ತಾಲ್ಲೂಕಿನ ಸಗರ ಗ್ರಾಮದವರಾದ ಮಹಾದೇವಪ್ಪ ಅಬ್ಸಿಹಾಳ ಮತ್ತು ಪತ್ನಿ ಭಾಗಮ್ಮ ಬೆಂಗಳೂರಿನಿಂದ ಸಂಕ್ರಾಂತಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಶಹಾಪುರದಲ್ಲಿ ಹಬ್ಬದ ಸಂತೆ ಮಾಡಿಕೊಂಡು ಸಗರ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ದುರ್ಘಟನೆ ನಡೆದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.