ತೋಟಗಾರಿಕಾ ಮಿಷನ್ ಸಹಾಯಧನ, ಉದ್ಯೋಗಖಾತರಿ, ಬ್ಯಾಂಕ್ ಸಾಲದ ಮೂಲಕ ದಾಳಿಂಬೆ ಬೆಳೆಯಲು ಯತ್ನಿಸಿ ಕೈಸುಟ್ಟುಕೊಂಡಿರುವ ರೈತರ ನೆರವಿಗೆ ಜಿಲ್ಲಾಡಳಿತ ತಕ್ಷಣ ಧಾವಿಸಬೇಕು. ರೈತರ ಸಾಲಮನ್ನಾ ಮಾಡಿ ಪರ್ಯಾಯ ಬೆಳೆಗೆ ಪರಿಹಾರ ಧನ ನೀಡಬೇಕೆಂದು ಕೋರಿದರು.
ಮುಖಂಡರಾದ ಶಿವಪ್ರಸಾದ್, ಆಂಜಿನಪ್ಪರೆಡ್ಡಿ, ಸಿ.ಬಸವರಾಜು, ಎಸ್.ಡಿ.ವೀರಭದ್ರಪ್ಪ, ವಾಗೀಶ್, ವಾಲೆನಾಯ್ಕ, ಸುಬ್ಬರಾಯಪ್ಪ, ಮುದ್ದವೀರಪ್ಪ, ರಾಮಕೃಷ್ಣಪ್ಪ, ನರಸಿಂಹಪ್ಪ, ರಾಮದಾಸ್, ಮಂಜುನಾಥ್ಕುಮಾರ್, ರಾಜಶೇಖರ್, ಶಿವಕುಮಾರ್, ಹನುಮಂತರಾಯ ಇತರರು ಉಪಸ್ಥಿತರಿದ್ದರು.