ನವದೆಹಲಿ: ಬಿಎಸ್ಪಿ ಮುಖಂಡ ಹಾಗೂ ಸಂಸದ ಮಲೂಕ್ ನಗರ್ ಅವರು ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳಕ್ಕೆ (ಆರ್ಎಲ್ಡಿ) ಗುರುವಾರ ಸೇರ್ಪಡೆಯಾದರು.
ಮಲೂಕ್ ಅವರು ಉತ್ತರ ಪ್ರದೇಶದ ಬಿಜ್ನೋರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಬಿಜ್ನೋರ್ ಪ್ರದೇಶದಲ್ಲಿ ಆರ್ಎಲ್ಡಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸುವುದಾಗಿ ಮಲೂಕ್ ಅವರು ತಿಳಿಸಿದರು. ಆರ್ಎಲ್ಡಿಯು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಜೊತೆಗಿದೆ.
ಕಾಂಗ್ರೆಸ್ನ ಮಾಜಿ ವಕ್ತಾರ ಬಿಜೆಪಿಗೆ:
ಕಾಂಗ್ರೆಸ್ನ ಮಾಜಿ ವಕ್ತಾರ ರೋಹನ್ ಗುಪ್ತಾ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ರೋಹನ್ ಅವರು ಇತರ ಮುಖಂಡರ ಜತೆ ಪಕ್ಷಕ್ಕೆ ಸೇರಿದರು.