<p><strong>ಗುರುಮಠಕಲ್</strong>: ‘ಬಿಜೆಪಿ ಮತ್ತೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಜೆಸಿಬಿ ಪಕ್ಷದ ಮೂಲಕ ಸ್ಪಷ್ಟ ಬಹುಮತದೊಡನೆ ಅಧಿಕಾರಕ್ಕೆ ಬರುವೆ. ಯೋಗಿ ಆದಿತ್ಯನಾಥ ಮಾದರಿ ಸರ್ಕಾರ ನಡೆಸುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ಪಟ್ಟಣದಲ್ಲಿ ಹಿಂದೂ ಯುವ ಘರ್ಜನೆ ಸಮತಿ ವತಿಯಿಂದ ಶನಿವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇಂದು ಹಿಂದೂ ಕಾರ್ಯಕರ್ತರ ಕಷ್ಟಗಳು ಹೇಳಲಾಗದು. ಹಿಂದೂಗಳ ಉತ್ಸವಗಳ ಮೇಲೆ ಕಲ್ಲು ತೂರುವ ಕೆಲವಾಗುತ್ತಿದೆ. ಹಿಂದೂ ಕಾರ್ಯಕ್ರಮ ಆಯೋಜಿಸಲು ಹಲವು ಷರತ್ತುಗಳನ್ನು ಸರ್ಕಾರ ವಿಧಿಸುತ್ತಿದೆ’ ಎಂದರು.</p>.<p>‘ನಾನು ಅಧಿಕಾರಕ್ಕೆ ಬರುತ್ತಲೇ ಹಿಂದೂ ಕಾರ್ಯಕರ್ತರ ಮೇಲಿನ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ. ನನ್ನ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಮತ ಯಾಚಿಸಿಲ್ಲ, ಮುಂದೆಯೂ ಕೇಳುವುದಿಲ್ಲ’ ಎಂದರು.</p>.<p>‘ಡಾ. ಅಂಬೇಡ್ಕರ್ ಅವರು ತಮ್ಮ ಪುಸ್ತಕದಲ್ಲಿ ಪಾಪುಲೇಶನ್ ಎಕ್ಸ್ಚೇಂಜ್ ಮಾಡುವಂತೆ ಹೇಳಿದ್ದರು. ಆದರೆ ಅದು ಆಗಲಿಲ್ಲ. ಪಟೇಲ್, ಅಂಬೇಡ್ಕರ್, ನೇತಾಜಿ ಅವರಲ್ಲಿ ಒಬ್ಬರು ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಆದರೆ ನೆಹರು ಪ್ರಧಾನಿ ಆದರು’ ಎಂದರು.</p>.<p>‘ಅಂಬೇಡ್ಕರ್ ಅವರು ದೇಶದ ನಾಯಕ. ಆದರೆ, ಕೆಲವರು ಅವರನ್ನು ಕೇವಲ ‘ದಲಿತ ನಾಯಕ’ ಎನ್ನುವ ಸ್ಥಿತಿಗೆ ತರುವ ಮೂಲಕ ತಮ್ಮ ಕುಟುಂಬ ರಾಜಕೀಯದಲ್ಲಿ ತೊಡಗಿದ್ದರು. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹನೀಯರ ಪುತ್ಥಳಿಗಳನ್ನು ಪಟ್ಟಣದ ಮಧ್ಯಭಾಗದಲ್ಲಿ ಒಂದೆಡೆಯೇ ಸ್ಥಾಪಿಸೋಣ’ ಎಂದರು.</p>.<p>‘ಕಂದಕೂರ ಕುಟುಂಬದವರು ಶಾಸಕರಾದ ನಂತರ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಮತ್ತು ಡಾ.ಬಾಬೂಜಿ ಮೂರ್ತಿಗಳು ನಿರ್ಮಾಣಗೊಂಡವು. ಗುರುಮಠಕಲ್ನಲ್ಲಿ ಸುದೀರ್ಘ ಅಧಿಕಾರದಲ್ಲಿದ್ದವರು ಯಾಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.</p>.<p>‘ಶಿವಾಜಿ ಮಹಾರಾಜ, ಮಹಾರಾಣ ಪ್ರತಾಪ ಅವರಂತಹ ಹಲವು ಮಹನೀಯರ ಹೋರಾಟದ ಕಾರಣಕ್ಕೆ ಮತ್ತು ನಮ್ಮ ಪೂರ್ವಿಕರ ಧೈರ್ಯದ ಫಲವಾಗಿ ನಾವಿಂದು ಹಿಂದೂಗಳಾಗಿ ಉಳಿದಿದ್ದೇವೆ’ ಎಂದರು.</p>.<p>‘ಎಸ್ಐಆರ್ ಮೂಲಕ ಅಕ್ರಮ ವಲಸಿಗ ರೊಹಿಂಗ್ಯಾಗಳನ್ನು ಗುರುತಿಸುವ ಕೆಲಸವಾಗುತ್ತಿದೆ. ಅವರ ಪರವಾಗಿ ಕೋರ್ಟ್ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಾಡಿದರು. ಆದರೆ, ಕೋರ್ಟ್ ಅವರಿಗೆ ಮುಖಭಂಗಮಾಡಿದೆ’ ಎಂದರು.</p>.<p>‘ಸಿಎಂ ಸಿದ್ದರಾಮಯ್ಯ ಅವರಿಗೂ ಮತ್ತು ಸಭಾಪತಿ ಯು.ಟಿ.ಖಾದರ್ ಅವರನ್ನು ನಾನು ಖಾರವಾಗಿಯೇ ಪ್ರಶ್ನಿಸಿದ್ದೇನೆ. ಈಗಲೂ ಮತ್ತೆ ನನ್ನ ವಿರುದ್ಧ ಪ್ರಕರಣ ದಾಖಲಾಗಬಹುದು. ಅದಕ್ಕೆ ಬೆದರುವ ವ್ಯಕ್ತಿ ನಾನಲ್ಲ’ ಎಂದರು.</p>.<p>ಹೈದ್ರಾಬಾದ್ನ ಅಮೋಘ ದೇಶಪತಿ ಮಾತನಾಡಿ, ‘ನಮ್ಮ ಪೂರ್ವಿಕರು ಎದೆಕೊಟ್ಟು ಹೋರಾಡಿದ ಮತ್ತು ಸ್ವಾಭಿಮಾನಿಗಳಾಗಿ ಜೀವಿಸಿದ ಕಾರಣ ನಾವಿನ್ನೂ ಉಳಿದಿದ್ದೇವೆ. ನಾವೀಗ ಹಿಂದುತ್ವದ ಘರ್ಜನೆ ಮಾಡದಿದ್ದರೆ ಪಶ್ಚಿಮ ಬಂಗಾಳ, ಕಾಶ್ಮೀರದ ಸ್ಥಿತಿ ನಮಗೂ ಬರಲಿದೆ’ ಎಂದರು.</p>.<p>‘ಮುಂದಿನ ದಿನಗಳಲ್ಲಿ ಹಿಂದುತ್ವದ ಕೆಲಸ ಮಾಡುವ ಕಾರ್ಯಕರ್ತರ ಬೆಂಬಲ ಮತ್ತು ಸಹಕಾರಕ್ಕೆ ನಾನೂ ನಿಲ್ಲುವೆ. ನಿಮ್ಮೊಡನೆ ಸತತ ಸಂಪರ್ಕದಲ್ಲಿರುವೆ’ ಎಂದರು.</p>.<p>ಸಂಸದ ಡಾ.ಉಮೇಶ ಜಾದವ್ ಸೇರಿದಂತೆ ಹಿಂದೂ ಯುವ ಘರ್ಜನೆ ಸಮಿತಿಯವರು ಉಪಸ್ಥಿತರಿದ್ದರು.</p>.<div><blockquote>ಈಗಿನ ನಿಮ್ಮ ಸಂಸದ ಎಲ್ಲಿಯಾದರೂ ಕಾಣುವರೇ?. ಸ್ವಪಕ್ಷಿಯರಿಂದಾಗಿ ಡಾ.ಜಾದವ್ ಸೋತರು. ಮುಂದಿನ ಚುನಾವಣೆಯಲ್ಲಿ ಅವರು ಮತ್ತೆ ಆಯ್ಕೆಯಾಗುವರು.</blockquote><span class="attribution">– ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್</strong>: ‘ಬಿಜೆಪಿ ಮತ್ತೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಜೆಸಿಬಿ ಪಕ್ಷದ ಮೂಲಕ ಸ್ಪಷ್ಟ ಬಹುಮತದೊಡನೆ ಅಧಿಕಾರಕ್ಕೆ ಬರುವೆ. ಯೋಗಿ ಆದಿತ್ಯನಾಥ ಮಾದರಿ ಸರ್ಕಾರ ನಡೆಸುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.</p>.<p>ಪಟ್ಟಣದಲ್ಲಿ ಹಿಂದೂ ಯುವ ಘರ್ಜನೆ ಸಮತಿ ವತಿಯಿಂದ ಶನಿವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇಂದು ಹಿಂದೂ ಕಾರ್ಯಕರ್ತರ ಕಷ್ಟಗಳು ಹೇಳಲಾಗದು. ಹಿಂದೂಗಳ ಉತ್ಸವಗಳ ಮೇಲೆ ಕಲ್ಲು ತೂರುವ ಕೆಲವಾಗುತ್ತಿದೆ. ಹಿಂದೂ ಕಾರ್ಯಕ್ರಮ ಆಯೋಜಿಸಲು ಹಲವು ಷರತ್ತುಗಳನ್ನು ಸರ್ಕಾರ ವಿಧಿಸುತ್ತಿದೆ’ ಎಂದರು.</p>.<p>‘ನಾನು ಅಧಿಕಾರಕ್ಕೆ ಬರುತ್ತಲೇ ಹಿಂದೂ ಕಾರ್ಯಕರ್ತರ ಮೇಲಿನ ಎಲ್ಲಾ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ. ನನ್ನ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಮತ ಯಾಚಿಸಿಲ್ಲ, ಮುಂದೆಯೂ ಕೇಳುವುದಿಲ್ಲ’ ಎಂದರು.</p>.<p>‘ಡಾ. ಅಂಬೇಡ್ಕರ್ ಅವರು ತಮ್ಮ ಪುಸ್ತಕದಲ್ಲಿ ಪಾಪುಲೇಶನ್ ಎಕ್ಸ್ಚೇಂಜ್ ಮಾಡುವಂತೆ ಹೇಳಿದ್ದರು. ಆದರೆ ಅದು ಆಗಲಿಲ್ಲ. ಪಟೇಲ್, ಅಂಬೇಡ್ಕರ್, ನೇತಾಜಿ ಅವರಲ್ಲಿ ಒಬ್ಬರು ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಆದರೆ ನೆಹರು ಪ್ರಧಾನಿ ಆದರು’ ಎಂದರು.</p>.<p>‘ಅಂಬೇಡ್ಕರ್ ಅವರು ದೇಶದ ನಾಯಕ. ಆದರೆ, ಕೆಲವರು ಅವರನ್ನು ಕೇವಲ ‘ದಲಿತ ನಾಯಕ’ ಎನ್ನುವ ಸ್ಥಿತಿಗೆ ತರುವ ಮೂಲಕ ತಮ್ಮ ಕುಟುಂಬ ರಾಜಕೀಯದಲ್ಲಿ ತೊಡಗಿದ್ದರು. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹನೀಯರ ಪುತ್ಥಳಿಗಳನ್ನು ಪಟ್ಟಣದ ಮಧ್ಯಭಾಗದಲ್ಲಿ ಒಂದೆಡೆಯೇ ಸ್ಥಾಪಿಸೋಣ’ ಎಂದರು.</p>.<p>‘ಕಂದಕೂರ ಕುಟುಂಬದವರು ಶಾಸಕರಾದ ನಂತರ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಮತ್ತು ಡಾ.ಬಾಬೂಜಿ ಮೂರ್ತಿಗಳು ನಿರ್ಮಾಣಗೊಂಡವು. ಗುರುಮಠಕಲ್ನಲ್ಲಿ ಸುದೀರ್ಘ ಅಧಿಕಾರದಲ್ಲಿದ್ದವರು ಯಾಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.</p>.<p>‘ಶಿವಾಜಿ ಮಹಾರಾಜ, ಮಹಾರಾಣ ಪ್ರತಾಪ ಅವರಂತಹ ಹಲವು ಮಹನೀಯರ ಹೋರಾಟದ ಕಾರಣಕ್ಕೆ ಮತ್ತು ನಮ್ಮ ಪೂರ್ವಿಕರ ಧೈರ್ಯದ ಫಲವಾಗಿ ನಾವಿಂದು ಹಿಂದೂಗಳಾಗಿ ಉಳಿದಿದ್ದೇವೆ’ ಎಂದರು.</p>.<p>‘ಎಸ್ಐಆರ್ ಮೂಲಕ ಅಕ್ರಮ ವಲಸಿಗ ರೊಹಿಂಗ್ಯಾಗಳನ್ನು ಗುರುತಿಸುವ ಕೆಲಸವಾಗುತ್ತಿದೆ. ಅವರ ಪರವಾಗಿ ಕೋರ್ಟ್ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಾಡಿದರು. ಆದರೆ, ಕೋರ್ಟ್ ಅವರಿಗೆ ಮುಖಭಂಗಮಾಡಿದೆ’ ಎಂದರು.</p>.<p>‘ಸಿಎಂ ಸಿದ್ದರಾಮಯ್ಯ ಅವರಿಗೂ ಮತ್ತು ಸಭಾಪತಿ ಯು.ಟಿ.ಖಾದರ್ ಅವರನ್ನು ನಾನು ಖಾರವಾಗಿಯೇ ಪ್ರಶ್ನಿಸಿದ್ದೇನೆ. ಈಗಲೂ ಮತ್ತೆ ನನ್ನ ವಿರುದ್ಧ ಪ್ರಕರಣ ದಾಖಲಾಗಬಹುದು. ಅದಕ್ಕೆ ಬೆದರುವ ವ್ಯಕ್ತಿ ನಾನಲ್ಲ’ ಎಂದರು.</p>.<p>ಹೈದ್ರಾಬಾದ್ನ ಅಮೋಘ ದೇಶಪತಿ ಮಾತನಾಡಿ, ‘ನಮ್ಮ ಪೂರ್ವಿಕರು ಎದೆಕೊಟ್ಟು ಹೋರಾಡಿದ ಮತ್ತು ಸ್ವಾಭಿಮಾನಿಗಳಾಗಿ ಜೀವಿಸಿದ ಕಾರಣ ನಾವಿನ್ನೂ ಉಳಿದಿದ್ದೇವೆ. ನಾವೀಗ ಹಿಂದುತ್ವದ ಘರ್ಜನೆ ಮಾಡದಿದ್ದರೆ ಪಶ್ಚಿಮ ಬಂಗಾಳ, ಕಾಶ್ಮೀರದ ಸ್ಥಿತಿ ನಮಗೂ ಬರಲಿದೆ’ ಎಂದರು.</p>.<p>‘ಮುಂದಿನ ದಿನಗಳಲ್ಲಿ ಹಿಂದುತ್ವದ ಕೆಲಸ ಮಾಡುವ ಕಾರ್ಯಕರ್ತರ ಬೆಂಬಲ ಮತ್ತು ಸಹಕಾರಕ್ಕೆ ನಾನೂ ನಿಲ್ಲುವೆ. ನಿಮ್ಮೊಡನೆ ಸತತ ಸಂಪರ್ಕದಲ್ಲಿರುವೆ’ ಎಂದರು.</p>.<p>ಸಂಸದ ಡಾ.ಉಮೇಶ ಜಾದವ್ ಸೇರಿದಂತೆ ಹಿಂದೂ ಯುವ ಘರ್ಜನೆ ಸಮಿತಿಯವರು ಉಪಸ್ಥಿತರಿದ್ದರು.</p>.<div><blockquote>ಈಗಿನ ನಿಮ್ಮ ಸಂಸದ ಎಲ್ಲಿಯಾದರೂ ಕಾಣುವರೇ?. ಸ್ವಪಕ್ಷಿಯರಿಂದಾಗಿ ಡಾ.ಜಾದವ್ ಸೋತರು. ಮುಂದಿನ ಚುನಾವಣೆಯಲ್ಲಿ ಅವರು ಮತ್ತೆ ಆಯ್ಕೆಯಾಗುವರು.</blockquote><span class="attribution">– ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>