ಸೈದಾಪುರ: ಪಟ್ಟಣದಲ್ಲಿ ಮೃತಪಟ್ಟ ಮಂಗನ ಅಂತ್ಯಕ್ರಿಯೆಯನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳದಿಂದ ಶನಿವಾರ ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.
ಶನಿವಾರ ಬೆಳಿಗ್ಗೆ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ವ್ಯಕ್ತಿಯೋರ್ವರ ಮನೆ ಮೇಲೆ ಕೋತಿ ಸತ್ತಿರುವುದು ಗಮನಿಸಿದ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಂಚಾಲಕ ಚಂದ್ರು ವಾಡಿ ಹಾಗೂ ಯುವಕರ ತಂಡವು ಅದರ ಅಂತಿಮ ಸಂಸ್ಕಾರವನ್ನು ವಿಶೇಷ ಪೂಜಾ ಕೈಕಂರ್ಯಗಳನ್ನು ಮಾಡಿ, ಮೆರವಣಿಗೆ ಮಾಡಿ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ರೆಡ್ಡಿ, ವಿರೂಪಾಕ್ಷ, ನೆಹರು, ದೇವು, ತಾಯಪ್ಪ, ಬಸ್ಸು, ತಾಯ, ನಾಗನಥ, ಸಾಬು, ಹಣಮಂತ, ರಮೆಶ, ರವಿ ರಾಥೋಡ, ಗಂಗು ಸೇರಿದಂತೆ ಇತರರಿದ್ದರು.