ಯಾದಗಿರಿ | ಪುಣೆಯಲ್ಲಿ ಕರ್ನಾಟಕದ ಸಾರಿಗೆ ಬಸ್ಗೆ ಕಲ್ಲು ತೂರಾಟ: ಗ್ಲಾಸ್ ಜಖಂ

ಯಾದಗಿರಿ: ಶಹಾಪುರ ಬಸ್ ಡಿಪೋದ ಸುರಪುರ-ಪುಣೆ ಬಸ್ಗೆ ಮಹಾರಾಷ್ಟ್ರದ ಪುಣೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು, ಎರಡು ಬದಿಯ ಗ್ಲಾಸ್ಗಳು ಜಖಂ ಆಗಿವೆ.
ಸುರಪುರ, ಶಹಾಪುರ, ಸಿಂದಗಿ, ಸೊಲ್ಲಾಪುರ ಮಾರ್ಗವಾಗಿ ಪುಣೆಗೆ ಬಸ್ ಸಂಚಾರ ಮಾಡುತಿತ್ತು. ಭಾನುವಾರ ಪುಣೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.
ಈ ವೇಳೆ ಕಿಡಿಗೇಡಿಗಳು ಬಸ್ ಮುಂಭಾಗದ ಗ್ಲಾಸ್ಗೆ ಕಲ್ಲು ತೂರಿದ್ದರಿಂದ ಚೂರು ಚೂರಾಗಿದೆ. ಹಿಂಭಾಗದ ಗ್ಲಾಸ್ ಒಡೆದಿದೆ. ಮುಂಬೈಗೆ ತೆರಳಬೇಕಿದ್ದ ಗುರುಮಠಕಲ್ ಘಟಕದ ಬಸ್ ಅನ್ನು ಕರ್ನಾಟಕದ ಗಡಿಯಿಂದಲೇ ವಾಪಾಸ್ ಕರೆಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
'ಶಹಾಪುರ ಬಸ್ ಘಟಕದ ಕೆಎ 33 ಎಫ್ 0395 ಬಸ್ಗೆ ಕಲ್ಲು ತೂರಲಾಗಿದೆ. ಸ್ಥಳೀಯ ಠಾಣೆಯಲ್ಲಿ ಘಟನೆ ಬಗ್ಗೆ ದೂರು ನೀಡಲಾಗಿದೆ. ಇದರ ಜೊತೆಗೆ ಸಿಂದಗಿ, ಕಲಬುರಗಿ ಬಸ್ ಘಟಕದ ಬಸ್ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ' ಎಂದು ಶಹಾಪುರ ಡಿಪೋ ವ್ಯವಸ್ಥಾಪಕ ಪಾಲಕ್ಷಿ ಹರ್ತಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.