<p><strong>ಕಕ್ಕೇರಾ</strong>: ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಅವರು ಗುರುವಾರ ಪುರಸಭೆ ಕಚೇರಿ, ಉದ್ಘಾಟನೆಯಾಗದ ನೂತನ ಉಪ ತಹಶೀಲ್ದಾರ್ ಕಚೇರಿ, ಕಸ ವಿಲೇವಾಗಿ ಘಟಕ ಹಾಗೂ ಪ್ರವಾಹ ಪೀಡಿತ ನೀಲಕಂಠರಾಯನಗಡ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಗುರುವಾರ ಪುರಸಭೆಗೆ ಭೇಟಿ ನೀಡಿ ಕೆಲವೊಂದು ಕಡತಗಳನ್ನು ಪರಿಶೀಲಿಸಿ ಕಚೇರಿಯ ಪ್ರತಿಯೊಬ್ಬ ನೌಕರರು ಸರಿಯಾಗಿ ವೇಳೆಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಪಂದಿಸಬೇಕು ಎಂದು ಸೂಚಿಸಿದರು.</p>.<p>ನಂತರ ಹೊಸದಾಗಿ ಸಂತೆ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಹಾಗೂ ಉದ್ಘಾಟನೆಯಾಗದ ನೂತನ ಉಪ ತಹಶೀಲ್ದಾರ ಕಚೇರಿ ಪರಿಶೀಲಿಸಿ ನೂತನ ಕಟ್ಟಡದ ಪಕ್ಕ ಚರಂಡಿಯ ನಿಂತ ನೀರು, ಹೊಲಸು ಇತ್ಯಾದಿಗಳನ್ನು ಪರಿಶೀಲಿಸಿದರು. ನಂತರ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಕಸ ವಿಲೇವಾರಿ ಘಟಕದ ಕಾಮಗಾರಿ ವೀಕ್ಷಿಸಿದರು.</p>.<p>ಆನಂತರ ಪ್ರವಾಹ ಪೀಡಿತ ನೀಲಕಂಠರಾಯನಗಡ್ಡಿ ತೀರಕ್ಕೆ ಆಗಮಿಸಿ ಕೃಷ್ಣಾನದಿಯ ಪ್ರವಾಹವನ್ನು ಗಮನಿಸಿ ನದಿಗೆ ಎಷ್ಟು ಪ್ರಮಾಣದ ನೀರು ಬಂದರೆ ನಡುಗಡ್ಡಿಯ ಕಿರು ಸೇತುವೆ ಮುಳುಗಡೆಯಾಗಲಿದೆ ಎಂದು ಮಾಹಿತಿ ಪಡೆದರು.</p>.<p>’ನಡುಗಡ್ಡಿ ಜನರ ಸುರಕ್ಷತೆ ಹಾಗೂ ಪ್ರವಾಹದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ಸ್ಥಳದಲ್ಲಿದ್ದ ಪುರಸಭೆ ಮುಖ್ಯಧಿಕಾರಿ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಕಂದಾಯ ನಿರೀಕ್ಷಕ ಮಲಕಾಜಪ್ಪ , ಅಲ್ಲಾಭಕ್ಷ ಶ್ಯಾನಿ, ಮದನಸಾಬ, ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ</strong>: ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಅವರು ಗುರುವಾರ ಪುರಸಭೆ ಕಚೇರಿ, ಉದ್ಘಾಟನೆಯಾಗದ ನೂತನ ಉಪ ತಹಶೀಲ್ದಾರ್ ಕಚೇರಿ, ಕಸ ವಿಲೇವಾಗಿ ಘಟಕ ಹಾಗೂ ಪ್ರವಾಹ ಪೀಡಿತ ನೀಲಕಂಠರಾಯನಗಡ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಗುರುವಾರ ಪುರಸಭೆಗೆ ಭೇಟಿ ನೀಡಿ ಕೆಲವೊಂದು ಕಡತಗಳನ್ನು ಪರಿಶೀಲಿಸಿ ಕಚೇರಿಯ ಪ್ರತಿಯೊಬ್ಬ ನೌಕರರು ಸರಿಯಾಗಿ ವೇಳೆಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಪಂದಿಸಬೇಕು ಎಂದು ಸೂಚಿಸಿದರು.</p>.<p>ನಂತರ ಹೊಸದಾಗಿ ಸಂತೆ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಹಾಗೂ ಉದ್ಘಾಟನೆಯಾಗದ ನೂತನ ಉಪ ತಹಶೀಲ್ದಾರ ಕಚೇರಿ ಪರಿಶೀಲಿಸಿ ನೂತನ ಕಟ್ಟಡದ ಪಕ್ಕ ಚರಂಡಿಯ ನಿಂತ ನೀರು, ಹೊಲಸು ಇತ್ಯಾದಿಗಳನ್ನು ಪರಿಶೀಲಿಸಿದರು. ನಂತರ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಕಸ ವಿಲೇವಾರಿ ಘಟಕದ ಕಾಮಗಾರಿ ವೀಕ್ಷಿಸಿದರು.</p>.<p>ಆನಂತರ ಪ್ರವಾಹ ಪೀಡಿತ ನೀಲಕಂಠರಾಯನಗಡ್ಡಿ ತೀರಕ್ಕೆ ಆಗಮಿಸಿ ಕೃಷ್ಣಾನದಿಯ ಪ್ರವಾಹವನ್ನು ಗಮನಿಸಿ ನದಿಗೆ ಎಷ್ಟು ಪ್ರಮಾಣದ ನೀರು ಬಂದರೆ ನಡುಗಡ್ಡಿಯ ಕಿರು ಸೇತುವೆ ಮುಳುಗಡೆಯಾಗಲಿದೆ ಎಂದು ಮಾಹಿತಿ ಪಡೆದರು.</p>.<p>’ನಡುಗಡ್ಡಿ ಜನರ ಸುರಕ್ಷತೆ ಹಾಗೂ ಪ್ರವಾಹದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ಸ್ಥಳದಲ್ಲಿದ್ದ ಪುರಸಭೆ ಮುಖ್ಯಧಿಕಾರಿ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಕಂದಾಯ ನಿರೀಕ್ಷಕ ಮಲಕಾಜಪ್ಪ , ಅಲ್ಲಾಭಕ್ಷ ಶ್ಯಾನಿ, ಮದನಸಾಬ, ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>