<p><br /> ಚಳ್ಳಕೆರೆ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡಿದವರಿಂದ ಜಿಲ್ಲಾ ಪಂಚಾಯ್ತಿ ಸಹಾಯಕ ಎಂಜಿನಿಯರ್ ಕಂಚೀಮಠ್ ಕಮೀಷನ್ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿ ಸಾರ್ವಜನಿಕರು ಅವರನ್ನು ಮನೆಯಲ್ಲಿಯೇ ಶುಕ್ರವಾರ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ ಪ್ರಸಂಗ ನಡೆಯಿತು.<br /> <br /> ತಾಲ್ಲೂಕಿನ ಮೈಲಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಚಿತ್ರನಾಯಕನಹಳ್ಳಿಯಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಚೆಕ್ಡ್ಯಾಂ ಕಾಮಗಾರಿ ಸುಮಾರು 2 ತಿಂಗಳಿಂದ ಪೂರ್ಣಗೊಂಡಿದ್ದರೂ ಎಂಜಿನಿಯರ್ ಕಂಚೀಮಠ್ ಬಿಲ್ಗೆ ಸಹಿ ಹಾಕದೇ ಸತಾಯಿಸುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದರು.<br /> <br /> ಎಂಜಿನಿಯರ್ ಕಂಚೀಮಠ್ ಈ ಘಟನೆಯಿಂದಾಗಿ ಕೆಲ ಕಾಲ ವಿಚಲಿತರಾದವರಂತೆ ಕಂಡುಬಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೋ ಅಪರಿಚಿತರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಯಾರಿಗೂ ಲಂಚ ಕೇಳಿಲ್ಲ. ಯಾರ ಹಣವನ್ನೂ ಮುಟ್ಟಿಲ್ಲ’ ಎಂದು ಹೇಳಿದರು.<br /> <br /> ತಮ್ಮ ಟೇಬಲ್ ಮೇಲಿನ ಹಣ ಯಾರದು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ತಬ್ಬಿಬ್ಬಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಚಳ್ಳಕೆರೆ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡಿದವರಿಂದ ಜಿಲ್ಲಾ ಪಂಚಾಯ್ತಿ ಸಹಾಯಕ ಎಂಜಿನಿಯರ್ ಕಂಚೀಮಠ್ ಕಮೀಷನ್ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿ ಸಾರ್ವಜನಿಕರು ಅವರನ್ನು ಮನೆಯಲ್ಲಿಯೇ ಶುಕ್ರವಾರ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ ಪ್ರಸಂಗ ನಡೆಯಿತು.<br /> <br /> ತಾಲ್ಲೂಕಿನ ಮೈಲಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಚಿತ್ರನಾಯಕನಹಳ್ಳಿಯಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಚೆಕ್ಡ್ಯಾಂ ಕಾಮಗಾರಿ ಸುಮಾರು 2 ತಿಂಗಳಿಂದ ಪೂರ್ಣಗೊಂಡಿದ್ದರೂ ಎಂಜಿನಿಯರ್ ಕಂಚೀಮಠ್ ಬಿಲ್ಗೆ ಸಹಿ ಹಾಕದೇ ಸತಾಯಿಸುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದರು.<br /> <br /> ಎಂಜಿನಿಯರ್ ಕಂಚೀಮಠ್ ಈ ಘಟನೆಯಿಂದಾಗಿ ಕೆಲ ಕಾಲ ವಿಚಲಿತರಾದವರಂತೆ ಕಂಡುಬಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೋ ಅಪರಿಚಿತರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಯಾರಿಗೂ ಲಂಚ ಕೇಳಿಲ್ಲ. ಯಾರ ಹಣವನ್ನೂ ಮುಟ್ಟಿಲ್ಲ’ ಎಂದು ಹೇಳಿದರು.<br /> <br /> ತಮ್ಮ ಟೇಬಲ್ ಮೇಲಿನ ಹಣ ಯಾರದು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ತಬ್ಬಿಬ್ಬಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>