ಹುಣಸಗಿ: ಸಮೀಪದ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವುದನ್ನು ಸೋಮವಾರ (ಏ.5) ರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ.
ಮೊದಲು ಮಾ. 31 ರವರೆಗೆ ಮಾತ್ರ ನೀರು ಹರಿಸಲು ನಿರ್ಧರಿಸಲಾಗಿತ್ತು.
ಸುರಪುರ ಶಾಸಕ ರಾಜೂಗೌಡ ಅವರು ಉಪ ಮುಖ್ಯಮಂತ್ರಿ, ಐಸಿಸಿ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಏ.5 ರವರೆಗೂ ನೀರು ಹರಿಸುವಂತೆ ಮನವಿ ಮಾಡಿದ್ದರು. ಆದ್ದರಿಂದ ಏ. 5 ರವರೆಗೂ ನೀರು ಹರಿಸಲಾಯಿತು.
ರೈತರ ಬೆಳೆಗಳು ಕೈಗೆ ಬರಲು ಏ.10 ರವರೆಗೂ ನೀರು ಹರಿಸಬೇಕು ಎಂದು ಹಲವು ಸಂಘಟನೆಗಳು ಹಾಗೂ ಪ್ರಮುಖರು ಮನವಿ ಸಲ್ಲಿಸಿದ್ದರು.