<p><strong>ಮದ್ದೂರು: </strong>ಮಕ್ಕಳಲ್ಲಿನ ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75ಸಾವಿರ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಲ್.ಗುರುಲಿಂಗಸ್ವಾಮಿ ಬುಧವಾರ ತಿಳಿಸಿದರು. <br /> <br /> ಸಮೀಪದ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಿದ ಅವರು, `ಶಬ್ಧಕೋಶವು ಜ್ಞಾನ ಭಂಡಾಡವಿದ್ದಂತೆ. ಶಬ್ದಸಂಪತ್ತು ಎಂದಿಗೂ ಮುಗಿಯಲಾರದ ಜ್ಞಾನ ಸಂಪತ್ತು ಆಗಿದ್ದು, ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಬಗೆಗಿನ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. <br /> <br /> ಮುಖ್ಯಶಿಕ್ಷಕ ಕೆ.ಪಿ.ಜಯಮುದ್ದು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎಂ.ಎನ್.ಶಿವಣ್ಣ ಮಾತನಾಡಿದರು. ಸದಸ್ಯರಾದ ಜಿತೇಂದ್ರಸಿಂಗ್, ಬಿ.ಎನ್.ಕೇಶವ, ಶಿಕ್ಷಕರಾದ ಜಿ.ಜೆ.ಸುರೇಶ್, ಬಿ.ಎಸ್.ಮಹದೇವಸ್ವಾಮಿ, ಬಿ.ಎಲ್.ಮಧುಸೂದನ, ಜಿ.ಕೆ.ಮಾಲತಿ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು: </strong>ಮಕ್ಕಳಲ್ಲಿನ ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75ಸಾವಿರ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಲ್.ಗುರುಲಿಂಗಸ್ವಾಮಿ ಬುಧವಾರ ತಿಳಿಸಿದರು. <br /> <br /> ಸಮೀಪದ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಿದ ಅವರು, `ಶಬ್ಧಕೋಶವು ಜ್ಞಾನ ಭಂಡಾಡವಿದ್ದಂತೆ. ಶಬ್ದಸಂಪತ್ತು ಎಂದಿಗೂ ಮುಗಿಯಲಾರದ ಜ್ಞಾನ ಸಂಪತ್ತು ಆಗಿದ್ದು, ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಬಗೆಗಿನ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. <br /> <br /> ಮುಖ್ಯಶಿಕ್ಷಕ ಕೆ.ಪಿ.ಜಯಮುದ್ದು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎಂ.ಎನ್.ಶಿವಣ್ಣ ಮಾತನಾಡಿದರು. ಸದಸ್ಯರಾದ ಜಿತೇಂದ್ರಸಿಂಗ್, ಬಿ.ಎನ್.ಕೇಶವ, ಶಿಕ್ಷಕರಾದ ಜಿ.ಜೆ.ಸುರೇಶ್, ಬಿ.ಎಸ್.ಮಹದೇವಸ್ವಾಮಿ, ಬಿ.ಎಲ್.ಮಧುಸೂದನ, ಜಿ.ಕೆ.ಮಾಲತಿ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>