<p><strong>ಸೈದಾಪುರ (ಯಾದಗಿರಿ ಜಿಲ್ಲೆ):</strong> ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರು ಶವ ಸಂಸ್ಕಾರಕ್ಕಾಗಿ ಎಂದೂ ಸ್ಮಶಾನದ ಹಾದಿ ಹಿಡಿದವರಲ್ಲ. ಆದರೆ, ಸಮೀಪದ ತುರ್ಕಲದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಮುಸ್ಲಿಂ ಮಹಿಳೆಯರೇ ವ್ಯಕ್ತಿಯೊಬ್ಬರ ಶವಸಂಸ್ಕಾರ ಮಾಡಿದ್ದಾರೆ.</p>.<p>ತುರ್ಕಲದೊಡ್ಡಿ ಗ್ರಾಮದಲ್ಲಿ ಖಬರಸ್ತಾನದಸ್ಥಳ ಕುರಿತು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಹುದಿನಗಳಿಂದ ವಿವಾದ ಇದೆ. ಶುಕ್ರವಾರ ಮೃತಪಟ್ಟ ಈ ಗ್ರಾಮದ ಖಾನಸಾಬ್ (55) ಅವರ ಅಂತ್ಯ ಸಂಸ್ಕಾರವನ್ನು ಈ ವಿವಾದಿತ ಸ್ಥಳದಲ್ಲಿ ನೆರವೇರಿಸಲು ಮುಸ್ಲಿಂ ಸಮುದಾಯದವರು ತೀರ್ಮಾನಿಸಿ, ಅದಕ್ಕೆ ತಯಾರಿ ಮಾಡಿದ್ದರು.</p>.<p>ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು, ‘ಈ ಜಾಗದಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ’ ಎಂದು ಹೇಳಿ ಅಂತ್ಯಸಂಸ್ಕಾರ ತಡೆಯಲು ಯತ್ನಿಸಿದರು. ಆಗ ಗ್ರಾಮದ ಮುಸ್ಲಿಮರು ಮತ್ತು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.</p>.<p>ಈ ಸಂದರ್ಭ ಮುಸ್ಲಿಂ ಮಹಿಳೆಯರೇ ಶವವನ್ನು ಹೊತ್ತುಕೊಂಡು ಹೋಗಿ, ವಿವಾದಿತ ಖಬರಸ್ತಾನದಲ್ಲಿಯೇ ಗುಂಡಿ ತೋಡಿ ಅಂತ್ಯಸಂಸ್ಕಾರ ನೆರವೇರಿಸಿದರು.</p>.<p>‘ಖಬರಸ್ತಾನ ಇರುವ ಜಾಗದ ಬಗ್ಗೆ ವಿವಾದ ಇದೆ.ಅದರ ಪಕ್ಕದಲ್ಲಿಯೇ ಸರ್ಕಾರಿ ಗೈರಾಣಿ ಭೂಮಿ ಇದ್ದು, ಈ ಹಿಂದೆ ಇಬ್ಬರ ಅಂತ್ಯ ಸಂಸ್ಕಾರ ಅಲ್ಲಿ ಮಾಡಲಾಗಿದೆ. ಆದರೆ, ಶುಕ್ರವಾರ ಮತ್ತೆ ವಿವಾದಿತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದೇವೆ’ ಎಂದು ಸೈದಾಪುರ ಪಿಎಸ್ಐ ಎನ್.ವೈ.ಗುಂಡೂರಾವ್ಪ್ರತಿಕ್ರಿಯಿಸಿದರು.</p>.<p>‘ಖಬರಸ್ತಾನಕ್ಕಾಗಿ ಬೇರೆಡೆ ಸ್ಥಳ ಒದಗಿಸಿ ಕೊಡಲಾಗುವುದು’ ಎಂದು ಗುರುಮಠಕಲ್ ತಹಶೀಲ್ದಾರ್ಶ್ರೀಧರ್ ಆಚಾರ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೈದಾಪುರ (ಯಾದಗಿರಿ ಜಿಲ್ಲೆ):</strong> ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರು ಶವ ಸಂಸ್ಕಾರಕ್ಕಾಗಿ ಎಂದೂ ಸ್ಮಶಾನದ ಹಾದಿ ಹಿಡಿದವರಲ್ಲ. ಆದರೆ, ಸಮೀಪದ ತುರ್ಕಲದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಮುಸ್ಲಿಂ ಮಹಿಳೆಯರೇ ವ್ಯಕ್ತಿಯೊಬ್ಬರ ಶವಸಂಸ್ಕಾರ ಮಾಡಿದ್ದಾರೆ.</p>.<p>ತುರ್ಕಲದೊಡ್ಡಿ ಗ್ರಾಮದಲ್ಲಿ ಖಬರಸ್ತಾನದಸ್ಥಳ ಕುರಿತು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಹುದಿನಗಳಿಂದ ವಿವಾದ ಇದೆ. ಶುಕ್ರವಾರ ಮೃತಪಟ್ಟ ಈ ಗ್ರಾಮದ ಖಾನಸಾಬ್ (55) ಅವರ ಅಂತ್ಯ ಸಂಸ್ಕಾರವನ್ನು ಈ ವಿವಾದಿತ ಸ್ಥಳದಲ್ಲಿ ನೆರವೇರಿಸಲು ಮುಸ್ಲಿಂ ಸಮುದಾಯದವರು ತೀರ್ಮಾನಿಸಿ, ಅದಕ್ಕೆ ತಯಾರಿ ಮಾಡಿದ್ದರು.</p>.<p>ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು, ‘ಈ ಜಾಗದಲ್ಲಿ ಶವ ಸಂಸ್ಕಾರ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ’ ಎಂದು ಹೇಳಿ ಅಂತ್ಯಸಂಸ್ಕಾರ ತಡೆಯಲು ಯತ್ನಿಸಿದರು. ಆಗ ಗ್ರಾಮದ ಮುಸ್ಲಿಮರು ಮತ್ತು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.</p>.<p>ಈ ಸಂದರ್ಭ ಮುಸ್ಲಿಂ ಮಹಿಳೆಯರೇ ಶವವನ್ನು ಹೊತ್ತುಕೊಂಡು ಹೋಗಿ, ವಿವಾದಿತ ಖಬರಸ್ತಾನದಲ್ಲಿಯೇ ಗುಂಡಿ ತೋಡಿ ಅಂತ್ಯಸಂಸ್ಕಾರ ನೆರವೇರಿಸಿದರು.</p>.<p>‘ಖಬರಸ್ತಾನ ಇರುವ ಜಾಗದ ಬಗ್ಗೆ ವಿವಾದ ಇದೆ.ಅದರ ಪಕ್ಕದಲ್ಲಿಯೇ ಸರ್ಕಾರಿ ಗೈರಾಣಿ ಭೂಮಿ ಇದ್ದು, ಈ ಹಿಂದೆ ಇಬ್ಬರ ಅಂತ್ಯ ಸಂಸ್ಕಾರ ಅಲ್ಲಿ ಮಾಡಲಾಗಿದೆ. ಆದರೆ, ಶುಕ್ರವಾರ ಮತ್ತೆ ವಿವಾದಿತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದೇವೆ’ ಎಂದು ಸೈದಾಪುರ ಪಿಎಸ್ಐ ಎನ್.ವೈ.ಗುಂಡೂರಾವ್ಪ್ರತಿಕ್ರಿಯಿಸಿದರು.</p>.<p>‘ಖಬರಸ್ತಾನಕ್ಕಾಗಿ ಬೇರೆಡೆ ಸ್ಥಳ ಒದಗಿಸಿ ಕೊಡಲಾಗುವುದು’ ಎಂದು ಗುರುಮಠಕಲ್ ತಹಶೀಲ್ದಾರ್ಶ್ರೀಧರ್ ಆಚಾರ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>