ಈ ಕಟ್ಟಡದಲ್ಲಿ ಪ್ರಸ್ತುತ ನೆಮ್ಮದಿ ಕೇಂದ್ರ, ಆಧಾರ ಕೇಂದ್ರ, ಭೂಮಿ, ಉಪ ತಹಶೀಲ್ದಾರ್ ಕಾರ್ಯಾಲಯ ಕಾರ್ಯ ನಿರ್ವಹಿಸುತ್ತಿವೆ. ನೀರು ಸೋರುವುದರಿಂದ ಕೆಲವೊಂದು ಮುಖ್ಯ ದಾಖಲೆಗಳು ಹಾಳಾಗುತ್ತಿವೆ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಉಪತಹಶೀಲ್ದಾರ್ ಕಚೇರಿಯು ಪಿ.ಡಬ್ಲು.ಡಿ ಎಂಜಿನಿಯರಿಂಗ್ ವಿಶ್ರಾಂತಿ ಗೃಹವಾಗಿದೆ. ಆದರೆ ಈ ಕಾರ್ಯಾಲಯಕ್ಕೆ ಪ್ರತ್ಯೇಕ ಕಟ್ಟಡ ಇಲ್ಲ. ಆದ ಕಾರಣ ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಉಪತಹಶೀಲ್ದಾರ್ ಕಚೇರಿಯನ್ನು ಬೇರೆ ಕಡೆಗೆ ವರ್ಗಾಯಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬಂಜಾರು ಸಮಾಜದ ಮುಖಂಡ ಅರ್ಜುನ ಚವ್ಹಾಣ ಒತ್ತಾಯಿಸಿದ್ದಾರೆ.