<p><strong>ಯಾದಗಿರಿ:</strong> ನಗರದ ಪ್ರಮುಖ ರಸ್ತೆಗಳಲ್ಲಿರುವ ಕೈಪಂಪ್ಗಳು ಕೆಟ್ಟು ಹೋಗಿದ್ದು, ಸಾರ್ವಜನಿಕರು, ಮಕ್ಕಳು ಪರದಾಡುವಂತಾಗಿದೆ. ಕೂಡಲೇ ಇವುಗಳನ್ನು ದುರಸ್ತಿ ಮಾಡಬೇಕು ಎಂದು ಟೋಕರಿ ಕೋಲಿ ಸಮಾಜ ಒತ್ತಾಯಿಸಿದೆ. <br /> <br /> ಇಲ್ಲಿಯ ಚಿತ್ತಾಪೂರ ರಸ್ತೆಯ ಮುದ್ನಾಳ ಕ್ರಾಸ್ ಬಳಿ, ಹತ್ತಿಕುಣಿ ಕ್ರಾಸ್ನ ಬಂದಳ್ಳಿ ರಸ್ತೆಯಲ್ಲಿರುವ ಗಂಗಾ ನಗರ, ಆಂಜನೇಯ ದೇವಸ್ಥಾನದ ಹತ್ತಿರ, ಪದವಿ ಕಾಲೇಜು ಎದುರಿನ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಕೊಳವೆಬಾವಿಗಳು ಕೆಟ್ಟು ನಿಂತಿವೆ. <br /> <br /> ಎಸ್ಪಿ ಕಚೇರಿ ಬಳಿ ಇರುವ ಕೈಪಂಪ್ ಕೆಟ್ಟಿರುವುದರಿಂದ ಕಚೇರಿಯ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ತೊಂದರೆ ಅನುಭವಿಸುವಂತಾಗಿದೆ. ಈಗ ಮಳೆಗಾಲ ಇರುವುದರಿಂದ ಈ ಕೊಳವೆಬಾವಿಗಳ ಬಳಿ ಕೊಳಚೆ ನೀರು ನಿಲ್ಲುತ್ತಿದ್ದು, ಇದರಿಂದ ರೋಗಗಳು ಹರಡುವ ಸಾಧ್ಯತೆ ಇದೆ. <br /> <br /> ಜಿಲ್ಲಾಡಳಿತ, ನಗರಸಭೆ ತಕ್ಷಣ ಗಮನ ಹರಿಸಿ ಕುಡಿಯುವ ನೀರಿನ ಕೈಪಂಪ್ಗಳನ್ನು ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಮಾತಾ ಮಾಣಿಕೇಶ್ವರಿ ಸ್ವ-ಸಹಾಯ ಸಂಘ ಮತ್ತು ವಿಠ್ಠಲ ಹೆರೂರು ಅಭಿಮಾನಿಗಳ ಸಂಘಗಳ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ನಗರದ ಪ್ರಮುಖ ರಸ್ತೆಗಳಲ್ಲಿರುವ ಕೈಪಂಪ್ಗಳು ಕೆಟ್ಟು ಹೋಗಿದ್ದು, ಸಾರ್ವಜನಿಕರು, ಮಕ್ಕಳು ಪರದಾಡುವಂತಾಗಿದೆ. ಕೂಡಲೇ ಇವುಗಳನ್ನು ದುರಸ್ತಿ ಮಾಡಬೇಕು ಎಂದು ಟೋಕರಿ ಕೋಲಿ ಸಮಾಜ ಒತ್ತಾಯಿಸಿದೆ. <br /> <br /> ಇಲ್ಲಿಯ ಚಿತ್ತಾಪೂರ ರಸ್ತೆಯ ಮುದ್ನಾಳ ಕ್ರಾಸ್ ಬಳಿ, ಹತ್ತಿಕುಣಿ ಕ್ರಾಸ್ನ ಬಂದಳ್ಳಿ ರಸ್ತೆಯಲ್ಲಿರುವ ಗಂಗಾ ನಗರ, ಆಂಜನೇಯ ದೇವಸ್ಥಾನದ ಹತ್ತಿರ, ಪದವಿ ಕಾಲೇಜು ಎದುರಿನ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಕೊಳವೆಬಾವಿಗಳು ಕೆಟ್ಟು ನಿಂತಿವೆ. <br /> <br /> ಎಸ್ಪಿ ಕಚೇರಿ ಬಳಿ ಇರುವ ಕೈಪಂಪ್ ಕೆಟ್ಟಿರುವುದರಿಂದ ಕಚೇರಿಯ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ತೊಂದರೆ ಅನುಭವಿಸುವಂತಾಗಿದೆ. ಈಗ ಮಳೆಗಾಲ ಇರುವುದರಿಂದ ಈ ಕೊಳವೆಬಾವಿಗಳ ಬಳಿ ಕೊಳಚೆ ನೀರು ನಿಲ್ಲುತ್ತಿದ್ದು, ಇದರಿಂದ ರೋಗಗಳು ಹರಡುವ ಸಾಧ್ಯತೆ ಇದೆ. <br /> <br /> ಜಿಲ್ಲಾಡಳಿತ, ನಗರಸಭೆ ತಕ್ಷಣ ಗಮನ ಹರಿಸಿ ಕುಡಿಯುವ ನೀರಿನ ಕೈಪಂಪ್ಗಳನ್ನು ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಮಾತಾ ಮಾಣಿಕೇಶ್ವರಿ ಸ್ವ-ಸಹಾಯ ಸಂಘ ಮತ್ತು ವಿಠ್ಠಲ ಹೆರೂರು ಅಭಿಮಾನಿಗಳ ಸಂಘಗಳ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>