<p><strong>ಹಿರೇಬಾಗೇವಾಡಿ: ‘</strong>ಬೊಮ್ಮಾಯಿ ಲಿಂಗಾಯತರಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಹಾಗಾದರೆ, ರಾಹುಲ್ ಗಾಂಧಿ– ಸುರ್ಜೇವಾಲಾ ಲಿಂಗಾಯತರಾ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.</p><p>ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ ಪರ ಮಂಗಳವಾರ ಹಿರೇಬಾಗೇವಾಡಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಒಮ್ಮೆ ಧರ್ಮ ಒಡೆಯುವ ಹುನ್ನಾರ ನಡೆಸಿ ಪೆಟ್ಟು ತಿಂದಿದ್ದಾರೆ. ಆದರೂ ಈ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ. ನೀವು ನಮ್ಮ ಸ್ವಾಭಿಮಾನ ಕೆಣಕಿದ್ದೀರಿ. ಎಚ್ಚರ, ಅದು ಜ್ವಾಲೆಯಾಗಿ ನಿಮ್ಮ ವಿರುದ್ಧ ಬರಲಿದೆ’ ಎಂದರು.</p><p>‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಾಗೇಶ ಮನ್ನೋಳಕರ ಪರ ರಮೇಶ ಜಾರಕಿಹೊಳಿ ಕೂಡ ನಿಂತಿದ್ದಾರೆ. ಅವರ ಪ್ರತಿಜ್ಞೆ ಎಂದೂ ತಪ್ಪಿಲ್ಲ. ಅದರಲ್ಲೂ ಮಾಜಿ ಶಾಸಕ ಸಂಜಯ ಪಾಟೀಲ ಭಾಷಣ ಕೇಳುವುದೇ ರೋಮಾಂಚಕ’ ಎಂದರು.</p><p>‘ರಮೇಶ ಜಾರಕಿಹೊಳಿಯದ್ದು ವಿಚಿತ್ರ ರಾಜಕೀಯ ಜೀವನ. 25 ವರ್ಷಗಳು ಶಾಸಕರಾಗಿದ್ದರೂ ಸಚಿವರಾಗಿದ್ದು ಎರಡೇ ವರ್ಷ. ಉಳಿದ ಜೀವನವನ್ನು ಅವರನ್ನು ಶಾಸಕ ಮಾಡಿದೆ, ಇವರನ್ನು ಗೆಲ್ಲಿಸಿದೆ ಎಂದೇ ಓಡಾಡಿದ್ದಾರೆ. ಇದರಿಂದ ಜಿಲ್ಲೆಯ ಜನರ ವಿಶ್ವಾಸ ಗೆದ್ದಿದ್ದಾರೆ’ ಎಂದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಬಾಗೇವಾಡಿ: ‘</strong>ಬೊಮ್ಮಾಯಿ ಲಿಂಗಾಯತರಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಹಾಗಾದರೆ, ರಾಹುಲ್ ಗಾಂಧಿ– ಸುರ್ಜೇವಾಲಾ ಲಿಂಗಾಯತರಾ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.</p><p>ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ ಪರ ಮಂಗಳವಾರ ಹಿರೇಬಾಗೇವಾಡಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಒಮ್ಮೆ ಧರ್ಮ ಒಡೆಯುವ ಹುನ್ನಾರ ನಡೆಸಿ ಪೆಟ್ಟು ತಿಂದಿದ್ದಾರೆ. ಆದರೂ ಈ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ. ನೀವು ನಮ್ಮ ಸ್ವಾಭಿಮಾನ ಕೆಣಕಿದ್ದೀರಿ. ಎಚ್ಚರ, ಅದು ಜ್ವಾಲೆಯಾಗಿ ನಿಮ್ಮ ವಿರುದ್ಧ ಬರಲಿದೆ’ ಎಂದರು.</p><p>‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಾಗೇಶ ಮನ್ನೋಳಕರ ಪರ ರಮೇಶ ಜಾರಕಿಹೊಳಿ ಕೂಡ ನಿಂತಿದ್ದಾರೆ. ಅವರ ಪ್ರತಿಜ್ಞೆ ಎಂದೂ ತಪ್ಪಿಲ್ಲ. ಅದರಲ್ಲೂ ಮಾಜಿ ಶಾಸಕ ಸಂಜಯ ಪಾಟೀಲ ಭಾಷಣ ಕೇಳುವುದೇ ರೋಮಾಂಚಕ’ ಎಂದರು.</p><p>‘ರಮೇಶ ಜಾರಕಿಹೊಳಿಯದ್ದು ವಿಚಿತ್ರ ರಾಜಕೀಯ ಜೀವನ. 25 ವರ್ಷಗಳು ಶಾಸಕರಾಗಿದ್ದರೂ ಸಚಿವರಾಗಿದ್ದು ಎರಡೇ ವರ್ಷ. ಉಳಿದ ಜೀವನವನ್ನು ಅವರನ್ನು ಶಾಸಕ ಮಾಡಿದೆ, ಇವರನ್ನು ಗೆಲ್ಲಿಸಿದೆ ಎಂದೇ ಓಡಾಡಿದ್ದಾರೆ. ಇದರಿಂದ ಜಿಲ್ಲೆಯ ಜನರ ವಿಶ್ವಾಸ ಗೆದ್ದಿದ್ದಾರೆ’ ಎಂದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>