ಗ್ರಾಮದಲ್ಲಿ ಒಟ್ಟು ನಾಲ್ಕು ಕೈ ಪಂಪ್ಗಳಿದ್ದು, ಅದರಲ್ಲಿ ಕೇವಲ ಒಂದರಲ್ಲಿ ಮಾತ್ರ ಕುಡಿಯಲು ಯೋಗ್ಯವಾದ ನೀರು ದೊರೆಯುತ್ತದೆ. ಇನ್ನುಳಿದ ಮೂರು ಕೊಳವೆ ಬಾವಿಗಳಲ್ಲಿ ಕೇವಲ ದಿನ ಬಳಕೆಗೆ ಉಪಯೋಗುವಂತಹ ನೀರು ಬರುತ್ತವೆ. ಒಂದು ವೇಳೆ ಅದು ಕೆಟ್ಟು ನಿಂತರೆ ಜನರಿಗೆ ಕುಡಿಯಲು ಶುದ್ಧ ನೀರು ದೂರದ ಮಾತು ಎನ್ನುವಂತಾಗಿದೆ. ಇದರಿಂದಾಗಿ ರಣ ಬೇಸಿಗೆಯಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಮದ ಹೊರ ವಲಯದಲ್ಲಿರುವ ಮೈಲಾರಲಿಂಗೇಶ್ವರ ಮಠದ ಹತ್ತಿರವಿರುವ ಕೈ ಪಂಪ್ನಿಂದ ನೀರು ಪಡೆಯಲು ತೆರಳುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮಸ್ಥರ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕಪಡಿಸುತ್ತಾರೆ ಇಲ್ಲಿನ ಜನರು.