<p><strong>ಕಂದಕೂರ (ಗುರುಮಠಕಲ್):</strong> ಗಡಿಯನ್ನು ಕಾಯುವ ಯೋಧರಂತೆ ಗ್ರಾಮಗಳ ಅಭ್ಯುದಯಕ್ಕೆ ಮಾಡುವ ನಿಸ್ವಾರ್ಥ ಸೇವೆಯೂ ದೇಶ ಸೇವೆಯಾಗುತ್ತದೆ ಎಂದು ಉಪನ್ಯಾಸಕ ಪುರುಷೋತ್ತಮ ಜೋಶಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅದ್ಯಯನ ಕೇಂದ್ರದ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಶುಕ್ರವಾರ ಜರುಗಿದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>ಗಾಂಧೀಜಿಯವರ ಜನ್ಮ ಶತಮಾನೋತ್ಸವ ವರ್ಷ ಡಾ.ಎಸ್.ರಾದಾಕೃಷ್ಣನ್ ಅವರ ಅಧ್ಯಕ್ಷತೆಯ ಸಮಿತಿ ಶಿಕ್ಷಣದ ಜೊತೆಗೆ ಸಮಾಜ ಕಾರ್ಯದ ಅವಶ್ಯಕತೆ ಮನಗಂಡು ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯನ್ನು ಆರಂಭಿಸಿತು. ಸದ್ಯ ವಾರ್ಷಿಕ ₹16 ಕೋಟಿ ಅನುದಾನವನ್ನು ದೇಶಾದ್ಯಂತ ಎನ್ಎಸ್ಎಸ್ಗಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.</p>.<p>ಶಿಬಿರದಲ್ಲಿ ಸಾಮಾನ್ಯ ಸೇವಾ ಚಟುವಟಿಕೆ, ರಕ್ತದಾನ ಮತ್ತು ಜಾಗೃತಿ ಚಟುವಟಿಕೆಗಳೆಂಬ ಮೂರು ಆಯಾಮಗಳಿವೆ. ಈ ಮೂರೂ ಆಯಾಮಗಳು ಒಳಗೊಂಡಂತಾ ಶಿಬಿರವು ನಮ್ಮಲ್ಲಿ ನಾಯಕತ್ವ ಗುಣ, ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವುದು ಮತ್ತು ಸೇವಾ ಮನೋಭಾವಗಳ ಉದ್ದೀಪನೆಯ ಮೂಲಕ ಸಮಾಜವನ್ನು ಸದೃಡಗೊಳಿಸಲಿವೆ ಎಂದರು.</p>.<p>ಪತ್ರಕರ್ತ ಅನಿಲ ಬಸೂದೆ ಮಾತನಾಡಿ, ಶಿಬಿರದಲ್ಲಿ ಕಲಿತದನ್ನು ಜೀವನದುದ್ದಕ್ಕೂ ಅನುಸರಿಸಿದರೆ ದೇಶದ ಉನ್ನತಿ ಸಾಧ್ಯ ಎಂದರು.</p>.<p>ಉಪನ್ಯಾಸಕ ರಾಯಪ್ಪ ಅವರು ಮಾತನಾಡಿದರು. ಪಿಡಿಒ ಮಹಮ್ಮದ್ ಅಲಿ ಜಮಾದಾರ, ಮುಖಂಡ ಜಾನ್ ವೆಲ್ಸಿ, ಮುಖ್ಯಶಿಕ್ಷಕ ಗಂಗಾಧರ ಮಾತನಾಡಿದರು.</p>.<p>ಶಿಬಿರಾರ್ಥಿಗಳಾದ ಜಯಶ್ರೀ, ಪ್ರವೀಣಕುಮಾರ, ವಾಸುದೇವ, ಸರೋಜಾ, ರವಿ, ಹಣಮಂತ ಶಿಬಿರದಲ್ಲಿ ತಮಗಾದ ಕಲಿಕೆ ಕುರಿತು ವಿವರಿಸಿದರು.</p>.<p>ಶಂಕರರೆಡ್ಡಿ ಕಂದಕೂರ, ಉಪನ್ಯಾಸಕ ಮರಿಯಪ್ಪ ನಾಟೇಕರ್, ಮುಖ್ಯಶಿಕ್ಷಕ ಗಂಗಾಧರ, ಎನ್ಎಸ್ಎಸ್ ಸಂಯೋಜಕ ಚಿನ್ನ ಆಶಪ್ಪ, ಹಣಮಂತ ದಾಸನ್, ಪತ್ರಕರ್ತರಾದ ರಾಜಲಿಂಗಪ್ಪ ಸಜ್ಜನ, ಮುಖಂಡ ಶರಬುದ್ಧೀನ್, ಎನ್ಎಸ್ಎಸ್ ಘಟಕಾಧಿಕಾರಿ ಬಾಬುರಾಯ ದೊರೆ, ಉಪನ್ಯಾಸಕರಾದ ಇಮ್ರಾನ್ ಖಾಜಿ, ಮಹೇಶ, ಪ್ರವೀಣ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂದಕೂರ (ಗುರುಮಠಕಲ್):</strong> ಗಡಿಯನ್ನು ಕಾಯುವ ಯೋಧರಂತೆ ಗ್ರಾಮಗಳ ಅಭ್ಯುದಯಕ್ಕೆ ಮಾಡುವ ನಿಸ್ವಾರ್ಥ ಸೇವೆಯೂ ದೇಶ ಸೇವೆಯಾಗುತ್ತದೆ ಎಂದು ಉಪನ್ಯಾಸಕ ಪುರುಷೋತ್ತಮ ಜೋಶಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅದ್ಯಯನ ಕೇಂದ್ರದ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಶುಕ್ರವಾರ ಜರುಗಿದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.</p>.<p>ಗಾಂಧೀಜಿಯವರ ಜನ್ಮ ಶತಮಾನೋತ್ಸವ ವರ್ಷ ಡಾ.ಎಸ್.ರಾದಾಕೃಷ್ಣನ್ ಅವರ ಅಧ್ಯಕ್ಷತೆಯ ಸಮಿತಿ ಶಿಕ್ಷಣದ ಜೊತೆಗೆ ಸಮಾಜ ಕಾರ್ಯದ ಅವಶ್ಯಕತೆ ಮನಗಂಡು ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯನ್ನು ಆರಂಭಿಸಿತು. ಸದ್ಯ ವಾರ್ಷಿಕ ₹16 ಕೋಟಿ ಅನುದಾನವನ್ನು ದೇಶಾದ್ಯಂತ ಎನ್ಎಸ್ಎಸ್ಗಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.</p>.<p>ಶಿಬಿರದಲ್ಲಿ ಸಾಮಾನ್ಯ ಸೇವಾ ಚಟುವಟಿಕೆ, ರಕ್ತದಾನ ಮತ್ತು ಜಾಗೃತಿ ಚಟುವಟಿಕೆಗಳೆಂಬ ಮೂರು ಆಯಾಮಗಳಿವೆ. ಈ ಮೂರೂ ಆಯಾಮಗಳು ಒಳಗೊಂಡಂತಾ ಶಿಬಿರವು ನಮ್ಮಲ್ಲಿ ನಾಯಕತ್ವ ಗುಣ, ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವುದು ಮತ್ತು ಸೇವಾ ಮನೋಭಾವಗಳ ಉದ್ದೀಪನೆಯ ಮೂಲಕ ಸಮಾಜವನ್ನು ಸದೃಡಗೊಳಿಸಲಿವೆ ಎಂದರು.</p>.<p>ಪತ್ರಕರ್ತ ಅನಿಲ ಬಸೂದೆ ಮಾತನಾಡಿ, ಶಿಬಿರದಲ್ಲಿ ಕಲಿತದನ್ನು ಜೀವನದುದ್ದಕ್ಕೂ ಅನುಸರಿಸಿದರೆ ದೇಶದ ಉನ್ನತಿ ಸಾಧ್ಯ ಎಂದರು.</p>.<p>ಉಪನ್ಯಾಸಕ ರಾಯಪ್ಪ ಅವರು ಮಾತನಾಡಿದರು. ಪಿಡಿಒ ಮಹಮ್ಮದ್ ಅಲಿ ಜಮಾದಾರ, ಮುಖಂಡ ಜಾನ್ ವೆಲ್ಸಿ, ಮುಖ್ಯಶಿಕ್ಷಕ ಗಂಗಾಧರ ಮಾತನಾಡಿದರು.</p>.<p>ಶಿಬಿರಾರ್ಥಿಗಳಾದ ಜಯಶ್ರೀ, ಪ್ರವೀಣಕುಮಾರ, ವಾಸುದೇವ, ಸರೋಜಾ, ರವಿ, ಹಣಮಂತ ಶಿಬಿರದಲ್ಲಿ ತಮಗಾದ ಕಲಿಕೆ ಕುರಿತು ವಿವರಿಸಿದರು.</p>.<p>ಶಂಕರರೆಡ್ಡಿ ಕಂದಕೂರ, ಉಪನ್ಯಾಸಕ ಮರಿಯಪ್ಪ ನಾಟೇಕರ್, ಮುಖ್ಯಶಿಕ್ಷಕ ಗಂಗಾಧರ, ಎನ್ಎಸ್ಎಸ್ ಸಂಯೋಜಕ ಚಿನ್ನ ಆಶಪ್ಪ, ಹಣಮಂತ ದಾಸನ್, ಪತ್ರಕರ್ತರಾದ ರಾಜಲಿಂಗಪ್ಪ ಸಜ್ಜನ, ಮುಖಂಡ ಶರಬುದ್ಧೀನ್, ಎನ್ಎಸ್ಎಸ್ ಘಟಕಾಧಿಕಾರಿ ಬಾಬುರಾಯ ದೊರೆ, ಉಪನ್ಯಾಸಕರಾದ ಇಮ್ರಾನ್ ಖಾಜಿ, ಮಹೇಶ, ಪ್ರವೀಣ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>