ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ: ದ್ವಾರಸಮುದ್ರದ ಹೊಯ್ಸಳರು

Last Updated 22 ಸೆಪ್ಟೆಂಬರ್ 2022, 0:30 IST
ಅಕ್ಷರ ಗಾತ್ರ

1. ಈ ಕೆಳಗಿನ ಕನ್ನಡದ ಆರಂಭಿಕ ಕವಿಗಳಲ್ಲಿ ಅಭಿನವ ಪಂಪ ಎಂದು ಪ್ರಸಿದ್ಧನಾದವನು ಯಾರು ?
ಎ.‌ ಪೊನ್ನ→ಬಿ.‌ ನಾಗಚಂದ್ರ
ಸಿ.‌ ಹರಿಹರ→ಡಿ. ಕುಮಾರವ್ಯಾಸ

⇒ಉತ್ತರ. ಬಿ

2. ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ. ನಾಗಚಂದ್ರನು ಮಲ್ಲಿನಾಥಪುರಾಣ ಮತ್ತು ರಾಮಚಂದ್ರಚರಿತ ಪುರಾಣ ಎಂಬ ಕಾವ್ಯಗಳು ರಚಿಸಿದ್ದಾನೆ.

ಬಿ. ನೇಮಿಚಂದ್ರ ಕವಿಯು ಲೀಲಾವತಿ ಮತ್ತು ನೇಮಿನಾಥ ಎಂಬ ಗ್ರಂಥಗಳನ್ನು ರಚಿಸಿದ್ದಾನೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ. 4

3.→ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ. ರಾಘವಾಂಕನು ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತ್ರೆ, ವೀರೇಶ ಚರಿತೆ ಮುಂತಾದ ಕೃತಿಗಳನ್ನು ಬರೆದಿದ್ದಾನೆ.

ಬಿ.‌ ಈತನು ರಗಳೆಗಳ ಕವಿ ಎಂದು ಹೆಸರಾದ ಹರಿಹರನ ಸೋದರಳಿಯನಾಗಿದ್ದನು.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.

→2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ. 4

4. ಹೊಯ್ಸಳರ ಕಾಲದ ಸಾಹಿತ್ಯಕ ಬೆಳವಣಿಗೆಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ.→ಕೇಶಿರಾಜನು ಶಬ್ದಮಣಿದರ್ಪನ ಕೃತಿಯನ್ನು ರಚಿಸಿದ್ದಾನೆ.

ಬಿ.‌→ಮಲ್ಲಿಕಾರ್ಜುನನು ಸೂಕ್ತಿ ಸುಧಾರ್ಣವ ಎಂಬ ಕೃತಿಯನ್ನು ರಚಿಸಿದ್ದಾನೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
1. ಹೇಳಿಕೆ ಎ ಸರಿಯಾಗಿದೆ.
2. ಹೇಳಿಕೆ ಬಿ ಸರಿಯಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ.
4. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ. 4

5.→ತಮಿಳುನಾಡಿನಲ್ಲಿ ಚೋಳರಿಂದ ಪ್ರಾಣಾಪಾಯಕ್ಕೆ ಗುರಿಯಾದ ರಾಮಾನುಜಾಚಾರ್ಯರಿಗೆ ಆಶ್ರಯವನ್ನು ನೀಡಿದ ಕನ್ನಡದ ದೊರೆಗಳು ಯಾರು ?

ಎ.→ದ್ವಾರಸಮುದ್ರದ ಹೊಯ್ಸಳರು

ಬಿ.‌→ರಾಷ್ಟ್ರಕೂಟರು

ಸಿ.→ಕಲ್ಯಾಣದ ಕಲಚೂರಿಗಳು

ಡಿ.→ವಿಜಯನಗರದ ಅರಸರು

ಉತ್ತರ. ಎ

7. ಹೊಯ್ಸಳರ ಕಾಲದ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ.→ರಾಣಿ ಶಾಂತಲೆ ನಾಟ್ಯಸರಸ್ವತಿ ಎಂದು ಹೆಸರುಪಡೆದಿದ್ದಳು.

ಬಿ.→ರಾಣಿಯು ವೈಷ್ಣವಳಾಗಿದ್ದು ರಾಜವಿಷ್ಣುವರ್ಧನ ಜೈನನಾಗಿದ್ದ ವ್ಯವಸ್ಥೆಯು ಧಾರ್ಮಿಕ ಸಹಿಷ್ಣುತೆಯ ಪರಮೋಚ್ಛ ಉದಾಹರಣೆಯಾಗಿತ್ತು.

→1. ಹೇಳಿಕೆ ಎ ಸರಿಯಾಗಿದೆ.

→2. ಹೇಳಿಕೆ ಬಿ ಸರಿಯಾಗಿದೆ.

→3. ಎರಡೂ ಹೇಳಿಕೆಗಳು ತಪ್ಪಾಗಿವೆ.

→4. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ. 1

8.→ಈ ಕೆಳಗಿನ ಯಾವುವು ಜೈನ ಧರ್ಮದ ಪಂಥಗಳಾಗಿವೆ ?

ಎ. ಶ್ವೇತಾಂಬರ, ದಿಗಂಬರ ಮತ್ತು ಯಾಪನೀಯ

ಬಿ.‌ ಶ್ವೇತಾಂಬರ, ದಿಗಂಬರ ಮತ್ತು ಕಾಪಾಲಿಕ

ಉತ್ತರ. ಎ

9. ಹೊಯ್ಸಳರ ಕಾಲದಲ್ಲಿ ಈ ಕೆಳಗಿನ ಯಾವುದೆಲ್ಲಾ ಆತ್ಮ ಬಲಿಗಳ ಪ್ರಕಾರಗಳು ಶಾಸನಗಳಲ್ಲಿ ಉಲ್ಲೇಖವಾಗಿದೆ ?

ಎ.‌ಲೆಂಕರು→ಬಿ. ಗರುಡರು→

ಸಿ. ತುಳಿಲಾಲ್‌→ಡಿ. ವೇಳೆವಾಳಿ

ಇ. ಜೋಳವಾಳಿ

→1. ಎ ಬಿ‌ ಮತ್ತು ಸಿ.→2. ಬಿ ಡಿ ಮತ್ತು ಇ
3. ಡಿ ಮತ್ತು ಇ→4. ಮೇಲಿನ ಎಲ್ಲವೂ

ಉತ್ತರ. 4

10. ಹೊಯ್ಸಳರ ಕಾಲದ ಕೃಷಿ ವ್ಯವಸ್ಥೆಯ ಬಗ್ಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

ಎ.→ಹೊಯ್ಸಳರ ಕಾಲದ ಕೃಷಿ ಭೂಮಿಯನ್ನು ಸಾಮಾನ್ಯವಾಗಿ ದೇವ ಮಾತ್ರಕ ಮತ್ತು ನದಿ ಮಾತ್ರಕ ಎಂದು ಎರಡು ಭಾಗಗಳಾಗಿ
ವಿಂಗಡಿಸಿದ್ದರು.

ಬಿ.→ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ಜಮೀನುಗಳನ್ನು ನದಿ ಮಾತ್ರಕ ಎಂದೂ ಕೆರೆಬಾವಿಗಳನ್ನು ಆಶ್ರಯಿಸಿದ ಭೂಮಿಯನ್ನು ದೇವಮಾತ್ರಕ ಎಂದು ಕರೆಯಲಾಗುತ್ತಿತ್ತು .

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
→1. ಹೇಳಿಕೆ ಎ ಸರಿಯಾಗಿದೆ.
→2. ಹೇಳಿಕೆ ಬಿ ಸರಿಯಾಗಿದೆ.
→3. ಎರಡೂ ಹೇಳಿಕೆಗಳು ತಪ್ಪಾಗಿವೆ.
→4. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ .1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT