್ಲೂಕಿನ ರೈತರು ಮೃಗಶಿರಕ್ಕಿಂತ ಮುಂಚೆ (ಮುಂಕಟವಾಗಿ) ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ.</p>.<p>ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 26,800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸಕಾಲದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ರೈತರಿಗೆ ಸಲಹೆ ಸೂಚನೆಗಳನ್ನು ಹಾಗೂ ಮಾರ್ಗದರ್ಶನವನ್ನು ಮಾಡುತ್ತ ಇದ್ದರೆ, ಈ ವರ್ಷ ರೈತರು ಹೆಚ್ಚಿನ ಇಳುವರಿ ಪಡೆಯುವುದರ ಜತೆಗೆ ಆರ್ಥಿಕವಾಗಿ ಸದೃಢರಾಗ ಬಲ್ಲರು ಎಂಬುದು ರೈತರ ಒತ್ತಾಸೆ.</p>.<div><blockquote>ರೋಹಿಣಿ ಮಳೆ ಚೆನ್ನಾಗಿ ಸುರಿದಿರುವುದರಿಂದ ಜಮೀನಿನಲ್ಲಿ ಅಗತ್ಯ ತೇವಾಂಶವಿದ್ದು ಸಕಾಲದಲ್ಲಿ ಮಳೆ ಬಂದರೆ ಚೆನ್ನಾಗಿ ಹತ್ತಿ ಬೆಳೆಯ ಇಳುವರಿ ಬರುತ್ತದೆ.</blockquote><span class="attribution">– ಶರಣಪ್ಪ ಜಡಿ, ಪ್ರಗತಿಪರ ರೈತ</span></div>.<p><strong>‘ಕಪ್ಪು ಮಣ್ಣಿನಲ್ಲಿ ಹತ್ತಿ ಬಿತ್ತನೆ ಆರಂಭಿಸಿ’</strong></p><p>‘ಮಳೆ ಉತ್ತಮವಾಗಿ ಸುರಿದಿರುವುದರಿಂದ ಜಮೀನುಗಳಲ್ಲಿ ಅಗತ್ಯ ತೇವಾಂಶ ಇದ್ದು ರೈತರು ಕಪ್ಪು ಮಣ್ಣಿನಲ್ಲಿ ಹತ್ತಿಯನ್ನು ಬಿತ್ತನೆ ಮಾಡಲು ಆರಂಭಿಸಬಹುದು’ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಮೃಗಶಿರಕ್ಕಿಂತ ಮುಂಚೆ ಹತ್ತಿ ಬೀಜಗಳನ್ನು ಜಮೀನುಗಳಲ್ಲಿ ಬಿತ್ತನೆ ಮಾಡಿದರೆ ರೋಗ ರಹಿತ ಬೆಳೆಯನ್ನು ತೆಗೆಯುವುದರ ಜತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿದೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ</strong>: ಕಳೆದ ವಾರ ಬಂದ ರೋಹಿಣಿ ಮಳೆ ರೈತರ ಮುಖದಲ್ಲಿ ಸಂತಸ ತಂದಿದ್ದು, ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡಲು ಆರಂಭಿಸಿದ್ದಾರೆ.</p>.<p>ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳಲ್ಲಿ ಬಂದ ಅಕಾಲಿಕ ಮಳೆಯಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ನೇಗಿಲನ್ನು ಹೊಡೆದು ಜಮೀನಿನಲ್ಲಿ ಇದ್ದ ಕಳೆ, ಕಸಕಟ್ಟಿ ತೆಗೆದು ಜಮೀನು ಹದಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರು.</p>.<p>ಎರೆಮಣ್ಣು ( ಕಪ್ಪುಮಣ್ಣು) ಹೊಂದಿರುವ ಜಮೀನುಗಳಲ್ಲಿ ಜೂನ್ 15, ಕೆಂಪುಮಣ್ಣು ಇರುವ ಜಮೀನುಗಳಲ್ಲಿ ಜುಲೈ ತಿಂಗಳವರೆಗೆ ಬಿತ್ತನೆ ಮಾಡಲು ಅವಕಾಶವಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಹುತೇಕ ಕಪ್ಪು ಜಮೀನುಗಳು ಇರುವುದರಿಂದ ಹಾಗೂ ಜಮೀನಿನಲ್ಲಿ ತೇವಾಂಶ ಇರುವುದರಿಂದ ಅನೇಕ ರೈತರು ಬುಧವಾರದಿಂದ ಹತ್ತಿ ಬೀಜಗಳನ್ನು ಬಿತ್ತನೆ ಮಾಡಲು ಆರಂಭಿಸಿದ್ದಾರೆ.</p>.<p>ವಡಗೇರಾ ಭಾಗದಲ್ಲಿ ಸಾಮಾನ್ಯವಾಗಿ ಮೃಗಶೀರದ (ಮಿರಗ್) ನಂತರ ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ ಹಾಗೂ ಹತ್ತಿಯನ್ನು ಬಿತ್ತನೆ ಮಾಡುತ್ತಾರೆ. ಆದರೆ ರೋಹಿಣಿ ಮಳೆ ಸಕಾಲಕ್ಕೆ ಬಂದ ಕಾರಣ ತಾಲ್ಲೂಕಿನ ರೈತರು ಮೃಗಶಿರಕ್ಕಿಂತ ಮುಂಚೆ (ಮುಂಕಟವಾಗಿ) ಹತ್ತಿ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ.</p>.<p>ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 26,800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸಕಾಲದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ರೈತರಿಗೆ ಸಲಹೆ ಸೂಚನೆಗಳನ್ನು ಹಾಗೂ ಮಾರ್ಗದರ್ಶನವನ್ನು ಮಾಡುತ್ತ ಇದ್ದರೆ, ಈ ವರ್ಷ ರೈತರು ಹೆಚ್ಚಿನ ಇಳುವರಿ ಪಡೆಯುವುದರ ಜತೆಗೆ ಆರ್ಥಿಕವಾಗಿ ಸದೃಢರಾಗ ಬಲ್ಲರು ಎಂಬುದು ರೈತರ ಒತ್ತಾಸೆ.</p>.<div><blockquote>ರೋಹಿಣಿ ಮಳೆ ಚೆನ್ನಾಗಿ ಸುರಿದಿರುವುದರಿಂದ ಜಮೀನಿನಲ್ಲಿ ಅಗತ್ಯ ತೇವಾಂಶವಿದ್ದು ಸಕಾಲದಲ್ಲಿ ಮಳೆ ಬಂದರೆ ಚೆನ್ನಾಗಿ ಹತ್ತಿ ಬೆಳೆಯ ಇಳುವರಿ ಬರುತ್ತದೆ.</blockquote><span class="attribution">– ಶರಣಪ್ಪ ಜಡಿ, ಪ್ರಗತಿಪರ ರೈತ</span></div>.<p><strong>‘ಕಪ್ಪು ಮಣ್ಣಿನಲ್ಲಿ ಹತ್ತಿ ಬಿತ್ತನೆ ಆರಂಭಿಸಿ’</strong></p><p>‘ಮಳೆ ಉತ್ತಮವಾಗಿ ಸುರಿದಿರುವುದರಿಂದ ಜಮೀನುಗಳಲ್ಲಿ ಅಗತ್ಯ ತೇವಾಂಶ ಇದ್ದು ರೈತರು ಕಪ್ಪು ಮಣ್ಣಿನಲ್ಲಿ ಹತ್ತಿಯನ್ನು ಬಿತ್ತನೆ ಮಾಡಲು ಆರಂಭಿಸಬಹುದು’ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಮೃಗಶಿರಕ್ಕಿಂತ ಮುಂಚೆ ಹತ್ತಿ ಬೀಜಗಳನ್ನು ಜಮೀನುಗಳಲ್ಲಿ ಬಿತ್ತನೆ ಮಾಡಿದರೆ ರೋಗ ರಹಿತ ಬೆಳೆಯನ್ನು ತೆಗೆಯುವುದರ ಜತೆಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಿದೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>