<p><strong>ಚಿಕ್ಕಮಗಳೂರು: </strong>ಜೇಬಿನಲ್ಲಿದ್ದ ಗಂಧಕದ ಪುಡಿಯ ಪೊಟ್ಟಣ ಆಕಸ್ಮಿಕವಾಗಿ ಸ್ಫೋಟಿಸಿ ರೈತರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಪಕ್ಕದಲ್ಲಿದ್ದ ವಬಾಲಕನಿಗೂ ಸ್ಫೋಟದಲ್ಲಿ ಸಣ್ಣ ಗಾಯಗಳಾಗಿವೆ. <br /> <br /> ಮೂಕ್ತಿಹಳ್ಳಿ ಸಮೀಪದ ದುಮ್ಮಗೆರೆ ಲಕ್ಷ್ಮಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ಜಮೀನಿಗೆ ದಾಳಿ ಇಡುತ್ತಿದ್ದ ಕೋತಿಗಳನ್ನು ಬೆದರಿಸಲು ನಗರದಲ್ಲಿ ಗಂಧಕ ಪುಡಿ ಖರೀದಿಸಿದ ಲಕ್ಷ್ಮಯ್ಯ ಪೊಟ್ಟಣವನ್ನು ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡಿದ್ದರು. ಜತೆಗಿದ್ದ ಅನಾರೋಗ್ಯಪೀಡಿತ ಪತ್ನಿಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು.<br /> <br /> ಕ್ಲಿನಿಕ್ನಲ್ಲಿ ಸರದಿಗಾಗಿ ಕಾಯುತ್ತಿದ್ದಾಗ ಕಿಸೆಯಲ್ಲಿದ್ದ ಗಂಧಕ ಸ್ಫೋಟಿಸಿತು. ಲಕ್ಷ್ಮಯ್ಯ ಅವರ ಪ್ಯಾಂಟ್ಗೆ ಬೆಂಕಿ ಹೊತ್ತಿಕೊಂಡು ಸೊಂಟ, ತೊಡೆ, ಕೈಗಳಿಗೆ ಸುಟ್ಟ ಗಾಯವಾಗಿದೆ. ಪಕ್ಕದಲ್ಲೇ ಕುಳಿತಿದ್ದ ಬಾಲಕನಿಗೂ ಸುಟ್ಟ ಗಾಯಗಳಾಗಿವೆ. <br /> <br /> ಗಂಧಕ ದಿಢೀರ್ ಸ್ಫೋಟಿದ್ದರಿಂದ ಉಂಟಾದ ಸದ್ದು ಮತ್ತು ಹೊಗೆಯಿಂದಾಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಭೀತಿಗೊಂಡು ದಿಕ್ಕಾಪಾಲಾಗಿ ಓಡಿದರು. ಒಳಗೆ ಮಂಚದ ಮೇಲೆ ಮಲಗಿದ್ದ ರೋಗಿಗಳೂ ಗ್ಲೂಕೋಸ್ ಪೈಪ್ ಕಿತ್ತೆಸೆದು ಹೊರಗೋಡಿದರು. ಘಟನೆಯಿಂದ ಆಘಾತಕ್ಕೊಳಗಾದ ವೈದ್ಯರೂ ಸುಧಾರಿಸಿಕೊಳ್ಳಲು 5-10 ನಿಮಿಷ ಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ದೊಡ್ಡ ಬಾಂಬ್ ಸ್ಫೋಟಿಸಿದೆ ಎಂದೇ ಭಾವಿಸಿದ ಪಕ್ಕದ ಅಂಗಡಿಗಳವರು, ದಾರಿಹೋಕರು ಸ್ಥಳದಲ್ಲಿ ಜಮಾಯಿಸಿದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ನಗರ ಠಾಣೆ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ, ಆಂಬುಲೆನ್ಸ್ ಧಾವಿಸಿದವು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಗಾಯಾಳುಗಳಿಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಜೇಬಿನಲ್ಲಿದ್ದ ಗಂಧಕದ ಪುಡಿಯ ಪೊಟ್ಟಣ ಆಕಸ್ಮಿಕವಾಗಿ ಸ್ಫೋಟಿಸಿ ರೈತರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಪಕ್ಕದಲ್ಲಿದ್ದ ವಬಾಲಕನಿಗೂ ಸ್ಫೋಟದಲ್ಲಿ ಸಣ್ಣ ಗಾಯಗಳಾಗಿವೆ. <br /> <br /> ಮೂಕ್ತಿಹಳ್ಳಿ ಸಮೀಪದ ದುಮ್ಮಗೆರೆ ಲಕ್ಷ್ಮಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ಜಮೀನಿಗೆ ದಾಳಿ ಇಡುತ್ತಿದ್ದ ಕೋತಿಗಳನ್ನು ಬೆದರಿಸಲು ನಗರದಲ್ಲಿ ಗಂಧಕ ಪುಡಿ ಖರೀದಿಸಿದ ಲಕ್ಷ್ಮಯ್ಯ ಪೊಟ್ಟಣವನ್ನು ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡಿದ್ದರು. ಜತೆಗಿದ್ದ ಅನಾರೋಗ್ಯಪೀಡಿತ ಪತ್ನಿಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು.<br /> <br /> ಕ್ಲಿನಿಕ್ನಲ್ಲಿ ಸರದಿಗಾಗಿ ಕಾಯುತ್ತಿದ್ದಾಗ ಕಿಸೆಯಲ್ಲಿದ್ದ ಗಂಧಕ ಸ್ಫೋಟಿಸಿತು. ಲಕ್ಷ್ಮಯ್ಯ ಅವರ ಪ್ಯಾಂಟ್ಗೆ ಬೆಂಕಿ ಹೊತ್ತಿಕೊಂಡು ಸೊಂಟ, ತೊಡೆ, ಕೈಗಳಿಗೆ ಸುಟ್ಟ ಗಾಯವಾಗಿದೆ. ಪಕ್ಕದಲ್ಲೇ ಕುಳಿತಿದ್ದ ಬಾಲಕನಿಗೂ ಸುಟ್ಟ ಗಾಯಗಳಾಗಿವೆ. <br /> <br /> ಗಂಧಕ ದಿಢೀರ್ ಸ್ಫೋಟಿದ್ದರಿಂದ ಉಂಟಾದ ಸದ್ದು ಮತ್ತು ಹೊಗೆಯಿಂದಾಗಿ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಭೀತಿಗೊಂಡು ದಿಕ್ಕಾಪಾಲಾಗಿ ಓಡಿದರು. ಒಳಗೆ ಮಂಚದ ಮೇಲೆ ಮಲಗಿದ್ದ ರೋಗಿಗಳೂ ಗ್ಲೂಕೋಸ್ ಪೈಪ್ ಕಿತ್ತೆಸೆದು ಹೊರಗೋಡಿದರು. ಘಟನೆಯಿಂದ ಆಘಾತಕ್ಕೊಳಗಾದ ವೈದ್ಯರೂ ಸುಧಾರಿಸಿಕೊಳ್ಳಲು 5-10 ನಿಮಿಷ ಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ದೊಡ್ಡ ಬಾಂಬ್ ಸ್ಫೋಟಿಸಿದೆ ಎಂದೇ ಭಾವಿಸಿದ ಪಕ್ಕದ ಅಂಗಡಿಗಳವರು, ದಾರಿಹೋಕರು ಸ್ಥಳದಲ್ಲಿ ಜಮಾಯಿಸಿದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ನಗರ ಠಾಣೆ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ, ಆಂಬುಲೆನ್ಸ್ ಧಾವಿಸಿದವು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಗಾಯಾಳುಗಳಿಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>