‘ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ತೀವ್ರ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ, ಮಾನಸಿಕ ಒತ್ತಡವನ್ನು ದೂರ ಮಾಡುವುದು ಸಂಸ್ಥೆಯ ಗುರಿ. ಎಷ್ಟೇ ಪ್ರತಿಭಾವಂತರಾಗಿದ್ದರೂ ಹಣಕಾಸಿನ ಒತ್ತಡ ಎದುರಾದಾಗ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿ ಎದುರಿಸುವುದು ಕಷ್ಟಸಾಧ್ಯ. ಅಂಥ ಅಭ್ಯರ್ಥಿಗಳು ತಮ್ಮ ಗಮನ ಸಂಪೂರ್ಣವಾಗಿ ಕಲಿಕೆಯತ್ತ ನೀಡಲು ಸಾಧ್ಯವಾಗಬೇಕೆಂಬ ಸದುದ್ದೇಶದಿಂದ ಈ ಯೋಜನೆ ಆರಂಭಿಸಿದ್ದೇವೆ’ ಎಂದು ಪ್ರಮೋದ್ ಶ್ರೀನಿವಾಸ್ ಹೇಳಿದರು.