ಶಾಸಕ ರಾಜುಗೌಡ ಅವರ ಕಟ್ಟಾ ಬೆಂಬಲಿಗನಾದ ಪದವೀಧರ ಸಂಜೀವಪ್ಪ ವೈ.ಕವಾಲ್ದಾರ್, 2015ರಲ್ಲಿ ಜರುಗಿದ ಗ್ರಾ.ಪಂ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಗೆದ್ದು, 2ನೇ ಅವಧಿಗೆ ಅಧ್ಯಕ್ಷರಾಗಿದ್ದರು. ಈ ಸಲವು 2ನೇ ಬಾರಿಗೆ ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.3ರ ದಾದಲಾಪುರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ 79 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.