ನಮ್ಮದು ಗಣತಂತ್ರ ವ್ಯವಸ್ಥೆ ಎನ್ನುವುದನ್ನು ನಮಗೆ ನೆನಪಿಸಲು ಬರುವ ಕ್ಷಣವೆಂದರೆ ಚುನಾವಣೆ. ಮತದಾನ ಈ ಗಣತಂತ್ರದ ನಿಜವಾದ ಆಚರಣೆ. ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳಾರೂ ಯೋಗ್ಯರಲ್ಲ ಎನಿಸಿದರೆ ‘ನೋಟಾ’ ಬಳಸುವ ಅವಕಾಶವಿದೆ. ಆದರೆ ಅದರಿಂದ ಪ್ರಯೋಜನವಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಇರುವವರಲ್ಲೇ ಪ್ರಾಮಾಣಿಕ, ಅರ್ಹರೆನಿಸಿದವರನ್ನು ಆಯ್ಕೆ ಮಾಡುವುದು ಉತ್ತಮ.