<p><strong>ಗುರುಮಠಕಲ್:</strong> ಪಟ್ಟಣದಲ್ಲಿ ಶುಕ್ರವಾರ (ಅ.31) ಸಂಜೆ 4ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪಥ ಸಂಚಲನ ಜರುಗಲಿದ್ದು, ಪಥಸಂಚಲನಕ್ಕೆ ಸಿದ್ಧತೆ ಬಿರುಸುಗೊಂಡಿದೆ.</p>.<p>ಪಟ್ಟಣದಲ್ಲಿ ಸಿದ್ದತೆ ಆರಂಭವಾಗಿದ್ದು, ಪಥ ಸಂಚಲನದ ಮಾರ್ಗದಲ್ಲಿ ಕೇಸರಿ ಪರಾರಿ, ಸ್ವಾಗತಕೋರುವ ಬ್ಯಾನರ್, ಸ್ವತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಅಳವಡಿಕೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ.</p>.<p>ಆರ್ಎಸ್ಎಸ್ ಹಿತೈಷಿ ಮನೆಗಳ ಮುಂದೆ ಸ್ವಯಂಪ್ರೇರಿತ ರಂಗೋಲಿ ಹಾಕುವುದು, ಪಥಸಂಚಲನಕ್ಕೆ ಪುಷ್ಪವೃಷ್ಟಿ, ತಮ್ಮ ಮನೆಗಳ ಮುಂದೆ ಸ್ವಚ್ಛತೆ ಮತ್ತು ಚಳಿ ಹೊಡೆಯುವುದು ಸೇರಿದಂತೆ ಸ್ವಾಗತ, ಶುಭಾಶಯ, ಜಯಘೋಷದ ತಯಾರಿ ನಡೆಸಲಾಗುತ್ತಿದೆ.</p>.<p>ಈ ಮೊದಲು ಅ.25 ರಂದು ಪಥಸಂಚಲನಕ್ಕೆ ಚಿಂತಿಸಲಾಗಿತ್ತು. ಆದರೆ, ಅನುಮತಿ ಸಿಗದ ಕಾರಣ ಮುಂದೂಡಲಾಗಿತ್ತು. ನಿಯಮಾನುಸಾರ ಅನುಮತಿ ಕೋರಿ ಆರ್ಎಸ್ಎಸ್ ಸಂಚಾಲಕರು ಸಕ್ಷಮ ಪ್ರಾಧಿಕಾರಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.</p>.<p>ಪೊಲೀಸ್ ಇಲಾಖೆಯಿಂದ ವರದಿ ಪಡೆದ ನಂತರ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಶುಕ್ರವಾರ (ಅ.31) ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.</p>.<p><strong>ಪಥಸಂಚಲನ ಮಾರ್ಗ: </strong>ಪಟ್ಟಣದ ಲಕ್ಷ್ಮೀಬಾಯಿ ನರೇಂದ್ರ ರಾಠೋಡ ಲೇಔಟ್ನಲ್ಲಿ ಸಂಪತ (ಜಮಾವಣೆ), ಕನಕವೃತ್ತ (ಕಾಕಲವಾರ ವೃತ್ತ), ಬಸವೇಶ್ವರ ವೃತ್ತ (ಎಪಿಎಂಸಿ ವೃತ್ತ), ಹನುಮ ಮಂದಿರ (ಅಂಬಿಗರ ಚೌಡಯ್ಯ ವೃತ್ತದ ಹತ್ತಿರ), ಮಲ್ಲಯಕಟ್ಟಾ, ನೀರೆಟಿ ಓಣಿ, ಬಡಿಗೇರ ಓಣಿ, ನಗರೇಶ್ವರ ದೇವಸ್ಥಾನ ಮಾರ್ಗದಲ್ಲಿ ಮುಂದುವರೆಯಲಿದೆ.</p>.<p>ವೀರಭದ್ರೇಶ್ವರ ದೇವಸ್ಥಾನ, ನಾನಾಪುರ ಬಡಾವಣೆ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ವೃತ್ತ, ಗಂಗಾಪರಮೇಶ್ವರಿ ವೃತ್ತ(ಸಿಹಿನೀರಬಾವಿ), ಬಸ್ ನಿಲ್ದಾಣದ ಮಾರ್ಗವಾಗಿ ರಾಮನಗರ ಬಡಾವಣೆಯ ರತ್ನಮ್ಮ ಈರಾರೆಡ್ಡಿ ಚಪೇಟ್ಲಾ ಲೇಔಟ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಆರ್ಎಸ್ಎಸ್ ತಿಳಿಸಿದೆ.</p>.<p><strong>ಪೊಲೀಸ್ ನಿಯೋಜನೆ:</strong> ಶುಕ್ರವಾರದ ಪಥಸಂಚಲನಕ್ಕೆ ಗುರುಮಠಕಲ್ ಪಿಐ ವೀರಣ್ಣ ದೊಡ್ಡಮನಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ 2, ಪಿಎಸ್ಐ 5, ಎಎಸ್ಐ 12, ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ 30 ಸೇರಿದಂತೆ ಜಿಲ್ಲಾ ಮೀಸಲು ಪಡೆಯ 2 ಪಾರ್ಟಿ ಮತ್ತು ವ್ಯಾನ್ಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.</p>.<div><blockquote>ಗುರುಮಠಕಲ್ನಲ್ಲಿ ಶುಕ್ರವಾರ ಜರುಗುವ ಆರ್ಎಸ್ಎಸ್ ಪಥಸಂಚಲನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಶದಲ್ಲಿ ಭಾಗವಹಿಸಬೇಕು  </blockquote><span class="attribution">-ಸುರೇಶ ಅಂಬಿಗೇರ ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ</span></div>.<div><blockquote> ಬ್ಯಾನರ್-ಬಂಟಿಗ್ಸ್ಗೆ ಪುರಸಭೆಯಿಂದ ಅನುಮತಿ ಪಡೆಯಲಾಗಿದೆ. ಶುಕ್ರವಾರ ಮಧ್ಯಾಹ್ನ 3ಕ್ಕೆ ಸಂಪತ 4 ರಿಂದ ಪಥ ಸಂಚಲನ ಪ್ರಾರಂಭವಾಗಲಿದೆ. </blockquote><span class="attribution">-ಬಸ್ಸಪ್ಪ ಸಂಜನೋಳ ಆರ್ಎಸ್ಎಸ್ ಜಿಲ್ಲಾ ಪ್ರಚಾರ ಪ್ರಮುಖ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್:</strong> ಪಟ್ಟಣದಲ್ಲಿ ಶುಕ್ರವಾರ (ಅ.31) ಸಂಜೆ 4ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪಥ ಸಂಚಲನ ಜರುಗಲಿದ್ದು, ಪಥಸಂಚಲನಕ್ಕೆ ಸಿದ್ಧತೆ ಬಿರುಸುಗೊಂಡಿದೆ.</p>.<p>ಪಟ್ಟಣದಲ್ಲಿ ಸಿದ್ದತೆ ಆರಂಭವಾಗಿದ್ದು, ಪಥ ಸಂಚಲನದ ಮಾರ್ಗದಲ್ಲಿ ಕೇಸರಿ ಪರಾರಿ, ಸ್ವಾಗತಕೋರುವ ಬ್ಯಾನರ್, ಸ್ವತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಅಳವಡಿಕೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ.</p>.<p>ಆರ್ಎಸ್ಎಸ್ ಹಿತೈಷಿ ಮನೆಗಳ ಮುಂದೆ ಸ್ವಯಂಪ್ರೇರಿತ ರಂಗೋಲಿ ಹಾಕುವುದು, ಪಥಸಂಚಲನಕ್ಕೆ ಪುಷ್ಪವೃಷ್ಟಿ, ತಮ್ಮ ಮನೆಗಳ ಮುಂದೆ ಸ್ವಚ್ಛತೆ ಮತ್ತು ಚಳಿ ಹೊಡೆಯುವುದು ಸೇರಿದಂತೆ ಸ್ವಾಗತ, ಶುಭಾಶಯ, ಜಯಘೋಷದ ತಯಾರಿ ನಡೆಸಲಾಗುತ್ತಿದೆ.</p>.<p>ಈ ಮೊದಲು ಅ.25 ರಂದು ಪಥಸಂಚಲನಕ್ಕೆ ಚಿಂತಿಸಲಾಗಿತ್ತು. ಆದರೆ, ಅನುಮತಿ ಸಿಗದ ಕಾರಣ ಮುಂದೂಡಲಾಗಿತ್ತು. ನಿಯಮಾನುಸಾರ ಅನುಮತಿ ಕೋರಿ ಆರ್ಎಸ್ಎಸ್ ಸಂಚಾಲಕರು ಸಕ್ಷಮ ಪ್ರಾಧಿಕಾರಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.</p>.<p>ಪೊಲೀಸ್ ಇಲಾಖೆಯಿಂದ ವರದಿ ಪಡೆದ ನಂತರ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಶುಕ್ರವಾರ (ಅ.31) ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ.</p>.<p><strong>ಪಥಸಂಚಲನ ಮಾರ್ಗ: </strong>ಪಟ್ಟಣದ ಲಕ್ಷ್ಮೀಬಾಯಿ ನರೇಂದ್ರ ರಾಠೋಡ ಲೇಔಟ್ನಲ್ಲಿ ಸಂಪತ (ಜಮಾವಣೆ), ಕನಕವೃತ್ತ (ಕಾಕಲವಾರ ವೃತ್ತ), ಬಸವೇಶ್ವರ ವೃತ್ತ (ಎಪಿಎಂಸಿ ವೃತ್ತ), ಹನುಮ ಮಂದಿರ (ಅಂಬಿಗರ ಚೌಡಯ್ಯ ವೃತ್ತದ ಹತ್ತಿರ), ಮಲ್ಲಯಕಟ್ಟಾ, ನೀರೆಟಿ ಓಣಿ, ಬಡಿಗೇರ ಓಣಿ, ನಗರೇಶ್ವರ ದೇವಸ್ಥಾನ ಮಾರ್ಗದಲ್ಲಿ ಮುಂದುವರೆಯಲಿದೆ.</p>.<p>ವೀರಭದ್ರೇಶ್ವರ ದೇವಸ್ಥಾನ, ನಾನಾಪುರ ಬಡಾವಣೆ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ವೃತ್ತ, ಗಂಗಾಪರಮೇಶ್ವರಿ ವೃತ್ತ(ಸಿಹಿನೀರಬಾವಿ), ಬಸ್ ನಿಲ್ದಾಣದ ಮಾರ್ಗವಾಗಿ ರಾಮನಗರ ಬಡಾವಣೆಯ ರತ್ನಮ್ಮ ಈರಾರೆಡ್ಡಿ ಚಪೇಟ್ಲಾ ಲೇಔಟ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಆರ್ಎಸ್ಎಸ್ ತಿಳಿಸಿದೆ.</p>.<p><strong>ಪೊಲೀಸ್ ನಿಯೋಜನೆ:</strong> ಶುಕ್ರವಾರದ ಪಥಸಂಚಲನಕ್ಕೆ ಗುರುಮಠಕಲ್ ಪಿಐ ವೀರಣ್ಣ ದೊಡ್ಡಮನಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ 2, ಪಿಎಸ್ಐ 5, ಎಎಸ್ಐ 12, ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ 30 ಸೇರಿದಂತೆ ಜಿಲ್ಲಾ ಮೀಸಲು ಪಡೆಯ 2 ಪಾರ್ಟಿ ಮತ್ತು ವ್ಯಾನ್ಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.</p>.<div><blockquote>ಗುರುಮಠಕಲ್ನಲ್ಲಿ ಶುಕ್ರವಾರ ಜರುಗುವ ಆರ್ಎಸ್ಎಸ್ ಪಥಸಂಚಲನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಶದಲ್ಲಿ ಭಾಗವಹಿಸಬೇಕು  </blockquote><span class="attribution">-ಸುರೇಶ ಅಂಬಿಗೇರ ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ</span></div>.<div><blockquote> ಬ್ಯಾನರ್-ಬಂಟಿಗ್ಸ್ಗೆ ಪುರಸಭೆಯಿಂದ ಅನುಮತಿ ಪಡೆಯಲಾಗಿದೆ. ಶುಕ್ರವಾರ ಮಧ್ಯಾಹ್ನ 3ಕ್ಕೆ ಸಂಪತ 4 ರಿಂದ ಪಥ ಸಂಚಲನ ಪ್ರಾರಂಭವಾಗಲಿದೆ. </blockquote><span class="attribution">-ಬಸ್ಸಪ್ಪ ಸಂಜನೋಳ ಆರ್ಎಸ್ಎಸ್ ಜಿಲ್ಲಾ ಪ್ರಚಾರ ಪ್ರಮುಖ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>