<p>ಚಿಂಚೋಳಿ: ತಾಲ್ಲೂಕಿಗೆ 1300 ಚೀಲಗಳ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಲು ಗುರಿ ನಿಗದಿಪಡಿಸಿದರೂ ಕೂಡ ತೊಗರಿ ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 300 ಚೀಲ ಮಾತ್ರ ಖರೀದಿಸಿ ಅಧಿಕಾರಿಗಳು ಕಾಲ್ಕಿತ್ತಿದ ಘಟನೆ ನಡೆದಿದೆ.<br /> <br /> `ಕೇವಲ ಭಾನುವಾರ ಹಾಗೂ ಸೋಮವಾರ ತೊಗರಿ ಖರೀದಿಸಿದ ಅಧಿಕಾರಿಗಳು ಆಳಂದದಲ್ಲಿ ರೈತರಿಗೆ ಚೆಕ್ಕುಗಳನ್ನು ನೀಡಿ ಬರುವುದಾಗಿ ಹೇಳಿ ಹೋದವರು ಈ ಕಡೆ ತಿರುಗಿ ನೋಡಿಲ್ಲ. ಮಂಡಳಿಯ ಅಧಿಕಾರಿಗಳ ಬಳಿ ತಾಲ್ಲೂಕಿಗೆ ನಿಗದಿಪಡಿಸಿದ ಹಣವಿದೆ. ಅಧಿಕಾರಿಗಳಿಗೆ ಇಲ್ಲಿ ಖರೀದಿಸುವ ಮನಸ್ಸಿಲ್ಲದ ಕಾರಣ ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎಂಬಂತಾಗಿದೆ~ ಎಂದು ರೈತರು ದೂರಿದ್ದಾರೆ.<br /> <br /> `ನಮ್ಮ ಗೋಳು ಯಾರ್ರೀ ಕೇಳ್ತಾರ್... ಎಲ್ಲರೂ ಚುನಾವಣೆ ಬಂದಾಗ ಓಟ್ ಕೇಳಾಕ್ ಬರ್ತಾರ್. ಬೆಂಬಲ ಬೆಲಿಗಿ ತೊಗರಿ ಖರೀದಿಸುತ್ತೇವೆ ಅಂತಾರಾ. ಇದು ನಂಬಿ ನಾವ್ ತೊಗರಿ ಚೀಲ ತಂದು ಹಾಕಿ 3 ದಿನಾ ಆತು. ಖರೀದಿ ಮಾಡುವ ಅಧಿಕಾರಿಗಳು ಬರುತ್ತಿಲ್ಲ ನೋಡ್ರಿ~ ಎಂದು ಕೊಳ್ಳೂರಿನ ರೈತ ವಿಠಲ್ಗೋಳು ತೋಡಿಕೊಂಡರು . <br /> <br /> `21 ಚೀಲ ತಂದ್ ಹಾಕಿವ್ರಿ ಕೇಳೊರ್ ಇಲ್ಲ. ನಮ್ಮ ಮನ್ಯಾಗ್ 9 ಚೀಲ್ ತೊಗರಿ ಅವಾರಿ ತರಬೇಕಾ ಬೇಡ ಅಂತ ಕೇಳಾಕ್ ಬಂದೀನಿ~ ಎಂದವರು ಕನಕಪೂರದ ನಾಗಶೆಟ್ಟಿ ಯಲ್ಮಡಗಿ.<br /> <br /> <strong>ದಿನದೂಡುವ ಅಧಿಕಾರಿಗಳು:</strong> ಸೋಮಲಿಂಗದಳ್ಳಿಯ ಸಂಗಪ್ಪ ಮತ್ತು ಈರಪ್ಪ ಹಾಗೂ ನರನಾಳದ ಸಂಗ್ರಾಮ ಪಾಟೀಲ್, ಲಕ್ಷ್ಮೀನರಸಿಂಹರೆಡ್ಡಿ, ಶರಣಪ್ಪ, ರಾಜಶೇಖರ ಮತ್ತಿತರ ರೈತರು, `ನಾವು ನೂರಾರು ಚೀಲಗಳನ್ನು ತಂದಿದ್ದೇವೆ. ಆದರೆ ಖರೀದಿಸುವ ಅಧಿಕಾರಿಗಳು ಮಾತ್ರ ಇಂದು ನಾಳೆ ಎಂದು ದಿನ ದೂಡುತ್ತಿದ್ದಾರೆ~ ಎಂದರು.<br /> ಮೂಗಿಗೆ ತುಪ್ಪ ಹಚ್ಚಿ ಮರಳಿದ ಅಧಿಕಾರಿಗಳು `ಯಾವಾಗ ಬರ್ತಾರೆ?~ ಎಂದು ರೈತರು ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ತಾಲ್ಲೂಕಿಗೆ 1300 ಚೀಲಗಳ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಲು ಗುರಿ ನಿಗದಿಪಡಿಸಿದರೂ ಕೂಡ ತೊಗರಿ ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 300 ಚೀಲ ಮಾತ್ರ ಖರೀದಿಸಿ ಅಧಿಕಾರಿಗಳು ಕಾಲ್ಕಿತ್ತಿದ ಘಟನೆ ನಡೆದಿದೆ.<br /> <br /> `ಕೇವಲ ಭಾನುವಾರ ಹಾಗೂ ಸೋಮವಾರ ತೊಗರಿ ಖರೀದಿಸಿದ ಅಧಿಕಾರಿಗಳು ಆಳಂದದಲ್ಲಿ ರೈತರಿಗೆ ಚೆಕ್ಕುಗಳನ್ನು ನೀಡಿ ಬರುವುದಾಗಿ ಹೇಳಿ ಹೋದವರು ಈ ಕಡೆ ತಿರುಗಿ ನೋಡಿಲ್ಲ. ಮಂಡಳಿಯ ಅಧಿಕಾರಿಗಳ ಬಳಿ ತಾಲ್ಲೂಕಿಗೆ ನಿಗದಿಪಡಿಸಿದ ಹಣವಿದೆ. ಅಧಿಕಾರಿಗಳಿಗೆ ಇಲ್ಲಿ ಖರೀದಿಸುವ ಮನಸ್ಸಿಲ್ಲದ ಕಾರಣ ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎಂಬಂತಾಗಿದೆ~ ಎಂದು ರೈತರು ದೂರಿದ್ದಾರೆ.<br /> <br /> `ನಮ್ಮ ಗೋಳು ಯಾರ್ರೀ ಕೇಳ್ತಾರ್... ಎಲ್ಲರೂ ಚುನಾವಣೆ ಬಂದಾಗ ಓಟ್ ಕೇಳಾಕ್ ಬರ್ತಾರ್. ಬೆಂಬಲ ಬೆಲಿಗಿ ತೊಗರಿ ಖರೀದಿಸುತ್ತೇವೆ ಅಂತಾರಾ. ಇದು ನಂಬಿ ನಾವ್ ತೊಗರಿ ಚೀಲ ತಂದು ಹಾಕಿ 3 ದಿನಾ ಆತು. ಖರೀದಿ ಮಾಡುವ ಅಧಿಕಾರಿಗಳು ಬರುತ್ತಿಲ್ಲ ನೋಡ್ರಿ~ ಎಂದು ಕೊಳ್ಳೂರಿನ ರೈತ ವಿಠಲ್ಗೋಳು ತೋಡಿಕೊಂಡರು . <br /> <br /> `21 ಚೀಲ ತಂದ್ ಹಾಕಿವ್ರಿ ಕೇಳೊರ್ ಇಲ್ಲ. ನಮ್ಮ ಮನ್ಯಾಗ್ 9 ಚೀಲ್ ತೊಗರಿ ಅವಾರಿ ತರಬೇಕಾ ಬೇಡ ಅಂತ ಕೇಳಾಕ್ ಬಂದೀನಿ~ ಎಂದವರು ಕನಕಪೂರದ ನಾಗಶೆಟ್ಟಿ ಯಲ್ಮಡಗಿ.<br /> <br /> <strong>ದಿನದೂಡುವ ಅಧಿಕಾರಿಗಳು:</strong> ಸೋಮಲಿಂಗದಳ್ಳಿಯ ಸಂಗಪ್ಪ ಮತ್ತು ಈರಪ್ಪ ಹಾಗೂ ನರನಾಳದ ಸಂಗ್ರಾಮ ಪಾಟೀಲ್, ಲಕ್ಷ್ಮೀನರಸಿಂಹರೆಡ್ಡಿ, ಶರಣಪ್ಪ, ರಾಜಶೇಖರ ಮತ್ತಿತರ ರೈತರು, `ನಾವು ನೂರಾರು ಚೀಲಗಳನ್ನು ತಂದಿದ್ದೇವೆ. ಆದರೆ ಖರೀದಿಸುವ ಅಧಿಕಾರಿಗಳು ಮಾತ್ರ ಇಂದು ನಾಳೆ ಎಂದು ದಿನ ದೂಡುತ್ತಿದ್ದಾರೆ~ ಎಂದರು.<br /> ಮೂಗಿಗೆ ತುಪ್ಪ ಹಚ್ಚಿ ಮರಳಿದ ಅಧಿಕಾರಿಗಳು `ಯಾವಾಗ ಬರ್ತಾರೆ?~ ಎಂದು ರೈತರು ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>