<p><strong>ಹೈದರಾಬಾದ್ (ಪಿಟಿಐ): </strong>ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ನೂತನ ‘ಜೈ ಸಮೈಕ್ಯ ಆಂಧ್ರ’ ಪಕ್ಷದ ಚಿಹ್ನೆ ಪಾದರಕ್ಷೆ ಎಂದು ಘೋಷಿಸಲಾಗಿದೆ.<br /> <br /> ವಿಶಾಖಪಟ್ಟಣದಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ರೆಡ್ಡಿ ಅವರು ಈ ವಿಷಯವನ್ನು ಘೋಷಿಸಿದರು.<br /> <br /> ‘ಪಾದರಕ್ಷೆ ಚಿಹ್ನೆಗೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ’ ಎಂದು ಜೈ ಸಮೈಕ್ಯ ಆಂಧ್ರ ಪಕ್ಷದ ಮುಖಂಡರು ತಿಳಿಸಿದ್ದಾರೆ.<br /> ‘ಪಾದರಕ್ಷೆ ಸಮಾನತೆಯ ಸಂಕೇತವಾಗಿದೆ. ಧರ್ಮ, ಜಾತಿ, ವರ್ಗ ಎಂಬ ಭೇದವಿಲ್ಲದೇ ಎಲ್ಲರಿಗೂ ಸಮಾನವಾದ ರಕ್ಷಣೆ ಒದಗಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.<br /> <br /> ರೆಡ್ಡಿ ಅವರು ಶನಿವಾರ ಇಲ್ಲಿ ಐ.ಟಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿದರು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಅವರು ವಿವಿಧ ವರ್ಗಗಳೊಂದಿಗೆ ಸಮಾಲೋಚಿಸುತ್ತಿದ್ದಾರೆ.<br /> <br /> ಆಂಧ್ರ ಪ್ರದೇಶದಲ್ಲಿ ಏಪ್ರಿಲ್ 30 ಮತ್ತು ಮೇ 7ರಂದು ಲೋಕಸಭೆ ಮತ್ತು ವಿಧಾನಸಭೆಗೆ ಜೊತೆಯಲ್ಲೇ ಚುನಾವಣೆ ನಡೆಯಲಿದೆ.<br /> <br /> <strong>ಮತಪತ್ರ ಬಳಸಲು ಆಗ್ರಹ</strong><br /> <strong>ಭೋಪಾಲ್ (ಪಿಟಿಐ): </strong>ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಮ್) ಬದಲು ಮತಪತ್ರಗಳನ್ನು ಬಳಸಬೇಕೆಂದು ಕಾಂಗ್ರೆಸ್ ಸಂಸದ ಸಜ್ಜನ್ ಸಿಂಗ್ ವರ್ಮಾ ಅವರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.<br /> <br /> ‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇವಿಎಮ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಜನ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದ್ದರಿಂದ ಮತಪತ್ರಗಳನ್ನು ಬಳಸುವುದು ಒಳಿತು’ ಎಂದು ಶನಿವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.<br /> <br /> <strong>‘ಪ್ರಣಾಳಿಕೆಗೆ ಮಕ್ಕಳ ಹಕ್ಕು ಸೇರಿಸಿ</strong>’<br /> <strong>ನವದೆಹಲಿ (ಪಿಟಿಐ):</strong> ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.<br /> <br /> ಈ ಸಂಬಂಧ, ಎನ್ಸಿಪಿಸಿಆರ್ ಅಧ್ಯಕ್ಷರಾದ ಕುಶಾಲ್ ಸಿಂಗ್ ಅವರು ಸೋನಿಯಾ ಗಾಂಧಿ (ಕಾಂಗ್ರೆಸ್), ರಾಜನಾಥ್ ಸಿಂಗ್ (ಬಿಜೆಪಿ), ಮಾಯಾವತಿ (ಬಿಎಸ್ಪಿ), ಪ್ರಕಾಶ್ ಕಾರಟ್ (ಸಿಪಿಎಂ) ಸೇರಿದಂತೆ ಎಲ್ಲಾ ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.<br /> <br /> <strong>‘ತೃತೀಯ ರಂಗ ಮರೀಚಿಕೆ’</strong><br /> <strong>ಚೆನ್ನೈ(ಪಿಟಿಐ): </strong>ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗವನ್ನು ‘ಮರೀಚಿಕೆ’ ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು, ಅದು ಈ ಹಿಂದೆ ‘ಯತ್ನಿಸಿ’ ‘ವಿಫಲ’ಗೊಂಡಿರುವ ಪ್ರಯೋಗ ಎಂದು ಹೇಳಿದ್ದಾರೆ.<br /> <br /> ‘ಅವರು ತೃತೀಯ ರಂಗದ ಬಗ್ಗೆ ಮಾತನಾಡುತ್ತಾರೆ. ಆದರೆ, ಅದು ಪ್ರಯತ್ನಿಸಿ ವಿಫಲವಾದ ಯತ್ನ. ಕೇವಲ ಮರೀಚಿಕೆ. ಈ ಹಿಂದೆಯೂ ತೃತೀಯ ರಂಗ ಇತ್ತು. ಐ.ಕೆ. ಗುಜ್ರಾಲ್, ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದರು. ಆದರೆ ದೀರ್ಘ ಅವಧಿಗೆ ಆಡಳಿತ ನಡೆಸಲು ಅವರಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಎಲ್ಲರನ್ನೂ ನಿಯಂತ್ರಿಸುವ ಸಾಮರ್ಥ್ಯ ಅವರಿಗೆ ಇರಲಿಲ್ಲ’ ಎಂದು ನಾಯ್ಡು ಹೇಳಿದ್ದಾರೆ.<br /> <br /> <strong>ಮತದಾರರ ತಲುಪಲು ಹೋಳಿ ರಹದಾರಿ<br /> ಕೋಲ್ಕತ್ತ (ಪಿಟಿಐ): </strong>ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಮತದಾರರ ಜೊತೆ ಸಂಪರ್ಕ ಸಾಧಿಸಲು ಬಳಸಿಕೊಂಡರು.<br /> <br /> ಪಶ್ಚಿಮ ಬಂಗಾಳದಲ್ಲಿ ಹೋಳಿಯನ್ನು ‘ದೋಲಿಜಾತ್ರೆ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ಹಾಡು, ನೃತ್ಯಗಳೂ ನಡೆಯುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಪಿಟಿಐ): </strong>ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರ ನೂತನ ‘ಜೈ ಸಮೈಕ್ಯ ಆಂಧ್ರ’ ಪಕ್ಷದ ಚಿಹ್ನೆ ಪಾದರಕ್ಷೆ ಎಂದು ಘೋಷಿಸಲಾಗಿದೆ.<br /> <br /> ವಿಶಾಖಪಟ್ಟಣದಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ರೆಡ್ಡಿ ಅವರು ಈ ವಿಷಯವನ್ನು ಘೋಷಿಸಿದರು.<br /> <br /> ‘ಪಾದರಕ್ಷೆ ಚಿಹ್ನೆಗೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ’ ಎಂದು ಜೈ ಸಮೈಕ್ಯ ಆಂಧ್ರ ಪಕ್ಷದ ಮುಖಂಡರು ತಿಳಿಸಿದ್ದಾರೆ.<br /> ‘ಪಾದರಕ್ಷೆ ಸಮಾನತೆಯ ಸಂಕೇತವಾಗಿದೆ. ಧರ್ಮ, ಜಾತಿ, ವರ್ಗ ಎಂಬ ಭೇದವಿಲ್ಲದೇ ಎಲ್ಲರಿಗೂ ಸಮಾನವಾದ ರಕ್ಷಣೆ ಒದಗಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.<br /> <br /> ರೆಡ್ಡಿ ಅವರು ಶನಿವಾರ ಇಲ್ಲಿ ಐ.ಟಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿದರು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಅವರು ವಿವಿಧ ವರ್ಗಗಳೊಂದಿಗೆ ಸಮಾಲೋಚಿಸುತ್ತಿದ್ದಾರೆ.<br /> <br /> ಆಂಧ್ರ ಪ್ರದೇಶದಲ್ಲಿ ಏಪ್ರಿಲ್ 30 ಮತ್ತು ಮೇ 7ರಂದು ಲೋಕಸಭೆ ಮತ್ತು ವಿಧಾನಸಭೆಗೆ ಜೊತೆಯಲ್ಲೇ ಚುನಾವಣೆ ನಡೆಯಲಿದೆ.<br /> <br /> <strong>ಮತಪತ್ರ ಬಳಸಲು ಆಗ್ರಹ</strong><br /> <strong>ಭೋಪಾಲ್ (ಪಿಟಿಐ): </strong>ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಮ್) ಬದಲು ಮತಪತ್ರಗಳನ್ನು ಬಳಸಬೇಕೆಂದು ಕಾಂಗ್ರೆಸ್ ಸಂಸದ ಸಜ್ಜನ್ ಸಿಂಗ್ ವರ್ಮಾ ಅವರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.<br /> <br /> ‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇವಿಎಮ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಜನ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದ್ದರಿಂದ ಮತಪತ್ರಗಳನ್ನು ಬಳಸುವುದು ಒಳಿತು’ ಎಂದು ಶನಿವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.<br /> <br /> <strong>‘ಪ್ರಣಾಳಿಕೆಗೆ ಮಕ್ಕಳ ಹಕ್ಕು ಸೇರಿಸಿ</strong>’<br /> <strong>ನವದೆಹಲಿ (ಪಿಟಿಐ):</strong> ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.<br /> <br /> ಈ ಸಂಬಂಧ, ಎನ್ಸಿಪಿಸಿಆರ್ ಅಧ್ಯಕ್ಷರಾದ ಕುಶಾಲ್ ಸಿಂಗ್ ಅವರು ಸೋನಿಯಾ ಗಾಂಧಿ (ಕಾಂಗ್ರೆಸ್), ರಾಜನಾಥ್ ಸಿಂಗ್ (ಬಿಜೆಪಿ), ಮಾಯಾವತಿ (ಬಿಎಸ್ಪಿ), ಪ್ರಕಾಶ್ ಕಾರಟ್ (ಸಿಪಿಎಂ) ಸೇರಿದಂತೆ ಎಲ್ಲಾ ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.<br /> <br /> <strong>‘ತೃತೀಯ ರಂಗ ಮರೀಚಿಕೆ’</strong><br /> <strong>ಚೆನ್ನೈ(ಪಿಟಿಐ): </strong>ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗವನ್ನು ‘ಮರೀಚಿಕೆ’ ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು, ಅದು ಈ ಹಿಂದೆ ‘ಯತ್ನಿಸಿ’ ‘ವಿಫಲ’ಗೊಂಡಿರುವ ಪ್ರಯೋಗ ಎಂದು ಹೇಳಿದ್ದಾರೆ.<br /> <br /> ‘ಅವರು ತೃತೀಯ ರಂಗದ ಬಗ್ಗೆ ಮಾತನಾಡುತ್ತಾರೆ. ಆದರೆ, ಅದು ಪ್ರಯತ್ನಿಸಿ ವಿಫಲವಾದ ಯತ್ನ. ಕೇವಲ ಮರೀಚಿಕೆ. ಈ ಹಿಂದೆಯೂ ತೃತೀಯ ರಂಗ ಇತ್ತು. ಐ.ಕೆ. ಗುಜ್ರಾಲ್, ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದರು. ಆದರೆ ದೀರ್ಘ ಅವಧಿಗೆ ಆಡಳಿತ ನಡೆಸಲು ಅವರಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಎಲ್ಲರನ್ನೂ ನಿಯಂತ್ರಿಸುವ ಸಾಮರ್ಥ್ಯ ಅವರಿಗೆ ಇರಲಿಲ್ಲ’ ಎಂದು ನಾಯ್ಡು ಹೇಳಿದ್ದಾರೆ.<br /> <br /> <strong>ಮತದಾರರ ತಲುಪಲು ಹೋಳಿ ರಹದಾರಿ<br /> ಕೋಲ್ಕತ್ತ (ಪಿಟಿಐ): </strong>ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಮತದಾರರ ಜೊತೆ ಸಂಪರ್ಕ ಸಾಧಿಸಲು ಬಳಸಿಕೊಂಡರು.<br /> <br /> ಪಶ್ಚಿಮ ಬಂಗಾಳದಲ್ಲಿ ಹೋಳಿಯನ್ನು ‘ದೋಲಿಜಾತ್ರೆ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ಹಾಡು, ನೃತ್ಯಗಳೂ ನಡೆಯುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>