<p><strong>ಮದ್ದೂರು/ಹುಣಸೂರು:</strong> ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. <br /> <br /> ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿ ಟಿ.ಬೆಳ್ಳೆಕೆರೆ ಗ್ರಾಮದ ತಗ್ಗಹಳ್ಳಿ ಕ್ರಾಸ್ ಬಳಿ ಬೈಕ್ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟರು.<br /> <br /> ತಾಲ್ಲೂಕಿನ ಗುಡಿದೊಡ್ಡಿ ಗ್ರಾಮದ ಪುಟ್ಟರಾಜು ಅವರ ಪುತ್ರ ಪ್ರದೀಪ್ (18), ಚಿಕ್ಕಣ್ಣ ಅವರ ಪುತ್ರ ವಿಜೇಂದ್ರ (19), ವೆಂಕಟೇಶ್ ಅವರ ಪುತ್ರ ಅಭಿಷೇಕ್ (21) ಮೃತಪಟ್ಟವರು. <br /> <br /> ಮಂಗಳವಾರದಿಂದ ಆರಂಭಗೊಳ್ಳುವ ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರಸ್ವಾಮಿ ದನಗಳ ಜಾತ್ರೆಯಲ್ಲಿ ದನಗಳನ್ನು ಕಟ್ಟಲು ಸ್ಥಳವನ್ನು ಗುರುತಿಸಲು ಈ ಮೂವರು ಬೈಕ್ನಲ್ಲಿ ಅಲ್ಲಿಗೆ ತೆರಳುತ್ತಿದ್ದರು. ಲಾರಿಯೊಂದರ ಹಿಂಭಾಗದಲ್ಲಿ ಬರುತ್ತಿದ್ದಾಗ ಟಿ.ಬೆಳ್ಳೆಕೆರೆ ಗ್ರಾಮದ ಬಳಿ ತಗ್ಗಹಳ್ಳಿ ಕ್ರಾಸ್ನಲ್ಲಿ ತಿರುವು ತೆಗೆದುಕೊಂಡಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. <br /> <br /> <strong>ಹುಣಸೂರು ವರದಿ: </strong>ತಾಲ್ಲೂಕಿನ ಗಾವಡಗೆರೆ ಬಳಿ ಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದಾನೆ.<br /> <br /> ಕೆ.ಆರ್.ನಗರದ ಚೇತನ್ (25), ಸೋಮಶೇಖರ್ (23), ಕಟ್ಟೆಮಳವಾಡಿಯ ಸಿದ್ದರಾಜು (48) ಮೃತಪಟ್ಟವರು. ಚೇತನ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ತೀವ್ರ ಗಾಯಗೊಂಡ ತಿಮ್ಮಪ್ಪ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಚೇತನ್ ಹಾಗೂ ಸೋಮಶೇಖರ್ ಒಂದೇ ದ್ವಿಚಕ್ರ ವಾಹನದಲ್ಲಿ ಕೆ.ಆರ್.ನಗರದಿಂದ ಹುಣಸೂರು ತಾಲ್ಲೂಕಿನ ಮಾರಗೌಡನಹಳ್ಳಿಗೆ ಸಂಬಂಧಿಕರ ತಿಥಿ ಕಾರ್ಯಕ್ಕಾಗಿ ಬರುತ್ತಿದ್ದರು. ಇದೇ ವೇಳೆ ಸಿದ್ದರಾಜು ಹಾಗೂ ತಿಮ್ಮಪ್ಪ ಕೂಡ ದ್ವಿಚಕ್ರ ವಾಹನದಲ್ಲಿ ಕಟ್ಟೆಮಳಲವಾಡಿಯಿಂದ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು/ಹುಣಸೂರು:</strong> ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. <br /> <br /> ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿ ಟಿ.ಬೆಳ್ಳೆಕೆರೆ ಗ್ರಾಮದ ತಗ್ಗಹಳ್ಳಿ ಕ್ರಾಸ್ ಬಳಿ ಬೈಕ್ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟರು.<br /> <br /> ತಾಲ್ಲೂಕಿನ ಗುಡಿದೊಡ್ಡಿ ಗ್ರಾಮದ ಪುಟ್ಟರಾಜು ಅವರ ಪುತ್ರ ಪ್ರದೀಪ್ (18), ಚಿಕ್ಕಣ್ಣ ಅವರ ಪುತ್ರ ವಿಜೇಂದ್ರ (19), ವೆಂಕಟೇಶ್ ಅವರ ಪುತ್ರ ಅಭಿಷೇಕ್ (21) ಮೃತಪಟ್ಟವರು. <br /> <br /> ಮಂಗಳವಾರದಿಂದ ಆರಂಭಗೊಳ್ಳುವ ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರಸ್ವಾಮಿ ದನಗಳ ಜಾತ್ರೆಯಲ್ಲಿ ದನಗಳನ್ನು ಕಟ್ಟಲು ಸ್ಥಳವನ್ನು ಗುರುತಿಸಲು ಈ ಮೂವರು ಬೈಕ್ನಲ್ಲಿ ಅಲ್ಲಿಗೆ ತೆರಳುತ್ತಿದ್ದರು. ಲಾರಿಯೊಂದರ ಹಿಂಭಾಗದಲ್ಲಿ ಬರುತ್ತಿದ್ದಾಗ ಟಿ.ಬೆಳ್ಳೆಕೆರೆ ಗ್ರಾಮದ ಬಳಿ ತಗ್ಗಹಳ್ಳಿ ಕ್ರಾಸ್ನಲ್ಲಿ ತಿರುವು ತೆಗೆದುಕೊಂಡಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. <br /> <br /> <strong>ಹುಣಸೂರು ವರದಿ: </strong>ತಾಲ್ಲೂಕಿನ ಗಾವಡಗೆರೆ ಬಳಿ ಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದಾನೆ.<br /> <br /> ಕೆ.ಆರ್.ನಗರದ ಚೇತನ್ (25), ಸೋಮಶೇಖರ್ (23), ಕಟ್ಟೆಮಳವಾಡಿಯ ಸಿದ್ದರಾಜು (48) ಮೃತಪಟ್ಟವರು. ಚೇತನ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ತೀವ್ರ ಗಾಯಗೊಂಡ ತಿಮ್ಮಪ್ಪ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಚೇತನ್ ಹಾಗೂ ಸೋಮಶೇಖರ್ ಒಂದೇ ದ್ವಿಚಕ್ರ ವಾಹನದಲ್ಲಿ ಕೆ.ಆರ್.ನಗರದಿಂದ ಹುಣಸೂರು ತಾಲ್ಲೂಕಿನ ಮಾರಗೌಡನಹಳ್ಳಿಗೆ ಸಂಬಂಧಿಕರ ತಿಥಿ ಕಾರ್ಯಕ್ಕಾಗಿ ಬರುತ್ತಿದ್ದರು. ಇದೇ ವೇಳೆ ಸಿದ್ದರಾಜು ಹಾಗೂ ತಿಮ್ಮಪ್ಪ ಕೂಡ ದ್ವಿಚಕ್ರ ವಾಹನದಲ್ಲಿ ಕಟ್ಟೆಮಳಲವಾಡಿಯಿಂದ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>