ಬೆಂಗಳೂರು: ನಗರದ ಮಣಿಪಾಲ ಆಸ್ಪತ್ರೆ ಆಯೋಜಿಸಿದ್ದ ‘ವೆಲ್ನೆಸ್ ಅಟ್ ವರ್ಕ್’ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಪೊರೇಟ್ ಕಂಪನಿಗಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುಖ್ಯ ಅತಿಥಿಯಾಗಿದ್ದರು.
ಉದ್ಯೋಗಿಗಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವ ವಿಧಾನ ಉದ್ವೇಗದ ಕ್ಷಣಗಳನ್ನು ನಿಭಾಯಿಸುವ ನೈಪುಣ್ಯ, ಸಾಮಾಜಿಕ ಸ್ಥರದ ಆರೋಗ್ಯಕ್ಕೆ ಪೂರಕ ಕಾರ್ಯ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮೇ ಮತ್ತು ಜೂನ್ ತಿಂಗಳಲ್ಲಿ ಮಣಿಪಾಲ್ ಟಿ–10 ಕಾರ್ಪೊರೇಟ್ ಕ್ರಿಕೆಟ್ ಟೂರ್ನಿ ಆಯೋಜಿಸುವುದಾಗಿ ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಘೋಷಿಸಿತು.
ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್, ಏಷ್ಯಾ ಹೆಲ್ತ್ಕೇರ್ ಹೋಲ್ಡಿಂಗ್ಸ್ನ ಕಾರ್ಯನಿರ್ವಾಹಕ ಅಧ್ಯಕ್ಷ ವಿಶಾಲ್ ಬಾಲಿ, ಉದ್ಯಮಿಗಳಾದ ರಾಹುಲ್ ಎಂ, ರೂಪಾ ಪರಶುರಾಮ್, ಸಂಜೀವ್ ಪ್ರಸಾದ್ ಇದ್ದರು.