<p><strong>ಸುರಪುರ:</strong> ಸಹಕಾರ ಸಂಘಗಳ ಮೂಲಕ ವ್ಯವಹರಿಸಲು ರೈತರ ನಾಡಿ ಮಿಡಿತವಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಕೆವೈಡಿಸಿಸಿ ಬ್ಯಾಂಕ್) ಶಾಖೆ ಸುರಪುರ ನಗರದಲ್ಲಿ ಮಾತ್ರ ಇದ್ದು, ಪ್ರತಿ ನಿತ್ಯ ಗ್ರಾಹಕರ ನೂಕು ನುಗ್ಗಲು ಸಾಮಾನ್ಯವಾಗಿದೆ.</p>.<p>ಬ್ಯಾಂಕ್ ತೆರೆಯವುದಕ್ಕೆ ಮುಂಚೆಯೇ ಗ್ರಾಹಕರ ಉದ್ದನೆಯ ಸಾಲು ಇರುತ್ತದೆ. 90 ಕಿ.ಮೀ ದೂರದ ನಾರಾಯಣಪುರದಿಂದಲೂ ರೈತಾಪಿ ಗ್ರಾಹಕರು ಬ್ಯಾಂಕಿಗೆ ಬರುತ್ತಾರೆ. ತಮ್ಮ ಕೆಲಸ ಮಾಡಿಸಿಕೊಳ್ಳಲು ಅವರು ಪರದಾಡುವ ದೃಶ್ಯ ಕಂಡು ಬರುತ್ತಿದೆ.</p>.<p>ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳು ಸುರಪುರದ ನಗರದ ಡಿಸಿಸಿ ಬ್ಯಾಂಕಿನ ವ್ಯಾಪ್ತಿಗೆ ಒಳಪಡುತ್ತವೆ. ಎರಡೂ ತಾಲ್ಲೂಕುಗಳಲ್ಲಿ 43 ಪ್ರಾಥಮಿಕ ಗ್ರಾಹಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಹಕಾರ ಸಂಘಗಳಲ್ಲಿ ಒಂದು ಲಕ್ಕಕ್ಕೂ ಹೆಚ್ಚು ರೈತರು ಸದಸ್ಯತ್ವ ಹೊಂದಿದ್ದಾರೆ. ಈ ಎಲ್ಲ ರೈತರಿಗೆ ಸಾಲ ನೀಡುವುದು ಸೇರಿದಂತೆ ಇತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ನಗರದ ಡಿಸಿಸಿ ಬ್ಯಾಂಕ್ ಮೇಲೆ ಅವಲಂಬನೆ ಇದೆ. ನಿತ್ಯವೂ 43 ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು ಬ್ಯಾಂಕಿಗೆ ಬರುತ್ತಾರೆ.</p>.<p>ಬ್ಯಾಂಕಿನಲ್ಲಿ 36 ಸಾವಿರ ಖಾತೆದಾರರು ಇದ್ದಾರೆ. ಅಲ್ಲದೇ ಗೃಹಲಕ್ಷ್ಮಿ, ಅನ್ನಭಾಗ್ಯ, ವೃದ್ಧಾಪ್ಯ ಸೇರಿದಂತೆ ವಿವಿಧ ವೇತನಗಳು, ಪರಿಹಾರ ಸೇರಿದಂತೆ ಸರ್ಕಾರ ಎಲ್ಲ ಯೋಜನೆಗಳ ಫಲಾನುಭವಿಗಳ ಬಹುತೇಕ ಖಾತೆಗಳು ಈ ಬ್ಯಾಂಕಿನಲ್ಲಿ ಇವೆ.<br> ನಿತ್ಯ 500ಕ್ಕೂ ಹೆಚ್ಚು ಓಚರ್ಗಳ ವಹಿವಾಟು ನಡೆಯುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಾಹಕರು ಬರುವುದರಿಂದ ಸ್ಥಳದ ಕೊರತೆಯೂ ಇದೆ. ಗ್ರಾಹಕರು ಬ್ಯಾಂಕಿನ ಹೊರಗಡೆಯೂ ಕಾಯುವಂತಾಗಿದೆ.</p>.<p>ಕೇವಲ 6 ಜನ ಸಿಬ್ಬಂದಿ ಇಷ್ಟೊಂದು ವ್ಯವಹಾರ, ಖಾತೆ ನಿಯಂತ್ರಿಸಲು ಕಷ್ಟ ಸಾಧ್ಯ. ಇನ್ನಷ್ಟು ಸಿಬ್ಬಂದಿ ಮತ್ತು ದೊಡ್ಡ ಕಟ್ಟಡದ ಅವಶ್ಯಕತೆ ಇದೆ. ಸಂಜೆವರೆಗೆ ಕಾಯ್ದರೂ ಗ್ರಾಹಕರು ತಮ್ಮ ಕೆಲಸವಾಗದೆ ವಾಪಸ್ ಹೋಗುವ ಪ್ರಸಂಗಗಳು ನಡೆದಿವೆ.</p>.<p>ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದರೂ ಸಹಕಾರ ಬ್ಯಾಂಕ್ನ ಕೇಂದ್ರ ಕಚೇರಿ ಕಲಬುರಗಿಯಲ್ಲಿಯೇ ಇದೆ. ಯಾದಗಿರಿಯ ಜಿಲ್ಲೆಯ ಆರು ತಾಲ್ಲೂಕುಗಳೂ ಕಲಬುರಗಿ ಕಚೇರಿಗೆ ಒಳಪಡುತ್ತವೆ. ಆದ್ದರಿಂದ ಈ ಬ್ಯಾಂಕಿಗೆ ಕೆವೈಡಿಸಿಸಿ (ಕಲಬುರಗಿ ಮತ್ತು ಯಾದಗಿರಿ) ಬ್ಯಾಂಕ್ ಎಂದು ಕರೆಯಲಾಗುತ್ತದೆ. ಇದರಿಂದ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮಂಜೂರು ಮಾಡಬೇಕೆನ್ನುವ ಕೂಗು ಜೋರಾಗಿಯೇ ಇದೆ.</p>.<p>ಗ್ರಾಹಕರ ಸಂಖ್ಯೆ ಅಧಿಕವಾಗಿರುವುದರಿಂದ ಮತ್ತು ಸಂಘಗಳಿಗೆ ಸದಸ್ಯರಾಗಿರುವ ರೈತರ ಸಂಖ್ಯೆಯೂ ಅಧಿಕವಾಗಿರುವುದರಿಂದ ಗ್ರಾಹಕರ ದಟ್ಟಣೆ ನಿಯಂತ್ರಿಸಲು ಹುಣಸಗಿ ಮತ್ತು ಕೆಂಭಾವಿಗಳಲ್ಲಿ ಡಿಸಿಸಿ ಬ್ಯಾಂಕ್ಗಳ ಶಾಖೆ ತೆರೆಯಬೇಕೆಂಬುದು ಗ್ರಾಹಕರು ಮತ್ತು ರೈತರ ಆಗ್ರಹ.</p>.<blockquote>43 - ಪ್ರಾಥಮಿಕ ಸಹಕಾರ ಸಂಘಗಳು 1 ಲಕ್ಷ - ಸಂಘಗಳ ಸದಸ್ಯತ್ವ ಹೊಂದಿರುವ ರೈತರು 36 ಸಾವಿರ - ಡಿಸಿಸಿ ಬ್ಯಾಂಕಿನಲ್ಲಿರುವ ಖಾತೆಗಳು</blockquote>.<div><blockquote>ತಾಲ್ಲೂಕಿನ ಕರಡಕಲ್ದಿಂದ ಸುರಪುರಕ್ಕೆ ಆಗಮಿಸಿ ಬ್ಯಾಂಕಿನಲ್ಲಿ ವ್ಯವಹರಿಸುವುದು ತೊಂದರೆಯಾಗಿದೆ. ಕೆಂಭಾವಿಯಲ್ಲಿ ಶಾಖೆ ತೆರೆಯಬೇಕು</blockquote><span class="attribution">ಬಂದೇನವಾಜ ಗ್ರಾಹಕ ಕರಡಕಲ್</span></div>.<div><blockquote>ರೈತರ ಖಾತೆಯ ಜತೆಗೆ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಖಾತೆಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಸೇವೆ ನೀಡುವಲ್ಲಿ ವ್ಯತ್ಯಯ ಉಂಟಾಗುತ್ತಿದೆ</blockquote><span class="attribution">ಶಿವಲಿಂಗಪ್ಪ ವೆಂಕಟಗಿರಿ ವ್ಯವಸ್ಥಾಪಕ</span></div>.<div><blockquote>ನಬಾರ್ಡ್ ಮಾನದಂಡಗಳ ಪ್ರಕಾರ ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮತ್ತು ಶಾಖೆಗಳನ್ನು ತೆರೆಯುವ ಅರ್ಹತೆ ಕೆವೈಡಿಸಿಸಿ ಬ್ಯಾಂಕಿಗೆ ಇಲ್ಲ.</blockquote><span class="attribution"> ಬಾಪುಗೌಡ ಪಾಟೀಲ ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ಸಹಕಾರ ಸಂಘಗಳ ಮೂಲಕ ವ್ಯವಹರಿಸಲು ರೈತರ ನಾಡಿ ಮಿಡಿತವಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಕೆವೈಡಿಸಿಸಿ ಬ್ಯಾಂಕ್) ಶಾಖೆ ಸುರಪುರ ನಗರದಲ್ಲಿ ಮಾತ್ರ ಇದ್ದು, ಪ್ರತಿ ನಿತ್ಯ ಗ್ರಾಹಕರ ನೂಕು ನುಗ್ಗಲು ಸಾಮಾನ್ಯವಾಗಿದೆ.</p>.<p>ಬ್ಯಾಂಕ್ ತೆರೆಯವುದಕ್ಕೆ ಮುಂಚೆಯೇ ಗ್ರಾಹಕರ ಉದ್ದನೆಯ ಸಾಲು ಇರುತ್ತದೆ. 90 ಕಿ.ಮೀ ದೂರದ ನಾರಾಯಣಪುರದಿಂದಲೂ ರೈತಾಪಿ ಗ್ರಾಹಕರು ಬ್ಯಾಂಕಿಗೆ ಬರುತ್ತಾರೆ. ತಮ್ಮ ಕೆಲಸ ಮಾಡಿಸಿಕೊಳ್ಳಲು ಅವರು ಪರದಾಡುವ ದೃಶ್ಯ ಕಂಡು ಬರುತ್ತಿದೆ.</p>.<p>ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳು ಸುರಪುರದ ನಗರದ ಡಿಸಿಸಿ ಬ್ಯಾಂಕಿನ ವ್ಯಾಪ್ತಿಗೆ ಒಳಪಡುತ್ತವೆ. ಎರಡೂ ತಾಲ್ಲೂಕುಗಳಲ್ಲಿ 43 ಪ್ರಾಥಮಿಕ ಗ್ರಾಹಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಹಕಾರ ಸಂಘಗಳಲ್ಲಿ ಒಂದು ಲಕ್ಕಕ್ಕೂ ಹೆಚ್ಚು ರೈತರು ಸದಸ್ಯತ್ವ ಹೊಂದಿದ್ದಾರೆ. ಈ ಎಲ್ಲ ರೈತರಿಗೆ ಸಾಲ ನೀಡುವುದು ಸೇರಿದಂತೆ ಇತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ನಗರದ ಡಿಸಿಸಿ ಬ್ಯಾಂಕ್ ಮೇಲೆ ಅವಲಂಬನೆ ಇದೆ. ನಿತ್ಯವೂ 43 ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು ಬ್ಯಾಂಕಿಗೆ ಬರುತ್ತಾರೆ.</p>.<p>ಬ್ಯಾಂಕಿನಲ್ಲಿ 36 ಸಾವಿರ ಖಾತೆದಾರರು ಇದ್ದಾರೆ. ಅಲ್ಲದೇ ಗೃಹಲಕ್ಷ್ಮಿ, ಅನ್ನಭಾಗ್ಯ, ವೃದ್ಧಾಪ್ಯ ಸೇರಿದಂತೆ ವಿವಿಧ ವೇತನಗಳು, ಪರಿಹಾರ ಸೇರಿದಂತೆ ಸರ್ಕಾರ ಎಲ್ಲ ಯೋಜನೆಗಳ ಫಲಾನುಭವಿಗಳ ಬಹುತೇಕ ಖಾತೆಗಳು ಈ ಬ್ಯಾಂಕಿನಲ್ಲಿ ಇವೆ.<br> ನಿತ್ಯ 500ಕ್ಕೂ ಹೆಚ್ಚು ಓಚರ್ಗಳ ವಹಿವಾಟು ನಡೆಯುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಾಹಕರು ಬರುವುದರಿಂದ ಸ್ಥಳದ ಕೊರತೆಯೂ ಇದೆ. ಗ್ರಾಹಕರು ಬ್ಯಾಂಕಿನ ಹೊರಗಡೆಯೂ ಕಾಯುವಂತಾಗಿದೆ.</p>.<p>ಕೇವಲ 6 ಜನ ಸಿಬ್ಬಂದಿ ಇಷ್ಟೊಂದು ವ್ಯವಹಾರ, ಖಾತೆ ನಿಯಂತ್ರಿಸಲು ಕಷ್ಟ ಸಾಧ್ಯ. ಇನ್ನಷ್ಟು ಸಿಬ್ಬಂದಿ ಮತ್ತು ದೊಡ್ಡ ಕಟ್ಟಡದ ಅವಶ್ಯಕತೆ ಇದೆ. ಸಂಜೆವರೆಗೆ ಕಾಯ್ದರೂ ಗ್ರಾಹಕರು ತಮ್ಮ ಕೆಲಸವಾಗದೆ ವಾಪಸ್ ಹೋಗುವ ಪ್ರಸಂಗಗಳು ನಡೆದಿವೆ.</p>.<p>ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದರೂ ಸಹಕಾರ ಬ್ಯಾಂಕ್ನ ಕೇಂದ್ರ ಕಚೇರಿ ಕಲಬುರಗಿಯಲ್ಲಿಯೇ ಇದೆ. ಯಾದಗಿರಿಯ ಜಿಲ್ಲೆಯ ಆರು ತಾಲ್ಲೂಕುಗಳೂ ಕಲಬುರಗಿ ಕಚೇರಿಗೆ ಒಳಪಡುತ್ತವೆ. ಆದ್ದರಿಂದ ಈ ಬ್ಯಾಂಕಿಗೆ ಕೆವೈಡಿಸಿಸಿ (ಕಲಬುರಗಿ ಮತ್ತು ಯಾದಗಿರಿ) ಬ್ಯಾಂಕ್ ಎಂದು ಕರೆಯಲಾಗುತ್ತದೆ. ಇದರಿಂದ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮಂಜೂರು ಮಾಡಬೇಕೆನ್ನುವ ಕೂಗು ಜೋರಾಗಿಯೇ ಇದೆ.</p>.<p>ಗ್ರಾಹಕರ ಸಂಖ್ಯೆ ಅಧಿಕವಾಗಿರುವುದರಿಂದ ಮತ್ತು ಸಂಘಗಳಿಗೆ ಸದಸ್ಯರಾಗಿರುವ ರೈತರ ಸಂಖ್ಯೆಯೂ ಅಧಿಕವಾಗಿರುವುದರಿಂದ ಗ್ರಾಹಕರ ದಟ್ಟಣೆ ನಿಯಂತ್ರಿಸಲು ಹುಣಸಗಿ ಮತ್ತು ಕೆಂಭಾವಿಗಳಲ್ಲಿ ಡಿಸಿಸಿ ಬ್ಯಾಂಕ್ಗಳ ಶಾಖೆ ತೆರೆಯಬೇಕೆಂಬುದು ಗ್ರಾಹಕರು ಮತ್ತು ರೈತರ ಆಗ್ರಹ.</p>.<blockquote>43 - ಪ್ರಾಥಮಿಕ ಸಹಕಾರ ಸಂಘಗಳು 1 ಲಕ್ಷ - ಸಂಘಗಳ ಸದಸ್ಯತ್ವ ಹೊಂದಿರುವ ರೈತರು 36 ಸಾವಿರ - ಡಿಸಿಸಿ ಬ್ಯಾಂಕಿನಲ್ಲಿರುವ ಖಾತೆಗಳು</blockquote>.<div><blockquote>ತಾಲ್ಲೂಕಿನ ಕರಡಕಲ್ದಿಂದ ಸುರಪುರಕ್ಕೆ ಆಗಮಿಸಿ ಬ್ಯಾಂಕಿನಲ್ಲಿ ವ್ಯವಹರಿಸುವುದು ತೊಂದರೆಯಾಗಿದೆ. ಕೆಂಭಾವಿಯಲ್ಲಿ ಶಾಖೆ ತೆರೆಯಬೇಕು</blockquote><span class="attribution">ಬಂದೇನವಾಜ ಗ್ರಾಹಕ ಕರಡಕಲ್</span></div>.<div><blockquote>ರೈತರ ಖಾತೆಯ ಜತೆಗೆ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಖಾತೆಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಸೇವೆ ನೀಡುವಲ್ಲಿ ವ್ಯತ್ಯಯ ಉಂಟಾಗುತ್ತಿದೆ</blockquote><span class="attribution">ಶಿವಲಿಂಗಪ್ಪ ವೆಂಕಟಗಿರಿ ವ್ಯವಸ್ಥಾಪಕ</span></div>.<div><blockquote>ನಬಾರ್ಡ್ ಮಾನದಂಡಗಳ ಪ್ರಕಾರ ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮತ್ತು ಶಾಖೆಗಳನ್ನು ತೆರೆಯುವ ಅರ್ಹತೆ ಕೆವೈಡಿಸಿಸಿ ಬ್ಯಾಂಕಿಗೆ ಇಲ್ಲ.</blockquote><span class="attribution"> ಬಾಪುಗೌಡ ಪಾಟೀಲ ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>