ಲಕ್ಷ್ಮೀ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಗರ್ಭ ಗುಡಿಯಲ್ಲಿರುವ ದೇವಿಯ ಮೂರ್ತಿ ಮೇಲಿರುವ 6 ಗ್ರಾಂ ಚಿನ್ನದ ಮಾಂಗಲ್ಯ, ಹುಂಡಿ ಹಾಗೂ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ದೋಚಿ ಪರಾರಿಯಾಗಿದ್ದಾರೆ. ಅಕ್ಟೋಬರ್ 1 ರಂದು ದೇವಸ್ಥಾನದಲ್ಲಿರುವ ಮರದ ಮೂಲಕ ಇಳಿದು ಕಳವು ಮಾಡಲಾಗಿತ್ತು. ಈಗ ಮತ್ತೆ ಕಳ್ಳತನ ಜರುಗಿದೆ. ಈಶ್ವರ ಹಾಗೂ ಆಂಜನೇಯ ದೇವಸ್ಥಾನದ ಹುಂಡಿ ಕಳವು ಮಾಡಲಾಗಿದೆ. ಪದೇ ಪದೇ ಕಳ್ಳತನ ಘಟನೆ ನಡೆಯುತ್ತಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.