<p><strong>ಕಕ್ಕೇರಾ</strong>: ಪಟ್ಟಣದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಲಕ್ಷ್ಮೀಬಾಯಿ ಕಿರಣಗಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಅವರನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು. ವಿದ್ಯಾರ್ಥಿಗಳು ಶಿಕ್ಷಕಿಯ ಪಾದಪೂಜೆ ಮಾಡಿದರು.</p>.<p>ಸನ್ಮಾನಿತಗೊಂಡು ಲಕ್ಷ್ಮೀಬಾಯಿ ಕಿರಣಗಿ ಮಾತನಾಡಿ, ‘ನನ್ನ 39 ವರ್ಷಗಳ ಸೇವೆ ಅತ್ಯಂತ ತೃಪ್ತಿ ತಂದಿದೆ. ಇಲಾಖೆಯ ಮೇಲಧಿಕಾರಿಗಳ ಹಾಗೂ ಶಾಲಾ ಅಡಳಿತ ಮಂಡಳಿಯ ಸಹಾಯ, ಸಹಕಾರದಿಂದ ಕರ್ತವ್ಯದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಹಕಾರಿಯಾಯಿತು’ ಎಂದರು.</p>.<p>‘ವಿದ್ಯಾರ್ಥಿಗಳು ಸಮಯ ಪಾಲನೆ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ಅಧ್ಯಯನ ಮಾಡಿ, ಉನ್ನತ ಗುರಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು. ಪಾಲಕರು ಕೂಡ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ’ ಎಂದು ಸಲಹೆ ನೀಡಿದರು.</p>.<p>ಶಿಕ್ಷಕ ಬಸಯ್ಯಸ್ವಾಮಿ ಮಾತನಾಡಿ, ‘ಲಕ್ಷ್ಮೀಬಾಯಿ ಅವರು ನಮ್ಮ ಶಾಲೆಯ ಮದರ್ ಇಂಡಿಯಾ ಎಂದೇ ಖಾತಿ ಪಡೆದಿದ್ದರು. ಅವರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ’ ಎಂದು ಹೇಳಿದರು.</p>.<p>ಶಿಕ್ಷಕರಾದ ಅಶೋಕ ಕೋಳೂರ್, ನಾನಾಗೌಡ ಬಸರಕೋಡ, ಬಸವರಾಜ ಕೋಳ್ಕೂರ್, ಅಶ್ವಿನಿ ನೆಲೋಗಿ, ನಿಂಗರಾಯ, ರಾಜಭಕ್ಷಿ, ಅಶ್ವಿನಿ ಹಡಪದ, ರಾಜು ಬೊಮ್ಮನಳ್ಳಿ ಮಾತನಾಡಿದರು.</p>.<p>ಅಯ್ಯಣ್ಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಸಂಗನಗೌಡ ದೇವರಡ್ಡಿ ಅಧ್ಯಕ್ಷತೆ ವಹಿಸಿದ್ದರು.</p>.<p>ಭೂಧಾನಿ ಬಾಲಪ್ಪ ದೇಸಾಯಿ, ಎಸ್ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪ್ರಭಾಕರ್ ಕಿರಣಸಗಿ, ಸೋಮಶೇಖರ್, ಶಿವರಾಯ ಉಪಸ್ಥಿತರಿದ್ದರು.</p>.<p>ಮೋನಿಕಾ ಸಂಗಡಿಗರು ಪ್ರಾರ್ಥಿಸಿದರು. ಸುನೀಲ ಹಡಪದ ಸ್ವಾಗತಿಸಿದರು. ಶಿವು ಲಿಂಗದಳ್ಳಿ ಸ್ವಾಗತಿಸಿದರು. ಮಹಾದೇವಿ ಅರಳಳ್ಳಿ ಪರಿಚಯಿಸಿದರು. ದೇವಿಂದ್ರಪ್ಪ ಆಲದಾರ್ತಿ ವಂದಿಸಿದರು.</p>.<p>ಕಾರ್ಯಕ್ರಮದ ನಂತರ ಲಕ್ಷ್ಮೀಬಾಯಿ ಕಿರಣಗಿ ಅವರನ್ನು ಶಾಲಾ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ನಲ್ಲಿ ಮರೆವಣಿಗೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ</strong>: ಪಟ್ಟಣದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಲಕ್ಷ್ಮೀಬಾಯಿ ಕಿರಣಗಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಅವರನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು. ವಿದ್ಯಾರ್ಥಿಗಳು ಶಿಕ್ಷಕಿಯ ಪಾದಪೂಜೆ ಮಾಡಿದರು.</p>.<p>ಸನ್ಮಾನಿತಗೊಂಡು ಲಕ್ಷ್ಮೀಬಾಯಿ ಕಿರಣಗಿ ಮಾತನಾಡಿ, ‘ನನ್ನ 39 ವರ್ಷಗಳ ಸೇವೆ ಅತ್ಯಂತ ತೃಪ್ತಿ ತಂದಿದೆ. ಇಲಾಖೆಯ ಮೇಲಧಿಕಾರಿಗಳ ಹಾಗೂ ಶಾಲಾ ಅಡಳಿತ ಮಂಡಳಿಯ ಸಹಾಯ, ಸಹಕಾರದಿಂದ ಕರ್ತವ್ಯದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಹಕಾರಿಯಾಯಿತು’ ಎಂದರು.</p>.<p>‘ವಿದ್ಯಾರ್ಥಿಗಳು ಸಮಯ ಪಾಲನೆ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ಅಧ್ಯಯನ ಮಾಡಿ, ಉನ್ನತ ಗುರಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು. ಪಾಲಕರು ಕೂಡ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ’ ಎಂದು ಸಲಹೆ ನೀಡಿದರು.</p>.<p>ಶಿಕ್ಷಕ ಬಸಯ್ಯಸ್ವಾಮಿ ಮಾತನಾಡಿ, ‘ಲಕ್ಷ್ಮೀಬಾಯಿ ಅವರು ನಮ್ಮ ಶಾಲೆಯ ಮದರ್ ಇಂಡಿಯಾ ಎಂದೇ ಖಾತಿ ಪಡೆದಿದ್ದರು. ಅವರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ’ ಎಂದು ಹೇಳಿದರು.</p>.<p>ಶಿಕ್ಷಕರಾದ ಅಶೋಕ ಕೋಳೂರ್, ನಾನಾಗೌಡ ಬಸರಕೋಡ, ಬಸವರಾಜ ಕೋಳ್ಕೂರ್, ಅಶ್ವಿನಿ ನೆಲೋಗಿ, ನಿಂಗರಾಯ, ರಾಜಭಕ್ಷಿ, ಅಶ್ವಿನಿ ಹಡಪದ, ರಾಜು ಬೊಮ್ಮನಳ್ಳಿ ಮಾತನಾಡಿದರು.</p>.<p>ಅಯ್ಯಣ್ಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಸಂಗನಗೌಡ ದೇವರಡ್ಡಿ ಅಧ್ಯಕ್ಷತೆ ವಹಿಸಿದ್ದರು.</p>.<p>ಭೂಧಾನಿ ಬಾಲಪ್ಪ ದೇಸಾಯಿ, ಎಸ್ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪ್ರಭಾಕರ್ ಕಿರಣಸಗಿ, ಸೋಮಶೇಖರ್, ಶಿವರಾಯ ಉಪಸ್ಥಿತರಿದ್ದರು.</p>.<p>ಮೋನಿಕಾ ಸಂಗಡಿಗರು ಪ್ರಾರ್ಥಿಸಿದರು. ಸುನೀಲ ಹಡಪದ ಸ್ವಾಗತಿಸಿದರು. ಶಿವು ಲಿಂಗದಳ್ಳಿ ಸ್ವಾಗತಿಸಿದರು. ಮಹಾದೇವಿ ಅರಳಳ್ಳಿ ಪರಿಚಯಿಸಿದರು. ದೇವಿಂದ್ರಪ್ಪ ಆಲದಾರ್ತಿ ವಂದಿಸಿದರು.</p>.<p>ಕಾರ್ಯಕ್ರಮದ ನಂತರ ಲಕ್ಷ್ಮೀಬಾಯಿ ಕಿರಣಗಿ ಅವರನ್ನು ಶಾಲಾ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ನಲ್ಲಿ ಮರೆವಣಿಗೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>