<p>ಯಾದಗಿರಿ: ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ (ಪಿಎಂಜಿಎಸ್ವೈ) ಯೋಜನೆಯಡಿಗುರುಮಠಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದ ಜಮೀನುಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ, ವರ್ತೂರು ಪ್ರಕಾಶ್ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.</p>.<p>ಪಿಎಂಜಿಎಸ್ವೈ ಉಪವಿಭಾಗದಿಂದ ಯಡ್ಡಳ್ಳಿ ಗ್ರಾಮದಿಂದ ಕಟಗಿ ಶಹಾಪುರ, ವಾಯ ಹೊನಗೇರಾದಿಂದ ಯಾದಗಿರಿ ತೆರಳುವ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದು ರೈತರ ಜಮೀನುಗಳ ಮೇಲೆ ಹಾದು ಹೋಗಿದೆ. ಹೊನಗೇರ ಗ್ರಾಮದ ರೈತರು ಜಮೀನಿಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.</p>.<p>ಸಣ್ಣ ರೈತರ ಜಮೀನುಗಳಲ್ಲಿ ಬೆಳೆದಿದ್ದ ಸುಮಾರು 30ರಿಂದ 40 ಎಕರೆ ಪ್ರದೇಶದ ಬೆಳೆಗಳು ನಾಶವಾಗಿವೆ. ರಸ್ತೆ ಪಕ್ಕದ ಜಮೀನುಗಳಲ್ಲಿ ಭತ್ತ, ಹತ್ತಿ, ಶೇಂಗಾದಂತಹ ಬೆಳೆ ಬೆಳೆಯಲಾಗಿದೆ. 10ರಿಂದ 20 ಅಡಿ ರೈತರ ಜಮೀನು ವ್ಯಾಪ್ತಿಯೊಳಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು.</p>.<p>ಪಿಎಂಜಿಎಸ್ವೈ ಉಪವಿಭಾಗ ಯಾದಗಿರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ನಿರ್ಮಾಣದಲ್ಲಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ರಸ್ತೆಗೆ ಬಳಸಿಕೊಂಡ ಕೃಷಿ ಜಮೀನನ್ನು ಕೃಷಿಕರಿಗೆ ಮರಳಿಸದೆ ಇದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.</p>.<p>ಸಂಘಟನೆಯ ಜಿಲ್ಲಾ ಅಧ್ಯಕ್ಷ ಐಕೂರು ಅಶೋಕ, ಆಕಾಶ್ ಭಂಡಾರಿ, ಸಿದ್ದು ಕಾಳಿಗಿ, ಮರಲಿಂಗ ಸಿದ್ದನೂರ್, ಭೀಮಣ್ಣ ಗೊಬ್ಬೆನೋರ್, ಭೀಮಣ್ಣ ಅಕ್ಕಿ, ರಾಜು, ಮರಿಸ್ವಾಮಿ ಹೊನ್ನಪ್ಪ, ಮರಿಲಿಂಗ, ನಾಗಪ್ಪ ಹೊನಗೇರ, ಗ್ರಾಮದ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ (ಪಿಎಂಜಿಎಸ್ವೈ) ಯೋಜನೆಯಡಿಗುರುಮಠಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದ ಜಮೀನುಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ, ವರ್ತೂರು ಪ್ರಕಾಶ್ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.</p>.<p>ಪಿಎಂಜಿಎಸ್ವೈ ಉಪವಿಭಾಗದಿಂದ ಯಡ್ಡಳ್ಳಿ ಗ್ರಾಮದಿಂದ ಕಟಗಿ ಶಹಾಪುರ, ವಾಯ ಹೊನಗೇರಾದಿಂದ ಯಾದಗಿರಿ ತೆರಳುವ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದು ರೈತರ ಜಮೀನುಗಳ ಮೇಲೆ ಹಾದು ಹೋಗಿದೆ. ಹೊನಗೇರ ಗ್ರಾಮದ ರೈತರು ಜಮೀನಿಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.</p>.<p>ಸಣ್ಣ ರೈತರ ಜಮೀನುಗಳಲ್ಲಿ ಬೆಳೆದಿದ್ದ ಸುಮಾರು 30ರಿಂದ 40 ಎಕರೆ ಪ್ರದೇಶದ ಬೆಳೆಗಳು ನಾಶವಾಗಿವೆ. ರಸ್ತೆ ಪಕ್ಕದ ಜಮೀನುಗಳಲ್ಲಿ ಭತ್ತ, ಹತ್ತಿ, ಶೇಂಗಾದಂತಹ ಬೆಳೆ ಬೆಳೆಯಲಾಗಿದೆ. 10ರಿಂದ 20 ಅಡಿ ರೈತರ ಜಮೀನು ವ್ಯಾಪ್ತಿಯೊಳಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು.</p>.<p>ಪಿಎಂಜಿಎಸ್ವೈ ಉಪವಿಭಾಗ ಯಾದಗಿರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ನಿರ್ಮಾಣದಲ್ಲಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.</p>.<p>ರಸ್ತೆಗೆ ಬಳಸಿಕೊಂಡ ಕೃಷಿ ಜಮೀನನ್ನು ಕೃಷಿಕರಿಗೆ ಮರಳಿಸದೆ ಇದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.</p>.<p>ಸಂಘಟನೆಯ ಜಿಲ್ಲಾ ಅಧ್ಯಕ್ಷ ಐಕೂರು ಅಶೋಕ, ಆಕಾಶ್ ಭಂಡಾರಿ, ಸಿದ್ದು ಕಾಳಿಗಿ, ಮರಲಿಂಗ ಸಿದ್ದನೂರ್, ಭೀಮಣ್ಣ ಗೊಬ್ಬೆನೋರ್, ಭೀಮಣ್ಣ ಅಕ್ಕಿ, ರಾಜು, ಮರಿಸ್ವಾಮಿ ಹೊನ್ನಪ್ಪ, ಮರಿಲಿಂಗ, ನಾಗಪ್ಪ ಹೊನಗೇರ, ಗ್ರಾಮದ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>