<p><strong>ಯಾದಗಿರಿ: </strong>ತಿಂಗಳಿನಿಂದ ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ ಇಳಿಕೆ ಮುಖ ಕಂಡಿದೆ. ಇಲ್ಲಿಯ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ಕೆಜಿಗೆ ₹100 ಬೆಲೆ ಇತ್ತು. ಈರುಳ್ಳಿಯಲ್ಲಿ ಮೂರು ವಿಧಗಳಿವೆ. ಬೆಳ್ಳುಳ್ಳಿ ಗಾತ್ರದ ಈರುಳ್ಳಿಗೆ ₹ 60, ಮಧ್ಯಮ ಗಾತ್ರಕ್ಕೆ ₹ 80, ದಪ್ಪ ಈರುಳ್ಳಿಗೆ ₹100 ಕೆಜಿಗೆ ಮಾರಲಾಗುತ್ತಿದೆ.<br /><br />ಕಲಬುರ್ಗಿ, ರಾಯಚೂರು, ಮಹಾರಾಷ್ಟ್ರದಿಂದ ಈರುಳ್ಳಿ ಆಮದಾಗುತ್ತಿದೆ. ಕಳೆದ ವಾರ ಮಾರುಕಟ್ಟೆಗೆ ಅಷ್ಟಾಗಿ ಈರುಳ್ಳಿ ಆವಕ ಬರುತ್ತಿರಲಿಲ್ಲ. ಈ ವಾರ ಹೆಚ್ಚಿನ ಆವಕ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ.</p>.<p>‘ಬೇರೆ ಜಿಲ್ಲೆ ಅಲ್ಲದೆ ಸ್ಥಳೀಯವಾಗಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಕಳೆದ ಮೂರು ದಿನದಿಂದ ಇಳಿಕೆಯಾಗಿದೆ. ಆದರೂ ಗ್ರಾಹಕರು ಹೆಚ್ಚು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿ ಕಾಸೀಂಸಾಬ್ ಹೇಳುತ್ತಾರೆ.</p>.<p>ಚಿಲ್ಲರೆ ಅಂಗಡಿಗಳಲ್ಲೂ ಇಳಿಕೆ: ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಚಿಲ್ಲರೆ ತರಕಾರಿ ಅಂಗಡಿಗಳಲ್ಲಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರು ನಿಟ್ಟಸಿರು ಬಿಟ್ಟಿದ್ದಾರೆ. ಕಳೆದ ತಿಂಗಳು ಪೂರ್ತಿ ಈರುಳ್ಳಿ ಬೆಲೆ ಹೆಚ್ಚಳದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಇದರಿಂದ ಗ್ರಾಹಕರು ಕೆಜಿ ತೆಗೆದುಕೊಳ್ಳುವವರು ಅರ್ಧ ಕೆಜಿ ಖರೀದಿ ಮಾಡುತ್ತಿದ್ದರು.<br /><br /><strong>ಮಾರುಕಟ್ಟೆಗೆ ಬಾರದ ಜನ:</strong></p>.<p>ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆಯಾದರೂ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಕಳೆದ ತಿಂಗಳು ಕೆಜಿಗೆ ₹40 ಇದ್ದಿದ್ದು, ಒಮ್ಮೆಗೆ ₹80ಕ್ಕೆ ಹೆಚ್ಚಳವಾಯಿತು. ನಂತರ ₹120ಕ್ಕೆ ಏರಿಕೆಯಾಯಿತು. ಈಗ ₹20 ಕಡಿಮೆಯಾಗಿ ಕೆಜಿಗೆ ₹ 100 ಕೇಜಿಗೆ ಮಾರಾಟವಾಗುತ್ತಿದೆ ಎಂದು ಕಾಯುತ್ತಿದ್ದಾರೆ ಎಂದು ವ್ಯಾಪಾರಿ ಮಾರುತಿ ಹೇಳಿದರು.</p>.<p>ಹೋಟೆಲ್ ಮತ್ತು ತಳ್ಳುಗಾಡಿ ಎಗ್ ಸೆಂಟರ್ಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳದಿಂದ ಹೂಕೋಸು ನೀಡುತ್ತಿದ್ದಾರೆ. ನಗರದ ಮಾರುಕಟ್ಟೆಗೆ ಸದ್ಯ ಕಲಬುರ್ಗಿಯಿಂದ ಈರುಳ್ಳಿ ಆವಕ ಬರುತ್ತಿದೆ. ಅಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ.</p>.<p>ಈರುಳ್ಳಿ ಬಿಟ್ಟರೆ ಬೇರೆ ತರಕಾರಿಯಲ್ಲಿ ದರ ಸ್ಥಿರವಾಗಿದೆ. ಟೊಮೆಟೊ ದರ ಅಗ್ಗವಾಗಿದೆ. ಕೆಜಿಗೆ ₹20ಕ್ಕೆ ಮಾರಾಟವಾಗುತ್ತಿದೆ. ಅಲ್ಲದೆ ಬೀನ್ಸ್ ಬೆಲೆಯಲ್ಲಿ ತಗ್ಗಿದೆ. ಈಗ ಕೆಜಿಗೆ ₹80 ಇದೆ. ಕರಿಬೇವು ಕೆಜಿಗೆ ₹50 ಇದೆ. ಪುದೀನ, ಕೋತಂಬರಿ ಸೊಪ್ಪು ಒಂದು ಕಟ್ಟಿಗೆ ₹15 ಇದೆ. ಶುಂಠಿ ₹130 ಕೆಜಿ ಇದೆ. ಬೆಳ್ಳುಳ್ಳಿ ₹200 ಕೆಜಿ ಇದೆ.</p>.<p>***</p>.<p>ಕಳೆದ ವಾರದಿಂದಲೂ ತರಕಾರಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಈಗ ಈರುಳ್ಳಿ ಬೆಲೆ ಇಳಿಕೆಯಾಗಿದೆ. ಹೀಗಾಗಿ ಖರೀದಿಗೆ ಬಂದಿದ್ದೇನೆ.<br />ಸುಧಾಕರ ಬಿ., ಗ್ರಾಹಕ</p>.<p>***</p>.<p>ಸದ್ಯ ವ್ಯಾಪಾರ ಡಲ್ ಆಗಿದೆ. ಗ್ರಾಹಕರು ಈರುಳ್ಳಿ ಬೆಲೆ ಜಾಸ್ತಿಯಾಗಿದ್ದರಿಂದ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಮದುವೆ, ಮುಂಜಿ ಕಾರ್ಯಕ್ರಮಗಳು ಇದ್ದವರು ತರಕಾರಿ ಖರೀದಿಸುತ್ತಿದ್ದಾರೆ.<br />ಮಲ್ಲಿಕಾರ್ಜುನ ಜೀನಕೇರಾ, ವ್ಯಾಪಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ತಿಂಗಳಿನಿಂದ ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ ಇಳಿಕೆ ಮುಖ ಕಂಡಿದೆ. ಇಲ್ಲಿಯ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ಕೆಜಿಗೆ ₹100 ಬೆಲೆ ಇತ್ತು. ಈರುಳ್ಳಿಯಲ್ಲಿ ಮೂರು ವಿಧಗಳಿವೆ. ಬೆಳ್ಳುಳ್ಳಿ ಗಾತ್ರದ ಈರುಳ್ಳಿಗೆ ₹ 60, ಮಧ್ಯಮ ಗಾತ್ರಕ್ಕೆ ₹ 80, ದಪ್ಪ ಈರುಳ್ಳಿಗೆ ₹100 ಕೆಜಿಗೆ ಮಾರಲಾಗುತ್ತಿದೆ.<br /><br />ಕಲಬುರ್ಗಿ, ರಾಯಚೂರು, ಮಹಾರಾಷ್ಟ್ರದಿಂದ ಈರುಳ್ಳಿ ಆಮದಾಗುತ್ತಿದೆ. ಕಳೆದ ವಾರ ಮಾರುಕಟ್ಟೆಗೆ ಅಷ್ಟಾಗಿ ಈರುಳ್ಳಿ ಆವಕ ಬರುತ್ತಿರಲಿಲ್ಲ. ಈ ವಾರ ಹೆಚ್ಚಿನ ಆವಕ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ.</p>.<p>‘ಬೇರೆ ಜಿಲ್ಲೆ ಅಲ್ಲದೆ ಸ್ಥಳೀಯವಾಗಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಕಳೆದ ಮೂರು ದಿನದಿಂದ ಇಳಿಕೆಯಾಗಿದೆ. ಆದರೂ ಗ್ರಾಹಕರು ಹೆಚ್ಚು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿ ಕಾಸೀಂಸಾಬ್ ಹೇಳುತ್ತಾರೆ.</p>.<p>ಚಿಲ್ಲರೆ ಅಂಗಡಿಗಳಲ್ಲೂ ಇಳಿಕೆ: ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಚಿಲ್ಲರೆ ತರಕಾರಿ ಅಂಗಡಿಗಳಲ್ಲಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರು ನಿಟ್ಟಸಿರು ಬಿಟ್ಟಿದ್ದಾರೆ. ಕಳೆದ ತಿಂಗಳು ಪೂರ್ತಿ ಈರುಳ್ಳಿ ಬೆಲೆ ಹೆಚ್ಚಳದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಇದರಿಂದ ಗ್ರಾಹಕರು ಕೆಜಿ ತೆಗೆದುಕೊಳ್ಳುವವರು ಅರ್ಧ ಕೆಜಿ ಖರೀದಿ ಮಾಡುತ್ತಿದ್ದರು.<br /><br /><strong>ಮಾರುಕಟ್ಟೆಗೆ ಬಾರದ ಜನ:</strong></p>.<p>ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆಯಾದರೂ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಕಳೆದ ತಿಂಗಳು ಕೆಜಿಗೆ ₹40 ಇದ್ದಿದ್ದು, ಒಮ್ಮೆಗೆ ₹80ಕ್ಕೆ ಹೆಚ್ಚಳವಾಯಿತು. ನಂತರ ₹120ಕ್ಕೆ ಏರಿಕೆಯಾಯಿತು. ಈಗ ₹20 ಕಡಿಮೆಯಾಗಿ ಕೆಜಿಗೆ ₹ 100 ಕೇಜಿಗೆ ಮಾರಾಟವಾಗುತ್ತಿದೆ ಎಂದು ಕಾಯುತ್ತಿದ್ದಾರೆ ಎಂದು ವ್ಯಾಪಾರಿ ಮಾರುತಿ ಹೇಳಿದರು.</p>.<p>ಹೋಟೆಲ್ ಮತ್ತು ತಳ್ಳುಗಾಡಿ ಎಗ್ ಸೆಂಟರ್ಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳದಿಂದ ಹೂಕೋಸು ನೀಡುತ್ತಿದ್ದಾರೆ. ನಗರದ ಮಾರುಕಟ್ಟೆಗೆ ಸದ್ಯ ಕಲಬುರ್ಗಿಯಿಂದ ಈರುಳ್ಳಿ ಆವಕ ಬರುತ್ತಿದೆ. ಅಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ.</p>.<p>ಈರುಳ್ಳಿ ಬಿಟ್ಟರೆ ಬೇರೆ ತರಕಾರಿಯಲ್ಲಿ ದರ ಸ್ಥಿರವಾಗಿದೆ. ಟೊಮೆಟೊ ದರ ಅಗ್ಗವಾಗಿದೆ. ಕೆಜಿಗೆ ₹20ಕ್ಕೆ ಮಾರಾಟವಾಗುತ್ತಿದೆ. ಅಲ್ಲದೆ ಬೀನ್ಸ್ ಬೆಲೆಯಲ್ಲಿ ತಗ್ಗಿದೆ. ಈಗ ಕೆಜಿಗೆ ₹80 ಇದೆ. ಕರಿಬೇವು ಕೆಜಿಗೆ ₹50 ಇದೆ. ಪುದೀನ, ಕೋತಂಬರಿ ಸೊಪ್ಪು ಒಂದು ಕಟ್ಟಿಗೆ ₹15 ಇದೆ. ಶುಂಠಿ ₹130 ಕೆಜಿ ಇದೆ. ಬೆಳ್ಳುಳ್ಳಿ ₹200 ಕೆಜಿ ಇದೆ.</p>.<p>***</p>.<p>ಕಳೆದ ವಾರದಿಂದಲೂ ತರಕಾರಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಈಗ ಈರುಳ್ಳಿ ಬೆಲೆ ಇಳಿಕೆಯಾಗಿದೆ. ಹೀಗಾಗಿ ಖರೀದಿಗೆ ಬಂದಿದ್ದೇನೆ.<br />ಸುಧಾಕರ ಬಿ., ಗ್ರಾಹಕ</p>.<p>***</p>.<p>ಸದ್ಯ ವ್ಯಾಪಾರ ಡಲ್ ಆಗಿದೆ. ಗ್ರಾಹಕರು ಈರುಳ್ಳಿ ಬೆಲೆ ಜಾಸ್ತಿಯಾಗಿದ್ದರಿಂದ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಮದುವೆ, ಮುಂಜಿ ಕಾರ್ಯಕ್ರಮಗಳು ಇದ್ದವರು ತರಕಾರಿ ಖರೀದಿಸುತ್ತಿದ್ದಾರೆ.<br />ಮಲ್ಲಿಕಾರ್ಜುನ ಜೀನಕೇರಾ, ವ್ಯಾಪಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>