<p>ವಿಜಾಪುರ: `ಬರ ಪೀಡಿತ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ವಿಚಾರವಾಗಿ ಕನ್ನಡ ಚಿತ್ರ ತಂಡ, ಹಿರಿಯ ಕಲಾವಿದ ಅಂಬರೀಷ್ ಹಾಗೂ ಫಿಲಂ ಚೇಂಬರ್ ಜೊತೆಗೆ ಚರ್ಚಿಸುತ್ತೇನೆ. ವೈಯಕ್ತಿಕವಾಗಿ ನೆರವು ನೀಡಲು ನಾನು ಸಿದ್ಧ~ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹೇಳಿದರು.<br /> <br /> `ಶಿವಾ~ ಚಲನಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡುಬಿಟ್ಟಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> `ಈ ಭಾಗದಲ್ಲಿ ಬರ ತೀವ್ರವಾಗಿರುವುದು ಇಲ್ಲಿಗೆ ಬಂದ ನಂತರ ನಮ್ಮ ಗಮನಕ್ಕೆ ಬಂದಿದೆ. ಜನತೆಯ ಸಮಸ್ಯೆಗಳಿಗೆ ಸಂಬಂಧಪಟ್ಟವರು ಪರಿಹಾರ ಹುಡುಕಬೇಕು. ಒಳ್ಳೆಯ ಕೆಲಸಕ್ಕೆ ಮನವಿ ಮಾಡುವುದು ತಪ್ಪಲ್ಲ. ಈ ವಿಷಯವಾಗಿ ನಾನೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ~ ಎಂದರು.<br /> <br /> `ಪಾಲಿಗೆ ಬಂದದ್ದು ಪಂಚಾಮೃತ. ಬರವನ್ನು ದಿಟ್ಟವಾಗಿ ಎದುರಿಸಬೇಕು. ಯಾರೂ ಧೈರ್ಯ ಕಳೆದು ಕೊಳ್ಳಬಾರದು. ಎಲ್ಲರೂ ಬದುಕಿನಲ್ಲಿ ನಂಬಿಕೆ ಇಡಬೇಕು. ಮಳೆ ಬಂದೇ ಬರುತ್ತದೆ. ನಿರಾಶರಾಗಿ ಯಾರೂ ಜೀವ ಕಳೆದುಕೊಳ್ಳುವ ಯತ್ನ ಮಾಡಬಾರದು~ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: `ಬರ ಪೀಡಿತ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ವಿಚಾರವಾಗಿ ಕನ್ನಡ ಚಿತ್ರ ತಂಡ, ಹಿರಿಯ ಕಲಾವಿದ ಅಂಬರೀಷ್ ಹಾಗೂ ಫಿಲಂ ಚೇಂಬರ್ ಜೊತೆಗೆ ಚರ್ಚಿಸುತ್ತೇನೆ. ವೈಯಕ್ತಿಕವಾಗಿ ನೆರವು ನೀಡಲು ನಾನು ಸಿದ್ಧ~ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹೇಳಿದರು.<br /> <br /> `ಶಿವಾ~ ಚಲನಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡುಬಿಟ್ಟಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> `ಈ ಭಾಗದಲ್ಲಿ ಬರ ತೀವ್ರವಾಗಿರುವುದು ಇಲ್ಲಿಗೆ ಬಂದ ನಂತರ ನಮ್ಮ ಗಮನಕ್ಕೆ ಬಂದಿದೆ. ಜನತೆಯ ಸಮಸ್ಯೆಗಳಿಗೆ ಸಂಬಂಧಪಟ್ಟವರು ಪರಿಹಾರ ಹುಡುಕಬೇಕು. ಒಳ್ಳೆಯ ಕೆಲಸಕ್ಕೆ ಮನವಿ ಮಾಡುವುದು ತಪ್ಪಲ್ಲ. ಈ ವಿಷಯವಾಗಿ ನಾನೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ~ ಎಂದರು.<br /> <br /> `ಪಾಲಿಗೆ ಬಂದದ್ದು ಪಂಚಾಮೃತ. ಬರವನ್ನು ದಿಟ್ಟವಾಗಿ ಎದುರಿಸಬೇಕು. ಯಾರೂ ಧೈರ್ಯ ಕಳೆದು ಕೊಳ್ಳಬಾರದು. ಎಲ್ಲರೂ ಬದುಕಿನಲ್ಲಿ ನಂಬಿಕೆ ಇಡಬೇಕು. ಮಳೆ ಬಂದೇ ಬರುತ್ತದೆ. ನಿರಾಶರಾಗಿ ಯಾರೂ ಜೀವ ಕಳೆದುಕೊಳ್ಳುವ ಯತ್ನ ಮಾಡಬಾರದು~ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>