<p class="rtecenter"><strong>ಕೆಪಿಎಸ್ಸಿ, ಕೆಎಸ್ಐಎಸ್ಎಫ್ ಸೇರಿದಂತೆ ಮುಂದೆ ನಡೆಯಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳು ಇಲ್ಲಿವೆ.</strong></p>.<p>1) ಕೆಳಗಿನ ಹೇಳಿಕೆಗಳನ್ನು ಗಮನಿಸಿ.</p>.<p>1) ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟವು ‘ಜಲನೀತಿ – 2022’ ಕ್ಕೆ ಒಪ್ಪಿಗೆ ನೀಡಿದೆ. ವಾಣಿಜ್ಯ ಉದ್ದೇಶ ಹಾಗೂ ಕೃಷಿಗೆ ಅಂತರ್ಜಲ ಬಳಕೆಗೆ ಕಡಿವಾಣ ಹಾಕುವುದು, ಕುಡಿಯುವ ನೀರಿನ ಪೂರೈಕೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡುವುದು ಜಲನೀತಿಯ ಆಶಯವಾಗಿದೆ.</p>.<p>2) ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಹೊರಗಿನ ನೀರು, ಸ್ಥಳೀಯ ನೀರು, ಮೇಲ್ಮೈ ನೀರು ಮತ್ತು ಅಂತರ್ಜಲ, ಮೇಲ್ಛಾವಣಿ ನೀರು ಮತ್ತು ತ್ಯಾಜ್ಯ ನೀರಿನ ನಿರ್ವಹಣೆಗೆ ಆದ್ಯತೆ.</p>.<p>3) ನೀರು ಬಳಕೆದಾರರ ಸಂಘ, ನೀರಿನ ಬಳಕೆದಾರರ ಮಹಾಮಂಡಳಿ, ಕೆರೆ ನೀರು ಬಳಕೆದಾರರ ಸಂಘ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಜಲಾನಯನ ಸಮಿತಿಗಳನ್ನು ಬಲಪಡಿಸಲು ನಿಯಮಿತವಾಗಿ ಸಭೆಗಳನ್ನು ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಜಲನೀತಿ ರಚನೆಯಾಗಿದೆ.</p>.<p><strong>ಉತ್ತರ ಸಂಕೇತಗಳು :</strong></p>.<p>ಎ) 1 ಮತ್ತು 3 ಮಾತ್ರ ಸರಿಯಾಗಿದೆ ಬಿ) 2 ಮತ್ತು 3 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆ ಡಿ) 1, 2 ಮತ್ತು 3 ಮೂರು ಸರಿಯಾಗಿವೆ</p>.<p>ಉತ್ತರ: ಡಿ</p>.<p>2) ಕರ್ನಾಟಕದ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ- 2022-27ಕ್ಕೆ ಸಚಿವರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ.</p>.<p>1) 2022-27 ಅವಧಿಯಲ್ಲಿ ₹40 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಲಿದೆ.</p>.<p>2) ಭಾರತದ ಶೇ 25ರಷ್ಟು ವಿಮಾನ ಮತ್ತು ಬಾಹ್ಯಾಕಾಶ ನೌಕೆ ಉದ್ಯಮವು ಕರ್ನಾಟಕದಲ್ಲಿ ನೆಲೆಗೊಳ್ಳಲಿದೆ.</p>.<p>3) ರಕ್ಷಣಾ ಸೇವೆಗಳಿಗಾಗಿ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಉತ್ಪಾದನೆಯಲ್ಲಿ ಶೇ 67ರಷ್ಟು ನಮ್ಮ ರಾಜ್ಯದಲ್ಲಿ ಉತ್ಪಾದಿಸಲಾಗುತ್ತದೆ.</p>.<p>4) ಏರೋಸ್ಪೇಸ್ ಸಂಬಂಧಿತ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 65 ಇದ್ದು, ಆ ಪ್ರಮಾಣವನ್ನು ಹೆಚ್ಚಿಸಲಾಗುವುದು.</p>.<p>ಉತ್ತರ ಸಂಕೇತಗಳು:</p>.<p>ಎ) 2 ಮಾತ್ರ ಸರಿಯಾಗಿದೆಬಿ) 1 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆ.ಡಿ) 1 ಮತ್ತು 2 ಎರಡೂ ಸರಿಯಾಗಿದೆ</p>.<p>ಉತ್ತರ: ಡಿ</p>.<p>3) ಸ್ಟಾರ್ಟ್ಅಪ್ ಎಕೋಸಿಸ್ಟಮ್ ನಿರ್ಮಿಸುವಲ್ಲಿ ವಿಶ್ವದಲ್ಲೇ ಭಾರತ 3ನೇ ಸ್ಥಾನದಲ್ಲಿದೆ. ಪ್ರಸ್ತುತ ಭಾರತದಲ್ಲಿ 105 ಯೂನಿಕಾರ್ನ್ಗಳಿವೆ. ಸುಮಾರು 75 ಸಾವಿರ ಸ್ಟಾರ್ಟ್ಅಪ್ಗಳಿವೆ. ಹಾಗಾದರೆ 2 ಮತ್ತು 3ನೇ ಹಂತದ ನಗರಗಳಲ್ಲಿ ಶೇಕಡ ಎಷ್ಟು ಸ್ಟಾರ್ಟ್ಅಪ್ಗಳಿವೆ ?</p>.<p>ಎ) ಶೇ 25ಬಿ) ಶೇ 49 ಸಿ) ಶೇ 76 ಡಿ) ಶೇ 60</p>.<p>ಉತ್ತರ: ಬಿ</p>.<p>4) ಸಂಕ್ಷಿಪ್ತ ಕನ್ನಡ ಭಾಷೆ ಚರಿತ್ರೆ, ಶೃಂಗಾರ ಲಹರಿ, ಕಲಾದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮೊದಲಾದ ಕೃತಿಗಳನ್ನು ಯಾರು ಬರೆದಿದ್ದಾರೆ?</p>.<p>ಎ) ಪ್ರೊ. ಎಂ.ಎಚ್.ಕೃಷ್ಣಯ್ಯ ಬಿ) ಪ್ರೊ.ಎಲ್.ಎಸ್.ಶೇಷಗಿರಿ ರಾವ್</p>.<p>ಸಿ) ಕೃ.ನರಹರಿ ಡಿ) ಜಿ.ರಾಮಕೃಷ್ಣ</p>.<p>ಉತ್ತರ: ಎ</p>.<p>5) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1)→ಕಾರ್ನಿಯಾ ಹಾನಿಯಿಂದ ದೃಷ್ಟಿ ಕಳೆದುಕೊಂಡಿದ್ದ ಭಾರತ ಮತ್ತು ಇರಾನಿನ 20 ಮಂದಿಗೆ ಸಂಶೋಧಕರು ಹಂದಿಯ ಚರ್ಮದಿಂದ ರೂಪಿಸಿದ ಜೈವಿಕ ಕಾರ್ನಿಯಾ (ಕಣ್ಣಿನ ಅತ್ಯಂತ ಪಾರಾದರ್ಶಕ ಪದರ) ಕಸಿ ಮಾಡಿ ದೃಷ್ಟಿ ಮರಳಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>2)ನವದೆಹಲಿಯ ಏಮ್ಸ್ ಸಂಶೋಧಕರು ಸೇರಿದ್ದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಕಾರ್ನಿಯಾ ಕಸಿ ಶಸ್ತ್ರ ಚಿಕಿತ್ಸೆಗೆ ಬೇಕಾದ ಜೈವಿಕ ಕಾರ್ನಿಯಾ ಕಸಿ ಪ್ರಯೋಗದಲ್ಲಿ ಯಶಸ್ವಿಯಾಗಿದೆ.</p>.<p>ಉತ್ತರ ಸಂಕೇತಗಳು :</p>.<p>ಎ) 1 ಮಾತ್ರ ಸರಿಯಾಗಿದೆಬಿ) 2 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆಡಿ) 1 ಮತ್ತು 2 ಎರಡೂ ಸರಿಯಾಗಿದೆ</p>.<p>ಉತ್ತರ: ಡಿ</p>.<p>6) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1)ನಮ್ಮ ಭೂಮಿಯ ಬಹುಭಾಗ ಆವರಿಸುವ ಸಮುದ್ರವು ಮಾನವನ ಬದುಕಿನ ಪ್ರಮುಖ ಭಾಗವಾಗಿದೆ. ಆದರೆ ಸಮುದ್ರದ ಸುಮಾರು ಶೇ 95ರಷ್ಟು ಭಾಗ ಅನ್ವೇಷಿಸದೇ ಉಳಿದು ಹೋಗಿದೆ.</p>.<p>2) ಬ್ಲೂ ಎಕಾನಾಮಿಗೆ ಉತ್ತೇಜನ ನೀಡುವ ಸಲುವಾಗಿ ಭಾರತ ಸರ್ಕಾರವು ಅಕ್ಟೋಬರ್ 2021ರಲ್ಲಿ ಮೆಗಾ ಓಷನ್ ಮಿಷನ್ ‘ಸಮುದ್ರಯಾನ’ ಆರಂಭಿಸಿದೆ. ಈಗಾಗಲೇ ಇಂತಹದೇ ಮಿಷನ್ಗಳನ್ನು ಅಮೆರಿಕ, ರಷ್ಯಾ ಜಪಾನ್, ಫ್ರಾನ್ಸ್ ಮತ್ತು ಚೀನ ದೇಶಗಳು ಸೃಷ್ಟಿಸಿವೆ.</p>.<p>ಉತ್ತರ ಸಂಕೇತಗಳು :</p>.<p>ಎ) 1 ಮಾತ್ರ ಸರಿಯಾಗಿದೆ ಬಿ) 2 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆಡಿ) 1 ಮತ್ತು 2 ಎರಡೂ ಸರಿಯಾಗಿದೆ</p>.<p>ಉತ್ತರ: ಡಿ</p>.<p>(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtecenter"><strong>ಕೆಪಿಎಸ್ಸಿ, ಕೆಎಸ್ಐಎಸ್ಎಫ್ ಸೇರಿದಂತೆ ಮುಂದೆ ನಡೆಯಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳು ಇಲ್ಲಿವೆ.</strong></p>.<p>1) ಕೆಳಗಿನ ಹೇಳಿಕೆಗಳನ್ನು ಗಮನಿಸಿ.</p>.<p>1) ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟವು ‘ಜಲನೀತಿ – 2022’ ಕ್ಕೆ ಒಪ್ಪಿಗೆ ನೀಡಿದೆ. ವಾಣಿಜ್ಯ ಉದ್ದೇಶ ಹಾಗೂ ಕೃಷಿಗೆ ಅಂತರ್ಜಲ ಬಳಕೆಗೆ ಕಡಿವಾಣ ಹಾಕುವುದು, ಕುಡಿಯುವ ನೀರಿನ ಪೂರೈಕೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡುವುದು ಜಲನೀತಿಯ ಆಶಯವಾಗಿದೆ.</p>.<p>2) ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಹೊರಗಿನ ನೀರು, ಸ್ಥಳೀಯ ನೀರು, ಮೇಲ್ಮೈ ನೀರು ಮತ್ತು ಅಂತರ್ಜಲ, ಮೇಲ್ಛಾವಣಿ ನೀರು ಮತ್ತು ತ್ಯಾಜ್ಯ ನೀರಿನ ನಿರ್ವಹಣೆಗೆ ಆದ್ಯತೆ.</p>.<p>3) ನೀರು ಬಳಕೆದಾರರ ಸಂಘ, ನೀರಿನ ಬಳಕೆದಾರರ ಮಹಾಮಂಡಳಿ, ಕೆರೆ ನೀರು ಬಳಕೆದಾರರ ಸಂಘ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಜಲಾನಯನ ಸಮಿತಿಗಳನ್ನು ಬಲಪಡಿಸಲು ನಿಯಮಿತವಾಗಿ ಸಭೆಗಳನ್ನು ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಜಲನೀತಿ ರಚನೆಯಾಗಿದೆ.</p>.<p><strong>ಉತ್ತರ ಸಂಕೇತಗಳು :</strong></p>.<p>ಎ) 1 ಮತ್ತು 3 ಮಾತ್ರ ಸರಿಯಾಗಿದೆ ಬಿ) 2 ಮತ್ತು 3 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆ ಡಿ) 1, 2 ಮತ್ತು 3 ಮೂರು ಸರಿಯಾಗಿವೆ</p>.<p>ಉತ್ತರ: ಡಿ</p>.<p>2) ಕರ್ನಾಟಕದ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ- 2022-27ಕ್ಕೆ ಸಚಿವರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ.</p>.<p>1) 2022-27 ಅವಧಿಯಲ್ಲಿ ₹40 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಲಿದೆ.</p>.<p>2) ಭಾರತದ ಶೇ 25ರಷ್ಟು ವಿಮಾನ ಮತ್ತು ಬಾಹ್ಯಾಕಾಶ ನೌಕೆ ಉದ್ಯಮವು ಕರ್ನಾಟಕದಲ್ಲಿ ನೆಲೆಗೊಳ್ಳಲಿದೆ.</p>.<p>3) ರಕ್ಷಣಾ ಸೇವೆಗಳಿಗಾಗಿ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳ ಉತ್ಪಾದನೆಯಲ್ಲಿ ಶೇ 67ರಷ್ಟು ನಮ್ಮ ರಾಜ್ಯದಲ್ಲಿ ಉತ್ಪಾದಿಸಲಾಗುತ್ತದೆ.</p>.<p>4) ಏರೋಸ್ಪೇಸ್ ಸಂಬಂಧಿತ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 65 ಇದ್ದು, ಆ ಪ್ರಮಾಣವನ್ನು ಹೆಚ್ಚಿಸಲಾಗುವುದು.</p>.<p>ಉತ್ತರ ಸಂಕೇತಗಳು:</p>.<p>ಎ) 2 ಮಾತ್ರ ಸರಿಯಾಗಿದೆಬಿ) 1 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆ.ಡಿ) 1 ಮತ್ತು 2 ಎರಡೂ ಸರಿಯಾಗಿದೆ</p>.<p>ಉತ್ತರ: ಡಿ</p>.<p>3) ಸ್ಟಾರ್ಟ್ಅಪ್ ಎಕೋಸಿಸ್ಟಮ್ ನಿರ್ಮಿಸುವಲ್ಲಿ ವಿಶ್ವದಲ್ಲೇ ಭಾರತ 3ನೇ ಸ್ಥಾನದಲ್ಲಿದೆ. ಪ್ರಸ್ತುತ ಭಾರತದಲ್ಲಿ 105 ಯೂನಿಕಾರ್ನ್ಗಳಿವೆ. ಸುಮಾರು 75 ಸಾವಿರ ಸ್ಟಾರ್ಟ್ಅಪ್ಗಳಿವೆ. ಹಾಗಾದರೆ 2 ಮತ್ತು 3ನೇ ಹಂತದ ನಗರಗಳಲ್ಲಿ ಶೇಕಡ ಎಷ್ಟು ಸ್ಟಾರ್ಟ್ಅಪ್ಗಳಿವೆ ?</p>.<p>ಎ) ಶೇ 25ಬಿ) ಶೇ 49 ಸಿ) ಶೇ 76 ಡಿ) ಶೇ 60</p>.<p>ಉತ್ತರ: ಬಿ</p>.<p>4) ಸಂಕ್ಷಿಪ್ತ ಕನ್ನಡ ಭಾಷೆ ಚರಿತ್ರೆ, ಶೃಂಗಾರ ಲಹರಿ, ಕಲಾದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮೊದಲಾದ ಕೃತಿಗಳನ್ನು ಯಾರು ಬರೆದಿದ್ದಾರೆ?</p>.<p>ಎ) ಪ್ರೊ. ಎಂ.ಎಚ್.ಕೃಷ್ಣಯ್ಯ ಬಿ) ಪ್ರೊ.ಎಲ್.ಎಸ್.ಶೇಷಗಿರಿ ರಾವ್</p>.<p>ಸಿ) ಕೃ.ನರಹರಿ ಡಿ) ಜಿ.ರಾಮಕೃಷ್ಣ</p>.<p>ಉತ್ತರ: ಎ</p>.<p>5) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1)→ಕಾರ್ನಿಯಾ ಹಾನಿಯಿಂದ ದೃಷ್ಟಿ ಕಳೆದುಕೊಂಡಿದ್ದ ಭಾರತ ಮತ್ತು ಇರಾನಿನ 20 ಮಂದಿಗೆ ಸಂಶೋಧಕರು ಹಂದಿಯ ಚರ್ಮದಿಂದ ರೂಪಿಸಿದ ಜೈವಿಕ ಕಾರ್ನಿಯಾ (ಕಣ್ಣಿನ ಅತ್ಯಂತ ಪಾರಾದರ್ಶಕ ಪದರ) ಕಸಿ ಮಾಡಿ ದೃಷ್ಟಿ ಮರಳಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>2)ನವದೆಹಲಿಯ ಏಮ್ಸ್ ಸಂಶೋಧಕರು ಸೇರಿದ್ದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಕಾರ್ನಿಯಾ ಕಸಿ ಶಸ್ತ್ರ ಚಿಕಿತ್ಸೆಗೆ ಬೇಕಾದ ಜೈವಿಕ ಕಾರ್ನಿಯಾ ಕಸಿ ಪ್ರಯೋಗದಲ್ಲಿ ಯಶಸ್ವಿಯಾಗಿದೆ.</p>.<p>ಉತ್ತರ ಸಂಕೇತಗಳು :</p>.<p>ಎ) 1 ಮಾತ್ರ ಸರಿಯಾಗಿದೆಬಿ) 2 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆಡಿ) 1 ಮತ್ತು 2 ಎರಡೂ ಸರಿಯಾಗಿದೆ</p>.<p>ಉತ್ತರ: ಡಿ</p>.<p>6) ಕೆಳಗಿನ ಹೇಳಿಕೆಗಳನ್ನು ಗಮನಿಸಿ</p>.<p>1)ನಮ್ಮ ಭೂಮಿಯ ಬಹುಭಾಗ ಆವರಿಸುವ ಸಮುದ್ರವು ಮಾನವನ ಬದುಕಿನ ಪ್ರಮುಖ ಭಾಗವಾಗಿದೆ. ಆದರೆ ಸಮುದ್ರದ ಸುಮಾರು ಶೇ 95ರಷ್ಟು ಭಾಗ ಅನ್ವೇಷಿಸದೇ ಉಳಿದು ಹೋಗಿದೆ.</p>.<p>2) ಬ್ಲೂ ಎಕಾನಾಮಿಗೆ ಉತ್ತೇಜನ ನೀಡುವ ಸಲುವಾಗಿ ಭಾರತ ಸರ್ಕಾರವು ಅಕ್ಟೋಬರ್ 2021ರಲ್ಲಿ ಮೆಗಾ ಓಷನ್ ಮಿಷನ್ ‘ಸಮುದ್ರಯಾನ’ ಆರಂಭಿಸಿದೆ. ಈಗಾಗಲೇ ಇಂತಹದೇ ಮಿಷನ್ಗಳನ್ನು ಅಮೆರಿಕ, ರಷ್ಯಾ ಜಪಾನ್, ಫ್ರಾನ್ಸ್ ಮತ್ತು ಚೀನ ದೇಶಗಳು ಸೃಷ್ಟಿಸಿವೆ.</p>.<p>ಉತ್ತರ ಸಂಕೇತಗಳು :</p>.<p>ಎ) 1 ಮಾತ್ರ ಸರಿಯಾಗಿದೆ ಬಿ) 2 ಮಾತ್ರ ಸರಿಯಾಗಿದೆ</p>.<p>ಸಿ) ಎಲ್ಲವೂ ತಪ್ಪಾಗಿವೆಡಿ) 1 ಮತ್ತು 2 ಎರಡೂ ಸರಿಯಾಗಿದೆ</p>.<p>ಉತ್ತರ: ಡಿ</p>.<p>(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>