ನಾವು ರಾಮ ಮಂದಿರವನ್ನು ನಿರ್ಮಿಸಿದ್ದೇವೆ. ಆದರೆ ಇದರಿಂದ ಏನೂ ಪ್ರಯೋಜನವಾಗದು. ರಾಮನ ಆದರ್ಶಗಳನ್ನೂ ಪಾಲನೆ ಮಾಡುವ ಅಗತ್ಯವಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕಾಗಿ ರಾಜಕೀಯ ಮಾಡಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ರಾಜಕೀಯವು ಕುರ್ಚಿಗೆ ಸೀಮಿತವಾಗಿದೆ. ನನ್ನ ಪಕ್ಷ ಕೂಡ ಈ ಅಲೆಗೆ ಕೊಚ್ಚಿಕೊಂಡು ಹೋಗುತ್ತಿರುವುದು ನೋವು ತಂದಿದೆ. ಇಂದು ಆದರ್ಶಯುತ ರಾಜಕೀಯದ ಅಗತ್ಯವಿದೆ. ದೇಶದ ರಾಜಕೀಯ ನಾಯಕರು ತಮ್ಮ ಮೌಲ್ಯಗಳನ್ನು ಪಾಲನೆ ಮಾಡಿ, ರಾಜಕೀಯದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು
-ಶಾಂತಕುಮಾರ್, ಬಿಜೆಪಿ ಮುಖಂಡ, ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆಅಧಿಕಾರಕ್ಕೇರಲಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇರಳದಲ್ಲಿ ಕನಿಷ್ಠ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ತ್ರಿಶ್ಶೂರ್ ಕ್ಷೇತ್ರದಲ್ಲಿ ಸುರೇಶ್ ಗೋಪಿ, ತಿರುವನಂತಪುರದಲ್ಲಿ ರಾಜೀವ್ ಚಂದ್ರಶೇಖರ್, ಆಟ್ಟಿಂಗಲ್ನಲ್ಲಿ ವಿ. ಮುರಳೀಧರನ್ ಮತ್ತು ಆಲಪ್ಪುಳದಲ್ಲಿ ಶೋಭಾ ಸುರೇಂದ್ರನ್ ಅವರು ಖಂಡಿತವಾಗಿಯೂ ಜಯ ಗಳಿಸುತ್ತಾರೆ