<p><strong>ಯಾದಗಿರಿ</strong>: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳೇಇಲ್ಲ. ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ.</p>.<p>ಈ ಮೊದಲು ನಗರ ಆರೋಗ್ಯ ಕೇಂದ್ರ ಮಹಾತ್ಮ ಗಾಂಧಿ ವೃತ್ತದ ಸಮೀಪದ ರಾಠಿಭವನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿಂದ ಗಣೇಶ ನಗರಕ್ಕೆ ಸ್ಥಳಾಂತರಿಸಲಾಯಿತು. ಕಳೆದ ಒಂದೂವರೆ ವರ್ಷದಿಂದ ಡಿಎಚ್ಒ ಆವರಣದಲ್ಲಿ ಸಣ್ಣ ಕೊಠಡಿಯಲ್ಲಿ ಆರೋಗ್ಯ ಕೇಂದ್ರ ನಡೆಯುತ್ತಿದೆ.</p>.<p>ಔಷಧಿ ಉಗ್ರಾಣ ಪಕ್ಕದಲ್ಲಿರುವ, ಆಗಿನ ಜಿಲ್ಲಾ ಸರ್ವೇಕ್ಷಣಾ ಕಚೇರಿಯ ಸ್ಥಳವನ್ನೇ ನಗರ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಆದರೆ, ಇಲ್ಲಿ ಯಾವುದೇ ಸೌಲಭ್ಯಗಳು ಇಲ್ಲ.</p>.<p>ನಗರ ಆರೋಗ್ಯ ಕೇಂದ್ರ ಎಂದು ಗುರುತಿಸಲು ಯಾವುದೇ ನಾಮಫಲಕಗಳು ಇಲ್ಲ. ಹೊಸದಾಗಿ ಬಂದವರಿಗೆ ಯಾವುದೇ ಮಾಹಿತಿಯೂ ಲಭಿಸುವುದಿಲ್ಲ.</p>.<p>‘ಗಾಳಿ, ಮಳೆಗೆ ನಾಮಫಲಕ ಹಾರಿ ಹೋಗಿ ಬಿದ್ದಿದೆ. ಅದನ್ನು ಮತ್ತೆ ಅಳವಡಿಸಲಾಗುವುದು’ ಎನ್ನುತ್ತಾರೆ ವೈದ್ಯಾಧಿಕಾರಿ.</p>.<p>ಚಿಕಿತ್ಸೆಗೆಂದು ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ ಇಲ್ಲಿ ಸೌಲಭ್ಯಗಳ ಕೊರತೆ ಇದೆ. ಕುಳಿತುಕೊಳ್ಳಲು ಜಾಗ ಕೊರತೆ ಜತೆಗೆ ಸೂಕ್ತ ಆಸನ ವ್ಯವಸ್ಥೆಯೂ ಇಲ್ಲ. ಮೂತ್ರ ಪರೀಕ್ಷೆಗಾಗಿ ಡಿಎಚ್ಒ ಕಚೇರಿ ಒಳಗಿರುವ ಶೌಚಾಲಯವನ್ನು ಅವಲಂಬಿಸಬೇಕಾಗಿದೆ. ಕಟ್ಟಡ ಅಕ್ಕಪಕ್ಕದಲ್ಲೇ ಗಿಡಗಂಟಿ ಬೆಳೆದು ನಿಂತಿದೆ.</p>.<p>ಜಿಲ್ಲಾಸ್ಪತ್ರೆ ನಂತರ ನಗರ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ ಇದೆ. ಆದರೆ, ಇಲ್ಲಿರುವ ಆಸ್ಪತ್ರೆಯೇ ಸಮಸ್ಯೆಗಳ ಆಗರವಾಗಿದೆ. ನಗರ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ ಎಂದು ವೈದ್ಯರೇ ಒಪ್ಪಿಕೊಳ್ಳುತ್ತಾರೆ.</p>.<p class="Subhead"><strong>13 ಮಂದಿ ಸಿಬ್ಬಂದಿ:</strong>ನಗರ ಆರೋಗ್ಯ ಕೇಂದ್ರದಲ್ಲಿ 13 ಸಿಬ್ಬಂದಿ ಇದ್ದಾರೆ. ಇವರಲ್ಲಿ 7 ಮಂದಿ ಕಾಯಂ ಸಿಬ್ಬಂದಿ ಇದ್ದರೆ 6 ಜನ ಎರವಲು ಆಧಾರದ ಮೇಲೆ ಬಂದಿದ್ದಾರೆ. ಇಷ್ಟು ಸಿಬ್ಬಂದಿ ನಗರ ಆರೋಗ್ಯ ಕೇಂದ್ರದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಕೋವಿಡ್ ಲಸಿಕೆ ಕಾರ್ಯಕ್ಕೆಂದು ಸಿಬ್ಬಂದಿ ಹೊರಗಡೆಯೇ ಇರುತ್ತಾರೆ.</p>.<p class="Subhead"><strong>ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ</strong><br />ನಗರದ ಹಳೆ ಜಿಲ್ಲಾ ಆಸ್ಪತ್ರೆಯಲ್ಲಿಯೂ ಸೌಲಭ್ಯಗಳು ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಜನರೇಟರ್ ವ್ಯವಸ್ಥೆ ಇದ್ದರೂ ಸಮರ್ಪಕ ವ್ಯವಸ್ಥೆಇಲ್ಲದ ಕಾರಣ ಸೋಮವಾರ ರಾತ್ರಿ ರೋಗಿಗಳು ಕತ್ತಲೆಯಲ್ಲಿಕಾಲ ಕಳೆದಿದ್ದಾರೆ.</p>.<p>ಸೋಮವಾರ ಸಂಜೆ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಈ ವೇಳೆ ವಿದ್ಯುತ್ ಕಡಿತವಾಗಿತ್ತು. ಬಹಳ ಹೊತ್ತಿನ ವರೆಗೆ ವಿದ್ಯುತ್ ವ್ಯತ್ಯಯದಿಂದ ರೋಗಿಗಳು ಪರದಾಡಿದರು. ಮೊಬೈಲ್ ಟಾರ್ಚ್ ಬೆಳಕಲ್ಲಿ ಕಾಲ ಕಳೆದಿದ್ದಾರೆ.</p>.<p>ಮಹಿಳೆಯರು, ಮಕ್ಕಳು ನಿದ್ದೆ ಇಲ್ಲದೆ ಚಡಪಡಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲೇ ಇಂತಹ ಅವ್ಯವಸ್ಥೆ ಕಂಡು ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>***</p>.<p>ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ನಡೆಸುವಂತೆ ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಸೂಚಿಸಿದ್ದಾರೆ. ಹೀಗಾಗಿ ಕಟ್ಟಡದ ಹುಡುಕಾಟ ನಡೆದಿದೆ.<br /><em><strong>-ಡಾ.ಇಂದುಮತಿ ಕಾಮಶೆಟ್ಟಿ,ಡಿಎಚ್ಒ</strong></em></p>.<p>***</p>.<p>ಒಂದು ತಿಂಗಳಲ್ಲಿ ನಗರ ಆರೋಗ್ಯ ಕೇಂದ್ರವನ್ನು ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು. ಸೂಕ್ತ ಕಟ್ಟಡವನ್ನು ಪರಿಶೀಲಿಸುತ್ತಿದ್ದೇವೆ.<br /><em><strong>-ಡಾ.ನಾಗರಾಜ ಪಾಟೀಲ, ಆಡಳಿತ ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ</strong></em></p>.<p>***</p>.<p>ಸೌಲಭ್ಯಗಳು ಇಲ್ಲದಿದ್ದರೂ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲ ಕೆಲಸಗಳು ಸುಗಮವಾಗಿ ಆಗುತ್ತಿವೆ. ಸ್ಥಳಾಂತರ ಯೋಜನೆ ಮೇಲಾಧಿಕಾರಿಗಳದ್ದು.<br />-<em><strong>ಡಾ.ವಿನಿತಾ, ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ</strong></em></p>.<p>***</p>.<p>ನಗರ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು.<br /><em><strong>-ಸೋಮಶೇಖರ ಮಸ್ಕನಳ್ಳಿ, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳೇಇಲ್ಲ. ಇದರಿಂದ ರೋಗಿಗಳು ಪರದಾಡುತ್ತಿದ್ದಾರೆ.</p>.<p>ಈ ಮೊದಲು ನಗರ ಆರೋಗ್ಯ ಕೇಂದ್ರ ಮಹಾತ್ಮ ಗಾಂಧಿ ವೃತ್ತದ ಸಮೀಪದ ರಾಠಿಭವನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿಂದ ಗಣೇಶ ನಗರಕ್ಕೆ ಸ್ಥಳಾಂತರಿಸಲಾಯಿತು. ಕಳೆದ ಒಂದೂವರೆ ವರ್ಷದಿಂದ ಡಿಎಚ್ಒ ಆವರಣದಲ್ಲಿ ಸಣ್ಣ ಕೊಠಡಿಯಲ್ಲಿ ಆರೋಗ್ಯ ಕೇಂದ್ರ ನಡೆಯುತ್ತಿದೆ.</p>.<p>ಔಷಧಿ ಉಗ್ರಾಣ ಪಕ್ಕದಲ್ಲಿರುವ, ಆಗಿನ ಜಿಲ್ಲಾ ಸರ್ವೇಕ್ಷಣಾ ಕಚೇರಿಯ ಸ್ಥಳವನ್ನೇ ನಗರ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಆದರೆ, ಇಲ್ಲಿ ಯಾವುದೇ ಸೌಲಭ್ಯಗಳು ಇಲ್ಲ.</p>.<p>ನಗರ ಆರೋಗ್ಯ ಕೇಂದ್ರ ಎಂದು ಗುರುತಿಸಲು ಯಾವುದೇ ನಾಮಫಲಕಗಳು ಇಲ್ಲ. ಹೊಸದಾಗಿ ಬಂದವರಿಗೆ ಯಾವುದೇ ಮಾಹಿತಿಯೂ ಲಭಿಸುವುದಿಲ್ಲ.</p>.<p>‘ಗಾಳಿ, ಮಳೆಗೆ ನಾಮಫಲಕ ಹಾರಿ ಹೋಗಿ ಬಿದ್ದಿದೆ. ಅದನ್ನು ಮತ್ತೆ ಅಳವಡಿಸಲಾಗುವುದು’ ಎನ್ನುತ್ತಾರೆ ವೈದ್ಯಾಧಿಕಾರಿ.</p>.<p>ಚಿಕಿತ್ಸೆಗೆಂದು ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ ಇಲ್ಲಿ ಸೌಲಭ್ಯಗಳ ಕೊರತೆ ಇದೆ. ಕುಳಿತುಕೊಳ್ಳಲು ಜಾಗ ಕೊರತೆ ಜತೆಗೆ ಸೂಕ್ತ ಆಸನ ವ್ಯವಸ್ಥೆಯೂ ಇಲ್ಲ. ಮೂತ್ರ ಪರೀಕ್ಷೆಗಾಗಿ ಡಿಎಚ್ಒ ಕಚೇರಿ ಒಳಗಿರುವ ಶೌಚಾಲಯವನ್ನು ಅವಲಂಬಿಸಬೇಕಾಗಿದೆ. ಕಟ್ಟಡ ಅಕ್ಕಪಕ್ಕದಲ್ಲೇ ಗಿಡಗಂಟಿ ಬೆಳೆದು ನಿಂತಿದೆ.</p>.<p>ಜಿಲ್ಲಾಸ್ಪತ್ರೆ ನಂತರ ನಗರ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ ಇದೆ. ಆದರೆ, ಇಲ್ಲಿರುವ ಆಸ್ಪತ್ರೆಯೇ ಸಮಸ್ಯೆಗಳ ಆಗರವಾಗಿದೆ. ನಗರ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ ಎಂದು ವೈದ್ಯರೇ ಒಪ್ಪಿಕೊಳ್ಳುತ್ತಾರೆ.</p>.<p class="Subhead"><strong>13 ಮಂದಿ ಸಿಬ್ಬಂದಿ:</strong>ನಗರ ಆರೋಗ್ಯ ಕೇಂದ್ರದಲ್ಲಿ 13 ಸಿಬ್ಬಂದಿ ಇದ್ದಾರೆ. ಇವರಲ್ಲಿ 7 ಮಂದಿ ಕಾಯಂ ಸಿಬ್ಬಂದಿ ಇದ್ದರೆ 6 ಜನ ಎರವಲು ಆಧಾರದ ಮೇಲೆ ಬಂದಿದ್ದಾರೆ. ಇಷ್ಟು ಸಿಬ್ಬಂದಿ ನಗರ ಆರೋಗ್ಯ ಕೇಂದ್ರದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಕೋವಿಡ್ ಲಸಿಕೆ ಕಾರ್ಯಕ್ಕೆಂದು ಸಿಬ್ಬಂದಿ ಹೊರಗಡೆಯೇ ಇರುತ್ತಾರೆ.</p>.<p class="Subhead"><strong>ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ</strong><br />ನಗರದ ಹಳೆ ಜಿಲ್ಲಾ ಆಸ್ಪತ್ರೆಯಲ್ಲಿಯೂ ಸೌಲಭ್ಯಗಳು ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಜನರೇಟರ್ ವ್ಯವಸ್ಥೆ ಇದ್ದರೂ ಸಮರ್ಪಕ ವ್ಯವಸ್ಥೆಇಲ್ಲದ ಕಾರಣ ಸೋಮವಾರ ರಾತ್ರಿ ರೋಗಿಗಳು ಕತ್ತಲೆಯಲ್ಲಿಕಾಲ ಕಳೆದಿದ್ದಾರೆ.</p>.<p>ಸೋಮವಾರ ಸಂಜೆ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಈ ವೇಳೆ ವಿದ್ಯುತ್ ಕಡಿತವಾಗಿತ್ತು. ಬಹಳ ಹೊತ್ತಿನ ವರೆಗೆ ವಿದ್ಯುತ್ ವ್ಯತ್ಯಯದಿಂದ ರೋಗಿಗಳು ಪರದಾಡಿದರು. ಮೊಬೈಲ್ ಟಾರ್ಚ್ ಬೆಳಕಲ್ಲಿ ಕಾಲ ಕಳೆದಿದ್ದಾರೆ.</p>.<p>ಮಹಿಳೆಯರು, ಮಕ್ಕಳು ನಿದ್ದೆ ಇಲ್ಲದೆ ಚಡಪಡಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲೇ ಇಂತಹ ಅವ್ಯವಸ್ಥೆ ಕಂಡು ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>***</p>.<p>ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ನಡೆಸುವಂತೆ ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಸೂಚಿಸಿದ್ದಾರೆ. ಹೀಗಾಗಿ ಕಟ್ಟಡದ ಹುಡುಕಾಟ ನಡೆದಿದೆ.<br /><em><strong>-ಡಾ.ಇಂದುಮತಿ ಕಾಮಶೆಟ್ಟಿ,ಡಿಎಚ್ಒ</strong></em></p>.<p>***</p>.<p>ಒಂದು ತಿಂಗಳಲ್ಲಿ ನಗರ ಆರೋಗ್ಯ ಕೇಂದ್ರವನ್ನು ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು. ಸೂಕ್ತ ಕಟ್ಟಡವನ್ನು ಪರಿಶೀಲಿಸುತ್ತಿದ್ದೇವೆ.<br /><em><strong>-ಡಾ.ನಾಗರಾಜ ಪಾಟೀಲ, ಆಡಳಿತ ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ</strong></em></p>.<p>***</p>.<p>ಸೌಲಭ್ಯಗಳು ಇಲ್ಲದಿದ್ದರೂ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲ ಕೆಲಸಗಳು ಸುಗಮವಾಗಿ ಆಗುತ್ತಿವೆ. ಸ್ಥಳಾಂತರ ಯೋಜನೆ ಮೇಲಾಧಿಕಾರಿಗಳದ್ದು.<br />-<em><strong>ಡಾ.ವಿನಿತಾ, ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ</strong></em></p>.<p>***</p>.<p>ನಗರ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು.<br /><em><strong>-ಸೋಮಶೇಖರ ಮಸ್ಕನಳ್ಳಿ, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>