‘ಈ ಲೋಕಸಭಾ ಚುನಾವಣೆಯು ಎರಡು ಸಿದ್ಧಾಂತಗಳ ನಡುವಣ ಹೋರಾಟವಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬುಧವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಒಕ್ಕೂಟವು ಸಂವಿಧಾನಕ್ಕಾಗಿ ಹೋರಾಡುತ್ತಿದ್ದರೆ, ಬಿಜೆಪಿಯು ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಾಶಗೊಳಿಸಲು ಹೋರಾಡುತ್ತಿದೆ’ ಎಂದು ಟೀಕಿಸಿದರು. ‘ಬಿಜೆಪಿಯು 20ರಿಂದ 25 ಜನ ಶ್ರೀಮಂತರಿಗೆ ಸೇರಿದ್ದಾಗಿದೆ. ಕಾಂಗ್ರೆಸ್ಗೆ ನೀವು ಅಧಿಕಾರ ನೀಡಿದರೆ ಜನಸಾಮಾನ್ಯರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ ಕೆಲಸ ಮಾಡಲಿದೆ’ ಎಂದು ರಾಹುಲ್ ಹೇಳಿದರು.