ಘಟನೆ ವಿವರ: ಫಯಾಜ್ ಮನೆಯಲ್ಲೇ ರೊಟ್ಟಿ ಅಂಗಡಿ ನಡೆಸುತ್ತಿದ್ದರು. ಮನೆ ಸಮೀಪದಲ್ಲೇ ಇದ್ದ ರೊಟ್ಟಿ ಅಂಗಡಿಗೆ ರಾಕೇಶ್ ರಾತ್ರಿಯಾದರೂ ಬಂದು ಮನೆ ಬಾಗಿಲು ಬಡಿದು ರೊಟ್ಟಿ ಕೇಳಿದ್ದ. ರೊಟ್ಟಿ ಇಲ್ಲವೆಂದು ಫಯಾಜ್ ಕುಟುಂಬದವರು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ರಾಕೇಶ್, ಯಾಕೆ ರೊಟ್ಟಿ ಅಂಗಡಿ ಇಟ್ಟಿದ್ದೀರಿ ಎಂದು ಬೈಯುತ್ತ ಮನೆಗೆ ಹೋಗಿದ್ದ. ತಡರಾತ್ರಿ ಫಯಾಜ್, ಆಸೀಫ್ ಹಾಗೂ ಇತರರು ರಾಕೇಶ್ ಮನೆಗೆ ಬಂದು, ರಾತ್ರಿ ರೊಟ್ಟಿ ಕೇಳಲು ಏಕೆ ಬಂದಿದ್ದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಾತಿ ನಿಂದಿಸಿ ರಾಕೇಶ್ನನ್ನು ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.