₹538 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ತಮಿಳುನಾಡಿನ ಉದ್ಯಮಿ ಆತ್ರಲ್ ಅಶೋಕ್ ಕುಮಾರ್ ಅವರನ್ನು ಎಐಎಡಿಎಂಕೆ ಈರೋಡ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಇಂಟೆಲ್ ಮತ್ತು ಮೈಕ್ರೊಸಾಫ್ಟ್ನಲ್ಲಿ ಅಶೋಕ್ ಅವರು ಕೆಲಸ ನಿರ್ವಹಿಸಿದ್ದರು. 13 ವರ್ಷಗಳ ಕಾಲ ಅಮೆರಿಕದಲ್ಲಿದ್ದ ಇವರು 2005ರಲ್ಲಿ ಭಾರತಕ್ಕೆ ಮರಳಿದ್ದರು. ಇವರು ಶಿಕ್ಷಣ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಅಶೋಕ್ ಅವರು 2021ರಲ್ಲಿ ಆತ್ರಲ್ ಫೌಂಡೇಶನ್ ಸ್ಥಾಪಿಸಿ, ಅದರ ಅಧೀನದಲ್ಲಿ ಕಡಿಮೆ ದರಕ್ಕೆ ಆಹಾರ ನೀಡುವ ಕ್ಯಾಂಟೀನ್ಗಳನ್ನು ಈರೋಡ್ ಸುತ್ತ ಮುತ್ತ ಆರಂಭಿಸಿದ್ದರು. ಅಶೋಕ್ ಅವರ ತಾಯಿ ಕೆ.ಎಸ್. ಸೌಂದರಮ್ ಅವರು ಎಐಎಡಿಎಂಕೆಯ ಸಂಸದೆಯಾಗಿದ್ದರು. ಅಶೋಕ್, 2023ರಲ್ಲಿ ಬಿಜೆಪಿ ತೊರೆದು ಎಐಎಡಿಎಂಕೆಗೆ ಸೇರಿದ್ದರು. ಇವರ ಅತ್ತೆ ಸಿ. ಸರಸ್ವತಿ ಅವರು ಬಿಜೆಪಿ ಶಾಸಕಿಯಾಗಿದ್ದಾರೆ.