<p><strong>ಬೆಹ್ರಾಂಪುರ (ಒಡಿಶಾ):</strong> ಪ್ರತಿಯೊಬ್ಬ ರಾಜಕಾರಣಿಗೂ ಚುನಾವಣೆಯೆಂದರೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯೇ. ಆದರೆ ಬೆಹ್ರಾಂಪುರದ ಕೆ. ಶ್ಯಾಮ್ ಬಾಬು ಸುಬುದ್ಧಿಗೆ ಹಾಗಲ್ಲ.<br /> <br /> ಸುಬುದ್ಧಿ 27 ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಒಮ್ಮೆಯೂ ಅವರು ಗೆದ್ದಿಲ್ಲ. ಹಾಗಂತ ಅವರೇನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸಿಲ್ಲ. ಯಾಕೆಂದರೆ ಚುನಾವಣೆಗೆ ನಿಲ್ಲದೇ ಇದ್ದರೆ ಅವರಿಗೆ ಕೈಕೈ ಹಿಸುಕಿಕೊಳ್ಳುವಂತಾಗುತ್ತದೆ. ಸ್ಪರ್ಧಿಸುವುದು ಅವರಿಗೆ ಹವ್ಯಾಸ.<br /> <br /> 78 ವರ್ಷದ ಸುಬುದ್ಧಿ ಈ ಬಾರಿ ಎರಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಬೆಹ್ರಾಂಪುರ ಮತ್ತು ಅಸ್ಕ ಅವರ ಈ ಬಾರಿಯ ಕ್ಷೇತ್ರಗಳು. ಏಪ್ರಿಲ್ 10ರಂದು ನಡೆಯುವ ಚುನಾವಣೆಗೆ ಅವರು ತಮ್ಮದೇ ಶೈಲಿಯಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ.<br /> <br /> ದೇಶದಲ್ಲಿ ಯಾರೂ ಸ್ಪರ್ಧಿಸದಿರುವಷ್ಟು ಬಾರಿ ಚುನಾವಣೆಗೆ ನಿಲ್ಲಬೇಕು ಎಂಬುದು ಶ್ಯಾಮ್ ಬಾಬು ಸುಬುದ್ಧಿ ಗುರಿ.<br /> ‘ಚುನಾವಣೆಗೆ ಸ್ಪರ್ಧಿಸುವಾಗ ಗೆಲ್ಲಬೇಕು ಎಂಬುದೇ ಉದ್ದೇಶ. ಎಲ್ಲ ರಾಜಕಾರಣಿಗಳ ಬಗ್ಗೆಯೂ ಜನರಿಗೆ ಭ್ರಮನಿರಸನವಾಗಿದೆ. ಹಾಗಾಗಿ ಈ ಬಾರಿ ನಾನು ಗೆಲ್ಲುವ ಸಾಧ್ಯತೆಯೇ ಅಧಿಕ’ ಎಂದು ಸುಬುದ್ಧಿ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ.<br /> <br /> 10 ವಿಧಾನಸಭೆ ಮತ್ತು 17 ಲೋಕಸಭೆ ಚುನಾವಣೆಯಲ್ಲಿ ಒಮ್ಮೆಯೂ ಸುಬುದ್ಧಿಗೆ ಠೇವಣಿ ದೊರೆತಿಲ್ಲ. ಆದರೂ ಅವರು ಎದೆಗುಂದಿಲ್ಲ. ಚುನಾವಣೆ ಪ್ರಕ್ರಿಯೆಯನ್ನು ಸರಿಪಡಿಸುವುದು ತನ್ನ ಉದ್ದೇಶ ಎಂದು ಈ ಹೋಮಿಯೋಪಥಿ ವೈದ್ಯ ಹೇಳಿದ್ದಾರೆ.<br /> <br /> ಕೊನೆಯುಸಿರಿರುವ ತನಕ ಸ್ಪರ್ಧಿಸುತ್ತೇನೆ ಎಂಬ ಪ್ರತಿಜ್ಞೆಯನ್ನೂ ಅವರು ಮಾಡಿದ್ದಾರೆ. ಮೊದಲ ಬಾರಿ ಅವರು ಚುನಾವಣೆಗೆ ನಿಂತಿದ್ದು 1957ರಲ್ಲಿ. ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್, ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರಂತಹ ಘಟಾನುಘಟಿ ನಾಯಕರ ವಿರುದ್ಧವೂ ಸುಬುದ್ಧಿ ಸ್ಪರ್ಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಹ್ರಾಂಪುರ (ಒಡಿಶಾ):</strong> ಪ್ರತಿಯೊಬ್ಬ ರಾಜಕಾರಣಿಗೂ ಚುನಾವಣೆಯೆಂದರೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯೇ. ಆದರೆ ಬೆಹ್ರಾಂಪುರದ ಕೆ. ಶ್ಯಾಮ್ ಬಾಬು ಸುಬುದ್ಧಿಗೆ ಹಾಗಲ್ಲ.<br /> <br /> ಸುಬುದ್ಧಿ 27 ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಒಮ್ಮೆಯೂ ಅವರು ಗೆದ್ದಿಲ್ಲ. ಹಾಗಂತ ಅವರೇನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸಿಲ್ಲ. ಯಾಕೆಂದರೆ ಚುನಾವಣೆಗೆ ನಿಲ್ಲದೇ ಇದ್ದರೆ ಅವರಿಗೆ ಕೈಕೈ ಹಿಸುಕಿಕೊಳ್ಳುವಂತಾಗುತ್ತದೆ. ಸ್ಪರ್ಧಿಸುವುದು ಅವರಿಗೆ ಹವ್ಯಾಸ.<br /> <br /> 78 ವರ್ಷದ ಸುಬುದ್ಧಿ ಈ ಬಾರಿ ಎರಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಬೆಹ್ರಾಂಪುರ ಮತ್ತು ಅಸ್ಕ ಅವರ ಈ ಬಾರಿಯ ಕ್ಷೇತ್ರಗಳು. ಏಪ್ರಿಲ್ 10ರಂದು ನಡೆಯುವ ಚುನಾವಣೆಗೆ ಅವರು ತಮ್ಮದೇ ಶೈಲಿಯಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ.<br /> <br /> ದೇಶದಲ್ಲಿ ಯಾರೂ ಸ್ಪರ್ಧಿಸದಿರುವಷ್ಟು ಬಾರಿ ಚುನಾವಣೆಗೆ ನಿಲ್ಲಬೇಕು ಎಂಬುದು ಶ್ಯಾಮ್ ಬಾಬು ಸುಬುದ್ಧಿ ಗುರಿ.<br /> ‘ಚುನಾವಣೆಗೆ ಸ್ಪರ್ಧಿಸುವಾಗ ಗೆಲ್ಲಬೇಕು ಎಂಬುದೇ ಉದ್ದೇಶ. ಎಲ್ಲ ರಾಜಕಾರಣಿಗಳ ಬಗ್ಗೆಯೂ ಜನರಿಗೆ ಭ್ರಮನಿರಸನವಾಗಿದೆ. ಹಾಗಾಗಿ ಈ ಬಾರಿ ನಾನು ಗೆಲ್ಲುವ ಸಾಧ್ಯತೆಯೇ ಅಧಿಕ’ ಎಂದು ಸುಬುದ್ಧಿ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ.<br /> <br /> 10 ವಿಧಾನಸಭೆ ಮತ್ತು 17 ಲೋಕಸಭೆ ಚುನಾವಣೆಯಲ್ಲಿ ಒಮ್ಮೆಯೂ ಸುಬುದ್ಧಿಗೆ ಠೇವಣಿ ದೊರೆತಿಲ್ಲ. ಆದರೂ ಅವರು ಎದೆಗುಂದಿಲ್ಲ. ಚುನಾವಣೆ ಪ್ರಕ್ರಿಯೆಯನ್ನು ಸರಿಪಡಿಸುವುದು ತನ್ನ ಉದ್ದೇಶ ಎಂದು ಈ ಹೋಮಿಯೋಪಥಿ ವೈದ್ಯ ಹೇಳಿದ್ದಾರೆ.<br /> <br /> ಕೊನೆಯುಸಿರಿರುವ ತನಕ ಸ್ಪರ್ಧಿಸುತ್ತೇನೆ ಎಂಬ ಪ್ರತಿಜ್ಞೆಯನ್ನೂ ಅವರು ಮಾಡಿದ್ದಾರೆ. ಮೊದಲ ಬಾರಿ ಅವರು ಚುನಾವಣೆಗೆ ನಿಂತಿದ್ದು 1957ರಲ್ಲಿ. ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್, ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರಂತಹ ಘಟಾನುಘಟಿ ನಾಯಕರ ವಿರುದ್ಧವೂ ಸುಬುದ್ಧಿ ಸ್ಪರ್ಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>