ಶಿವಮೊಗ್ಗ: ನಗರದಲ್ಲಿ ಫೆ.25ರಿಂದ ಆರಂಭವಾಗುವಮಾರಿಕಾಂಬ ಜಾತ್ರೆಗೆ ಬಂಧುಗಳನ್ನು ಕರೆಯಲು ಹೋಗಿದ್ದ ಯುವಕರು ಸೋಮವಾರ ಸಂಜೆ ಲಕ್ಕವಳ್ಳಿ–ಬಿಆರ್ಪಿ ಸಮೀಪ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹುಣಸವಳ್ಳಿ ಸಮೀಪ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆನಡೆಯಿತು.ಅಫಘಾತದಲ್ಲಿ ದೇಹಗಳುಛಿದ್ರವಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಪ್ರತಿಭಟನೆ: ಯುವಕರ ಸಾವಿಗೆ ಪೊಲೀಸರೇ ಕಾರಣ. ದಂಡದ ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇಂತಹ ಅವಘಡ ನಡೆದಿದೆ ಎಂದು ಆರೋಪಿಸಿ ಸ್ಥಳೀಯರು ಲಕ್ಕವಳ್ಳಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.