ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರಗೋನಾಲ ಸಾಕ್ಷರರ ತವರೂರು’

Last Updated 20 ಮಾರ್ಚ್ 2023, 6:27 IST
ಅಕ್ಷರ ಗಾತ್ರ

ಸುರಪುರ: ‘ದೇವರಗೋನಾಲ ಗ್ರಾಮದ ಪ್ರತಿ ಮನೆಯಲ್ಲಿ ಸರ್ಕಾರಿ ನೌಕರರಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ದೇವರಗೋನಾಲ ಸಾಕ್ಷರರ ತವರೂರು’ ಎಂದು ಸುರಪುರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿದ್ದಯ್ಯ ಮಠ ಹೇಳಿದರು.

ತಾಲ್ಲೂಕಿನ ದೇವರಗೋನಾಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪ ಡಿಸಿದ್ದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿಮಗೆಲ್ಲ ಈ ಅಧಿಕಾರಿಗಳ ಪ್ರೇರಣೆ ದೊರಕಲಿ. ಅವರ ಮಾರ್ಗದರ್ಶನ ಪಡೆಯಿರಿ. ಚೆನ್ನಾಗಿ ಓದಿ. ಭಯ ಪಡದೆ ಪರೀಕ್ಷೆ ಬರೆಯಿರಿ. ನಿಮಗೆಲ್ಲ ಶುಭವಾಗಲಿ ಎಂದು ಹಾರೈಸಿದರು.

ಎಸ್‍ಡಿಎಂಸಿ ಅಧ್ಯಕ್ಷ ಶಿವ ಮೂರ್ತೆಪ್ಪ, ಮುಖಂಡರಾದ ಸಣ್ಣದೇಸಾಯಿ, ನಿಂಗಣ್ಣ ಬಾಡದ, ಶಿಕ್ಷಕಿ ರಾಜೇಶ್ವರಿ ಇದ್ದರು. ಮುಖ್ಯ ಶಿಕ್ಷಕಿ ಹಣಮಂತೆಮ್ಮ ಕಡಿಮನಿ ಅಧ್ಯಕ್ಷತೆ ವಹಿಸಿದ್ದರು.

ಶ್ವೇತಾ ಭೈರಿಮರಡಿ ಪ್ರಾರ್ಥಿಸಿದರು. ಭೀಮರಾಯ ನಿರೂಪಿಸಿದರು. ರೂಪಾ ಸ್ವಾಗತಿಸಿದರು. ಸುಭಾನಿ ವಂದಿಸಿದರು. ನಂತರ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT