<p>ಅಮೆರಿಕದ ಹಂಟ್ಸ್ ವಿಲ್ಲೆಯ ಯುಎಸ್ ಬಾಹ್ಯಾಕಾಶ ಮತ್ತು ರಾಕೆಟ್ ಕೇಂದ್ರದ (ಯುಎಸ್ಎಸ್ಆರ್ಸಿ) ಹನಿವೆಲ್ ಲೀಡರ್ಶಿಪ್ ಚಾಲೆಂಜ್ ಅಕಾಡೆಮಿಯಲ್ಲಿ (ಎಚ್ಎಲ್ಸಿಎ) ಎರಡು ವಾರ ನಡೆದಶಿಬಿರದಲ್ಲಿ ಬೆಂಗಳೂರಿನ ಏಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ವಿಶಿಷ್ಟ ನಾಯಕತ್ವ ಶಿಬಿರದಲ್ಲಿ 41 ರಾಷ್ಟ್ರಗಳ 16–18 ವರ್ಷದ 291 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಹ್ಯಾಕಾಶ ನೌಕೆ ನಿರ್ವಹಣೆ, ಚಂದ್ರನಲ್ಲಿ ಗಗನಯಾನಿಗಳ ನಡಿಗೆಯಂತಹ ತರಬೇತಿಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.</p>.<p>ಬೆಂಗಳೂರಿನ ಏಳು ವಿದ್ಯಾರ್ಥಿಗಳ ಜತೆ ಪುಣೆಯ ಎಂಟು, ದೆಹಲಿ ಎನ್ಸಿಆರ್ ಮತ್ತು ಹೈದರಾಬಾದ್ನಿಂದ ತಲಾ ಒಬ್ಬ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸಿದ್ದರು.</p>.<p>‘ಜೀವನದ ಪ್ರತಿ ಹೆಜ್ಜೆಗಳನ್ನು ಹೇಗೆ ಸ್ವತಂತ್ರವಾಗಿ ನಿರ್ವಹಿಸಬೇಕು ಎನ್ನುವುದನ್ನು ಈ ಶಿಬಿರ ನನಗೆ ಕಲಿಸಿದೆ’ ಎಂದು ಬೆಂಗಳೂರಿನ ಶ್ರೀಕರ ದೇಸು ಮತ್ತು ಮಲ್ಟಿ ಎಕ್ಸಿಸ್ ಟ್ರೇನರ್ನಲ್ಲಿ ಭಾಗವಹಿಸಿದ್ದ ಆಕಾಂಕ್ಷಾ ಪ್ರಭು ತಮ್ಮಅನುಭವ ಹಂಚಿಕೊಂಡಿದ್ದಾರೆ. ಜಗತ್ತಿನ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದು ಅತ್ಯಂತ ರೋಮಾಂಚನಕಾರಿಯಾಗಿತ್ತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.</p>.<p><strong>ನಾಸಾ ಪ್ರಬಂಧ ಸ್ಪರ್ಧೆಯಲ್ಲಿಕನ್ನಡಿಗ ವಿದ್ಯಾರ್ಥಿ ವಿಜೇತ</strong></p>.<p>ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯೋಜಿಸಿದ್ದ 2018–19ನೇ ಸಾಲಿನ ‘ಸೈಂಟಿಸ್ಟ್ ಫಾರ್ ಎ ಡೇ’ ರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡಿಗ ವಿದ್ಯಾರ್ಥಿ ರಮೇಶ್ ರವೀಂದ್ರ ಪತ್ತಾರ್ ವಿಜೇತನಾಗಿ ಹೊರ ಹೊಮ್ಮಿದ್ದಾನೆ.</p>.<p>ಸದ್ಯ ಅಮೆರಿಕದ ಶಾಲೆಯಲ್ಲಿ ಕಲಿಯುತ್ತಿರುವ ರಮೇಶ್ ಈ ಮೊದಲುಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ (ನಾರ್ತ್) ನಲ್ಲಿ ಕಲಿಯುತ್ತಿದ್ದ. ಕೆಲಸದ ನಿಮಿತ್ತ ಆತನ ತಂದೆ ರವೀಂದ್ರ ಪತ್ತಾರ್ ಕೆಲವು ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದಾರೆ.</p>.<p>ರಮೇಶ್ ಬರೆದ ಪ್ರಬಂಧ ಅದ್ಭುತವಾಗಿದ್ದು, ವಿಜೇತನಾಗಿ ಹೊರಹೊಮ್ಮಿದ್ದಾನೆ ಎಂದು ಕ್ಯಾಲಿಫೋರ್ನಿಯಾದದಲ್ಲಿರುವ ನಾಸಾ ಜೆಟ್ ಪ್ರೊಪುಲ್ಶನ್ ಲ್ಯಾಬೊರೇಟರಿಯ ರಚೇಲ್ ಝಿಮ್ಮರ್ಮನ್ ಬ್ರಾಚ್ಮನ್ ಅವರು ಪಾಲಕರಿಗೆ ಪತ್ರ ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಮೆರಿಕದ ಹಂಟ್ಸ್ ವಿಲ್ಲೆಯ ಯುಎಸ್ ಬಾಹ್ಯಾಕಾಶ ಮತ್ತು ರಾಕೆಟ್ ಕೇಂದ್ರದ (ಯುಎಸ್ಎಸ್ಆರ್ಸಿ) ಹನಿವೆಲ್ ಲೀಡರ್ಶಿಪ್ ಚಾಲೆಂಜ್ ಅಕಾಡೆಮಿಯಲ್ಲಿ (ಎಚ್ಎಲ್ಸಿಎ) ಎರಡು ವಾರ ನಡೆದಶಿಬಿರದಲ್ಲಿ ಬೆಂಗಳೂರಿನ ಏಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ವಿಶಿಷ್ಟ ನಾಯಕತ್ವ ಶಿಬಿರದಲ್ಲಿ 41 ರಾಷ್ಟ್ರಗಳ 16–18 ವರ್ಷದ 291 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಹ್ಯಾಕಾಶ ನೌಕೆ ನಿರ್ವಹಣೆ, ಚಂದ್ರನಲ್ಲಿ ಗಗನಯಾನಿಗಳ ನಡಿಗೆಯಂತಹ ತರಬೇತಿಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.</p>.<p>ಬೆಂಗಳೂರಿನ ಏಳು ವಿದ್ಯಾರ್ಥಿಗಳ ಜತೆ ಪುಣೆಯ ಎಂಟು, ದೆಹಲಿ ಎನ್ಸಿಆರ್ ಮತ್ತು ಹೈದರಾಬಾದ್ನಿಂದ ತಲಾ ಒಬ್ಬ ವಿದ್ಯಾರ್ಥಿ ಶಿಬಿರದಲ್ಲಿ ಭಾಗವಹಿಸಿದ್ದರು.</p>.<p>‘ಜೀವನದ ಪ್ರತಿ ಹೆಜ್ಜೆಗಳನ್ನು ಹೇಗೆ ಸ್ವತಂತ್ರವಾಗಿ ನಿರ್ವಹಿಸಬೇಕು ಎನ್ನುವುದನ್ನು ಈ ಶಿಬಿರ ನನಗೆ ಕಲಿಸಿದೆ’ ಎಂದು ಬೆಂಗಳೂರಿನ ಶ್ರೀಕರ ದೇಸು ಮತ್ತು ಮಲ್ಟಿ ಎಕ್ಸಿಸ್ ಟ್ರೇನರ್ನಲ್ಲಿ ಭಾಗವಹಿಸಿದ್ದ ಆಕಾಂಕ್ಷಾ ಪ್ರಭು ತಮ್ಮಅನುಭವ ಹಂಚಿಕೊಂಡಿದ್ದಾರೆ. ಜಗತ್ತಿನ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದು ಅತ್ಯಂತ ರೋಮಾಂಚನಕಾರಿಯಾಗಿತ್ತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.</p>.<p><strong>ನಾಸಾ ಪ್ರಬಂಧ ಸ್ಪರ್ಧೆಯಲ್ಲಿಕನ್ನಡಿಗ ವಿದ್ಯಾರ್ಥಿ ವಿಜೇತ</strong></p>.<p>ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಯೋಜಿಸಿದ್ದ 2018–19ನೇ ಸಾಲಿನ ‘ಸೈಂಟಿಸ್ಟ್ ಫಾರ್ ಎ ಡೇ’ ರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡಿಗ ವಿದ್ಯಾರ್ಥಿ ರಮೇಶ್ ರವೀಂದ್ರ ಪತ್ತಾರ್ ವಿಜೇತನಾಗಿ ಹೊರ ಹೊಮ್ಮಿದ್ದಾನೆ.</p>.<p>ಸದ್ಯ ಅಮೆರಿಕದ ಶಾಲೆಯಲ್ಲಿ ಕಲಿಯುತ್ತಿರುವ ರಮೇಶ್ ಈ ಮೊದಲುಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ (ನಾರ್ತ್) ನಲ್ಲಿ ಕಲಿಯುತ್ತಿದ್ದ. ಕೆಲಸದ ನಿಮಿತ್ತ ಆತನ ತಂದೆ ರವೀಂದ್ರ ಪತ್ತಾರ್ ಕೆಲವು ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದಾರೆ.</p>.<p>ರಮೇಶ್ ಬರೆದ ಪ್ರಬಂಧ ಅದ್ಭುತವಾಗಿದ್ದು, ವಿಜೇತನಾಗಿ ಹೊರಹೊಮ್ಮಿದ್ದಾನೆ ಎಂದು ಕ್ಯಾಲಿಫೋರ್ನಿಯಾದದಲ್ಲಿರುವ ನಾಸಾ ಜೆಟ್ ಪ್ರೊಪುಲ್ಶನ್ ಲ್ಯಾಬೊರೇಟರಿಯ ರಚೇಲ್ ಝಿಮ್ಮರ್ಮನ್ ಬ್ರಾಚ್ಮನ್ ಅವರು ಪಾಲಕರಿಗೆ ಪತ್ರ ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>