ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಥಾ ಮಾತು

Published 24 ಮಾರ್ಚ್ 2024, 19:36 IST
Last Updated 24 ಮಾರ್ಚ್ 2024, 19:36 IST
ಅಕ್ಷರ ಗಾತ್ರ
ನಾವು ರಾಮ ಮಂದಿರವನ್ನು ನಿರ್ಮಿಸಿದ್ದೇವೆ. ಆದರೆ ಇದರಿಂದ ಏನೂ ಪ್ರಯೋಜನವಾಗದು. ರಾಮನ ಆದರ್ಶಗಳನ್ನೂ ಪಾಲನೆ ಮಾಡುವ ಅಗತ್ಯವಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕಾಗಿ ರಾಜಕೀಯ ಮಾಡಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ರಾಜಕೀಯವು ಕುರ್ಚಿಗೆ ಸೀಮಿತವಾಗಿದೆ. ನನ್ನ ಪಕ್ಷ ಕೂಡ ಈ ಅಲೆಗೆ ಕೊಚ್ಚಿಕೊಂಡು ಹೋಗುತ್ತಿರುವುದು ನೋವು ತಂದಿದೆ. ಇಂದು ಆದರ್ಶಯುತ ರಾಜಕೀಯದ ಅಗತ್ಯವಿದೆ. ದೇಶದ ರಾಜಕೀಯ ನಾಯಕರು ತಮ್ಮ ಮೌಲ್ಯಗಳನ್ನು ಪಾಲನೆ ಮಾಡಿ, ರಾಜಕೀಯದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು
-ಶಾಂತಕುಮಾರ್‌, ಬಿಜೆಪಿ ಮುಖಂಡ, ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆಅಧಿಕಾರಕ್ಕೇರಲಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇರಳದಲ್ಲಿ ಕನಿಷ್ಠ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ತ್ರಿಶ್ಶೂರ್‌ ಕ್ಷೇತ್ರದಲ್ಲಿ ಸುರೇಶ್‌ ಗೋಪಿ, ತಿರುವನಂತಪುರದಲ್ಲಿ ರಾಜೀವ್‌ ಚಂದ್ರಶೇಖರ್, ಆಟ್ಟಿಂಗಲ್‌ನಲ್ಲಿ ವಿ. ಮುರಳೀಧರನ್‌ ಮತ್ತು ಆಲಪ್ಪುಳದಲ್ಲಿ ಶೋಭಾ ಸುರೇಂದ್ರನ್‌ ಅವರು ಖಂಡಿತವಾಗಿಯೂ ಜಯ ಗಳಿಸುತ್ತಾರೆ
-ಇ. ಶ್ರೀಧರನ್‌, ಮೆಟ್ರೊ ಪರಿಣತ, ಬಿಜೆಪಿ ಮುಖಂಡ
ಶಾಂತಕುಮಾರ್‌
ಶಾಂತಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT