<p><strong>ವಡಗೇರಾ</strong>: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ ಹಯ್ಯಾಳ(ಬಿ). ಇಲ್ಲಿ ಆಗಾಗ, ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸಿದ್ಧರಾಗಬೇಕಾದರೆ ಹರಸಾಹಸ ಪಡಬೇಕು.</p>.<p>ಇಂತಹ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಹೊನ್ನಯ್ಯ ಪೂಜಾರಿ 625 ರಲ್ಲಿ 601 ಅಂಕಗಳನ್ನು ಪಡೆದು ಶೇ 96.16 ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಎಸ್ಎಸ್ಎಲ್ಸಿ ಪರೀಕ್ಷೆ -1 ರಲ್ಲಿ ವಡಗೇರಾ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.</p>.<p>ಈ ಶಾಲೆಯಲ್ಲಿ ಶಿಕ್ಷಕರು ಪಾಠ ಬೋಧನೆ ನಂತರ ಮತ್ತೆ ಅದೇ ಪಾಠವನ್ನು ಪ್ರೊಜೆಕ್ಟರ್ ಮುಖಾಂತರ ಮಕ್ಕಳಿಗೆ ವಿವರಿಸುತ್ತಿದ್ದರು. ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ತರಗತಿಗಳನ್ನು ತೆಗೆದುಕೊಳ್ಳುತಿದ್ದರು.</p>.<p>ಹಯ್ಯಾಳ(ಬಿ) ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಯಂ ಶಿಕ್ಷಕರು ಇಬ್ಬರು. ಅತಿಥಿ ಶಿಕ್ಷಕರು ನಾಲ್ವರು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಯ ಮುಖ್ಯಶಿಕ್ಷಕ ಅತಿಥಿ ಶಿಕ್ಷಕರ ಮನವೊಲಿಸಿ ಸಕ್ರಿಯವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸಿದ ಫಲವೇ ಇಂದು ಶಾಲೆಯ ಫಲಿತಾಂಶ ಉನ್ನತ ಶ್ರೇಣಿಯಲ್ಲಿ ಇರುವುದು.</p>.<p><strong> ದಾಖಲೆ: </strong>ಹಯ್ಯಾಳ(ಬಿ) ಗ್ರಾಮದಲ್ಲಿ 1984ರಲ್ಲಿ ಪ್ರೌಢಶಾಲೆ ಆರಂಭವಾಗಿದೆ. ಕಳೆದ ವರ್ಷದವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 93 ಅಂಕಗಳನ್ನು ಪಡೆದು ಉತ್ತೀರ್ಣರಾದ ದಾಖಲೆ ಇತ್ತು. ಆದರೆ ಈ ವರ್ಷ ಶೇ 96.16 ಅಂಕಗಳನ್ನು ಪಡೆದು ರಕ್ಷಿತಾ ಪೂಜಾರಿ ಆ ದಾಖಲೆಯನ್ನು ಅಳಿಸಿ ಹಾಕಿದ್ದಾಳೆ.</p>.<p>ಈ ವರ್ಷ ಈ ಶಾಲೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದವರ ಸಂಖ್ಯೆ 64. ಇದರಲ್ಲಿ ಉತ್ತೀರ್ಣರಾದವರು 34. ಶೇ ಫಲಿತಾಂಶ 52ರಷ್ಟಾಗಿದೆ.</p>.<p>ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ 11 ಸರ್ಕಾರಿ ಪ್ರೌಢಶಾಲೆ, 2 ಮೊರಾರ್ಜಿ ವಸತಿ ಶಾಲೆ. 3 ಖಾಸಗಿ ಶಾಲೆಗಳು ಬರುತ್ತವೆ. ಎಸ್ಎಸ್ಎಲ್ಸಿ ಪರೀಕ್ಷೆ -1 ಕ್ಕೆ ಹಾಜರಾದ ವಿದ್ಯಾರ್ಥಿಗಳು 810 ಇದರಲ್ಲಿ ಹಯ್ಯಾಳ(ಬಿ) ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಪೂಜಾರಿ ತಾಲ್ಲೂಕಿಗೆ ಪ್ರಥಮ. </p>.<div><blockquote>ನಮ್ಮ ಶಾಲೆಯ ವಿದ್ಯಾರ್ಥಿನಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ </blockquote><span class="attribution">ಶರಣಪ್ಪ ಸಿದ್ದಪ್ಪ ಶಿರಶ್ಯಾಡ್ ಮಖ್ಯಶಿಕ್ಷಕ</span></div>.<div><blockquote>ನನ್ನ ಎಲ್ಲಾ ಶ್ರೇಯಸ್ಸು ಶಿಕ್ಷಕರು ಹಾಗೂ ನನ್ನ ಪಾಲಕರದ್ದು. ಮಂದೆ ವಿಜ್ಞಾನ ವಿಷಯದ ಶಿಕ್ಷಕಿಯಾಗುವ ಕನಸಿದೆ </blockquote><span class="attribution">ರಕ್ಷಿತಾ ಹೊನ್ನಯ್ಯ ಪೂಜಾರಿ</span></div>.<p> ಹಯ್ಯಾಳ(ಬಿ) ಶಾಲೆಯ ಶಿಕ್ಷಕರು ಫಲಿತಾಂಶ ಸುಧಾರಣೆ ಶ್ರಮಿಸಿದ್ದಾರೆ. ಆ ಶ್ರಮದ ಫಲವೇ ವಿದ್ಯಾರ್ಥಿನಿ ತಾಲ್ಲೂಕಿಗೆ ಪ್ರಥಮ ಬಂದಿರುವುದು ಶಿವಪ್ಪ ಎಸ್ ಮಾತನೂರ ಗ್ರಾಮಸ್ಥ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ</strong>: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ ಹಯ್ಯಾಳ(ಬಿ). ಇಲ್ಲಿ ಆಗಾಗ, ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸಿದ್ಧರಾಗಬೇಕಾದರೆ ಹರಸಾಹಸ ಪಡಬೇಕು.</p>.<p>ಇಂತಹ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಹೊನ್ನಯ್ಯ ಪೂಜಾರಿ 625 ರಲ್ಲಿ 601 ಅಂಕಗಳನ್ನು ಪಡೆದು ಶೇ 96.16 ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಎಸ್ಎಸ್ಎಲ್ಸಿ ಪರೀಕ್ಷೆ -1 ರಲ್ಲಿ ವಡಗೇರಾ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.</p>.<p>ಈ ಶಾಲೆಯಲ್ಲಿ ಶಿಕ್ಷಕರು ಪಾಠ ಬೋಧನೆ ನಂತರ ಮತ್ತೆ ಅದೇ ಪಾಠವನ್ನು ಪ್ರೊಜೆಕ್ಟರ್ ಮುಖಾಂತರ ಮಕ್ಕಳಿಗೆ ವಿವರಿಸುತ್ತಿದ್ದರು. ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ತರಗತಿಗಳನ್ನು ತೆಗೆದುಕೊಳ್ಳುತಿದ್ದರು.</p>.<p>ಹಯ್ಯಾಳ(ಬಿ) ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಯಂ ಶಿಕ್ಷಕರು ಇಬ್ಬರು. ಅತಿಥಿ ಶಿಕ್ಷಕರು ನಾಲ್ವರು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಯ ಮುಖ್ಯಶಿಕ್ಷಕ ಅತಿಥಿ ಶಿಕ್ಷಕರ ಮನವೊಲಿಸಿ ಸಕ್ರಿಯವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸಿದ ಫಲವೇ ಇಂದು ಶಾಲೆಯ ಫಲಿತಾಂಶ ಉನ್ನತ ಶ್ರೇಣಿಯಲ್ಲಿ ಇರುವುದು.</p>.<p><strong> ದಾಖಲೆ: </strong>ಹಯ್ಯಾಳ(ಬಿ) ಗ್ರಾಮದಲ್ಲಿ 1984ರಲ್ಲಿ ಪ್ರೌಢಶಾಲೆ ಆರಂಭವಾಗಿದೆ. ಕಳೆದ ವರ್ಷದವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 93 ಅಂಕಗಳನ್ನು ಪಡೆದು ಉತ್ತೀರ್ಣರಾದ ದಾಖಲೆ ಇತ್ತು. ಆದರೆ ಈ ವರ್ಷ ಶೇ 96.16 ಅಂಕಗಳನ್ನು ಪಡೆದು ರಕ್ಷಿತಾ ಪೂಜಾರಿ ಆ ದಾಖಲೆಯನ್ನು ಅಳಿಸಿ ಹಾಕಿದ್ದಾಳೆ.</p>.<p>ಈ ವರ್ಷ ಈ ಶಾಲೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದವರ ಸಂಖ್ಯೆ 64. ಇದರಲ್ಲಿ ಉತ್ತೀರ್ಣರಾದವರು 34. ಶೇ ಫಲಿತಾಂಶ 52ರಷ್ಟಾಗಿದೆ.</p>.<p>ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ 11 ಸರ್ಕಾರಿ ಪ್ರೌಢಶಾಲೆ, 2 ಮೊರಾರ್ಜಿ ವಸತಿ ಶಾಲೆ. 3 ಖಾಸಗಿ ಶಾಲೆಗಳು ಬರುತ್ತವೆ. ಎಸ್ಎಸ್ಎಲ್ಸಿ ಪರೀಕ್ಷೆ -1 ಕ್ಕೆ ಹಾಜರಾದ ವಿದ್ಯಾರ್ಥಿಗಳು 810 ಇದರಲ್ಲಿ ಹಯ್ಯಾಳ(ಬಿ) ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಪೂಜಾರಿ ತಾಲ್ಲೂಕಿಗೆ ಪ್ರಥಮ. </p>.<div><blockquote>ನಮ್ಮ ಶಾಲೆಯ ವಿದ್ಯಾರ್ಥಿನಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ </blockquote><span class="attribution">ಶರಣಪ್ಪ ಸಿದ್ದಪ್ಪ ಶಿರಶ್ಯಾಡ್ ಮಖ್ಯಶಿಕ್ಷಕ</span></div>.<div><blockquote>ನನ್ನ ಎಲ್ಲಾ ಶ್ರೇಯಸ್ಸು ಶಿಕ್ಷಕರು ಹಾಗೂ ನನ್ನ ಪಾಲಕರದ್ದು. ಮಂದೆ ವಿಜ್ಞಾನ ವಿಷಯದ ಶಿಕ್ಷಕಿಯಾಗುವ ಕನಸಿದೆ </blockquote><span class="attribution">ರಕ್ಷಿತಾ ಹೊನ್ನಯ್ಯ ಪೂಜಾರಿ</span></div>.<p> ಹಯ್ಯಾಳ(ಬಿ) ಶಾಲೆಯ ಶಿಕ್ಷಕರು ಫಲಿತಾಂಶ ಸುಧಾರಣೆ ಶ್ರಮಿಸಿದ್ದಾರೆ. ಆ ಶ್ರಮದ ಫಲವೇ ವಿದ್ಯಾರ್ಥಿನಿ ತಾಲ್ಲೂಕಿಗೆ ಪ್ರಥಮ ಬಂದಿರುವುದು ಶಿವಪ್ಪ ಎಸ್ ಮಾತನೂರ ಗ್ರಾಮಸ್ಥ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>