ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಯಾದಗಿರಿಯಲ್ಲಿ ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ: ಜಿಲ್ಲೆಗಿಲ್ಲ ಹೊಸ ಯೋಜನೆ

Published : 2 ಫೆಬ್ರುವರಿ 2026, 2:45 IST
Last Updated : 2 ಫೆಬ್ರುವರಿ 2026, 2:45 IST
ಫಾಲೋ ಮಾಡಿ
Comments
ಬಜೆಟ್‌ನಲ್ಲಿ ಬರೀ ಅಂಕಿಸಂಖ್ಯೆಗಳಿದ್ದು ಕರ್ನಾಟಕಕ್ಕೆ ಯಾವುದೇ ಉಪಯೋಗವಿಲ್ಲ. ರಾಜ್ಯದ ಕೈಗಾರಿಕೆ ನೀರಾವರಿ ಕೃಷಿ ‌ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ಆದ್ಯತೆ ಕೊಡದ ಒಣ ಅಂಕಿಅಂಶಗಳನ್ನು ಮಂಡಿಸಲಾಗಿದೆ. ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ
–ಬಸರೆಡ್ಡಿ ಅನಪುರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಪರ ಹಾಗೂ ದೂರದೃಷ್ಟಿ ಹೊಂದಿರುವ ಬಜೆಟ್‌ ಇದು. ಬೆಂಗಳೂರಿಗೆ ಹೈಸ್ಪೀಡ್ ರೈಲ್ವೆ ಕಾರಿಡಾರ್ ಸಿಕ್ಕಿದೆ. ಕೆಲ ಅಪರೂಪದ ಕಾಯಿಲೆ 17 ಕ್ಯಾನ್ಸರ್‌ ಔಷಧಿ ಸೇರಿ ಹಲವು ವಸ್ತುಗಳ ಬೆಲೆ ಇಳಿಸಿದ್ದು ಜನರಿಗೆ ವರವಾಗಲಿದೆ
–ಬಸವರಾಜ ವಿಭೂತಿಹಳ್ಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ 
ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿ ವಿರೋಧಿಯಾಗಿದ್ದು ಬಡವರ ಪರವಾದ ಪೂರಕ ಯೋಜನೆಗಳಿಲ್ಲ. ಆರ್ಥಿಕ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವಂತಹ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ
–ಸ್ಯಾಮ್ಸನ್ ಮಾಳಿಕೇರಿ ಕಾಂಗ್ರೆಸ್ ವಕ್ತಾರ
ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚಳವಾಗುತ್ತಿದ್ದು ಭೌತಿಕ ಬೆಳವಣಿಗೆ ಅಷ್ಟೆ ಅಲ್ಲದೆ ದೇಶದ ಗುಣಾತ್ಮಕ ಆರ್ಥಿಕ ಸಾಮಾಜಿಕ ಬೆಳವಣಿಗೆಯನ್ನೂ ತೋರಿಸುತ್ತಿದೆ
–ಹಣಮಂತ ಇಟಗಿ ಬಿಜೆಪಿ ಜಿಲ್ಲಾ ವಕ್ತಾರ
ಕೇಂದ್ರದ ಬಜೆಟ್‌ನಲ್ಲಿ ಸರ್ವರಿಗೂ ಸಮಬಾಳು ಸಮಪಾಲಿದೆ. ಶಿಕ್ಷಣ ಆರೋಗ್ಯ ಕ್ರೀಡೆ ವ್ಯಾಪಾರ ಕೃಷಿ ಸಣ್ಣ ಕೈಗಾರಿಕೆ ಸೇರಿದಂತೆ ದೇಶದ ಸಮಸ್ತ ಜನತೆಗೆ ಅನುಕೂಲವಾಗುವ ಅಭಿವೃದ್ಧಿ ದೃಷ್ಟಿಕೋನದ ಬಜೆಟ್ ಮಂಡನೆಯಾಗಿದೆ
–ಮಹೇಶರೆಡ್ಡಿ ಮುದ್ನಾಳ ಬಿಜೆಪಿ ಮುಖಂಡ
ಕೇಂದ್ರ ಬಜೆಟ್ ಜನಸಾಮಾನ್ಯರ ಆಶೋತ್ತರ ರೈತರು ಯುವಕರು ಹಾಗೂ ಮಹಿಳೆಯರ ಸಬಲೀಕರಣ ಉದ್ಯಮಿಗಳ ಗುರಿಗಳನ್ನು ಒಗ್ಗೂಡಿಸಿದ ಸಮಗ್ರ ಅಭಿವೃದ್ಧಿಯ ಬಜೆಟ್ ಆಗಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ನೀಡಲಿದೆ
–ಶರಣಭೂಪಾಲ ರೆಡ್ಡಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ
ಭಾಷಣಕ್ಕಿಂತ ಕಾರ್ಯ ಜನಪ್ರಿಯತೆಗಿಂತ ಸುಧಾರಣೆ ತತ್ವದೊಂದಿಗೆ ರೂಪುಗೊಂಡ ಬಜೆಟ್‌ನಲ್ಲಿ ರೈತರು ಯುವಕರು ಮಹಿಳೆಯರು ಎಂಎಸ್‌ಎಂಇ ಮಧ್ಯಮ ವರ್ಗ ಮತ್ತು ವಂಚಿತರಿಗೆ ಅಭಿವೃದ್ಧಿಯ ಲಾಭಗಳು ತಲುಪುವಂಥ ಯೋಜನೆಗಳಿವೆ
–ಶ್ರೀಧರ ಸಾಹುಕಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT