‘ಶಾಸಕ ಮುನಿರತ್ನ ಅವರ ಆಪ್ತ ಬಳಗದಲ್ಲಿ ಯಾರಬ್ ಗುರುತಿಸಿಕೊಂಡು ಅವರ ಬೆಂಬಲಿಗರಾಗಿ ಕ್ಷೇತ್ರದಲ್ಲಿ ಪರಿಚಿತರು. ಏಪ್ರಿಲ್ 30ರಂದು ಚುನಾವಣೆ ಪ್ರಚಾರದ ವೇಳೆ ಕರಪತ್ರವು ನನಗೆ ದೊರಕಿದೆ. ಚುನಾವಣೆ ವೇಳೆ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆದಿದೆ. ಕಾಂಗ್ರೆಸ್ ನಾಯಕರ ಜತೆಗೆ ದುರುದ್ದೇಶ ಪೂರ್ವಕವಾಗಿ ಪಾಕಿಸ್ತಾನದ ಧ್ವಜವನ್ನು ಮುದ್ರಿಸಲಾಗಿದೆ. ಸ್ವಯಂ ಘೋಷಿತವಾಗಿ ಯಾರಬ್ ಕಾಂಗ್ರೆಸ್ ಬೆಂಬಲಿತನೆಂದು ಘೋಷಿಸಿಕೊಂಡು, ನನಗೆ ಬೆಂಬಲ ನೀಡುವುದಾಗಿ ಕರಪತ್ರದಲ್ಲಿ ಹೇಳಿಕೊಂಡಿದ್ಧಾರೆ. ಕರಪತ್ರ ಮುದ್ರಿಸಿ ಹಂಚಿರುವ ಯಾರಬ್, ಇದಕ್ಕೆ ಪ್ರೇರಣೆ ನೀಡಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ವೇಲುನಾಯ್ಕರ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕುಸುಮಾ ಉಲ್ಲೇಖಿಸಿದ್ದಾರೆ.