ಮಾಹಿತಿ ತಿಳಿದ ತಕ್ಷಣ ಸೋಮವಾರ ಶಾಲೆಗೆ ತೆರಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು, ಶಾಲೆಯ ವರ್ತನೆ ವಿರುದ್ಧ ಹರಿಹಾಯ್ದರು. ಶಾಲೆಯ ವೆಬ್ಸೈಟ್, ಕನ್ನಡ ಭಾಷಾ ಕಲಿಕಾ ವಿಧಾನಗಳನ್ನು ಪರಿಶೀಲಿಸಿ,ವಿವಿಧ ವಿಷಯಗಳ ಬೋಧನೆ ಮಾಡುವ ಶಿಕ್ಷಕರನ್ನು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನು ನಿಯಮ ಉಲ್ಲಂಘಿಸಿ ನೇಮಕ ಮಾಡಿಕೊಂಡಿರುವುದಕ್ಕೆ ತರಾಟೆಗೆ ತೆಗೆದುಕೊಂಡರು.